ಆ್ಯಪ್ನಗರ

ಬಳ್ಳಾರಿ: ಬೆಡ್‌ಗಳಿಲ್ಲದೆ ನೆಲದ ಮೇಲೆ ಮಲಗಿರುವ ಸೋಂಕಿತರು!

ಸೋಂಕಿತರ ಸಂಖ್ಯೆ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿಜಿಲ್ಲಾಡಳಿತ ಸಾವಿರಾರು ಬೆಡ್‌ಗಳ ವ್ಯವಸ್ಥೆ ಮಾಡಿದೆ. ಬೆಡ್‌ಗಳ ಕೊರತೆಯಿಲ್ಲಎಂದೇ ಹೇಳುತ್ತಿದೆ. ಆದರೆ, ರೋಗಿಗಳು ಬೆಡ್‌ಗಳಿಗಾಗಿ ಪರದಾಡುತ್ತಿರುವುದು ಅಚ್ಚರಿ ಮೂಡಿಸಿದೆ.

Vijaya Karnataka Web 15 Aug 2020, 6:34 pm
ಬಳ್ಳಾರಿ: ಜಿಲ್ಲೆಯಲ್ಲಿ ದಿನದಿಂದ ದಿನಕ್ಕೆ ಕೊರೊನಾ ಸೋಂಕಿತರ ಸಂಖ್ಯೆ ಗಣನೀಯ ಹೆಚ್ಚುತ್ತಿದ್ದು, ನಗರದ ವಿಮ್ಸ್‌ ಆಸ್ಪತ್ರೆಗೆ ದಾಖಲಾದ ಕೊರೊನಾ ಸೋಂಕಿತರು ಬೆಡ್‌ಗಳ ಕೊರತೆಯಿಂದ ನೆಲದ ಮೇಲೆ ಮಲಗಿ ಚಿಕಿತ್ಸೆ ಪಡೆಯುವಂತಾಗಿದೆ.
Vijaya Karnataka Web ಸಾಂದರ್ಭಿಕ
ಸಾಂದರ್ಭಿಕ


ನಿತ್ಯವೂ ನೂರಾರು ಸಂಖ್ಯೆಯಲ್ಲಿ ದಾಖಲಾಗುವ ಸೋಂಕಿತರಿಗೆ ಬೆಡ್‌ಗಳು ಸಿಗದೇ ಪರದಾಡುವ ಪರಿಸ್ಥಿತಿಯಿದೆ. ನಗರದ ತಾಳೂರು ರಸ್ತೆಯ ಮಹಾನಂದ ಕೊಟ್ಟಂ ಪ್ರದೇಶದ ನಿವಾಸಿಯೊಬ್ಬರಿಗೆ ಗುರುವಾರ ಕೊರೊನಾ ಸೋಂಕು ದೃಢಪಟ್ಟಿದ್ದು, ಚಿಕಿತ್ಸೆಗಾಗಿ ವಿಮ್ಸ್‌ ಆಸ್ಪತ್ರೆಗೆ ದಾಖಲಿಸಲಾಗಿದೆ. ಆಸ್ಪತ್ರೆಯಲ್ಲಿಬೆಡ್‌ಗಳ ಕೊರತೆ ಎದುರಾಗಿದ್ದರಿಂದ ಕೊರೊನಾ ಸೋಂಕಿತತರನ್ನು ನೆಲದ ಮೇಲೆ ಮಲಗಿಸಿರುವುದು ಈ ವೇಳೆ ಬೆಳಕಿಗೆ ಬಂದಿದೆ.

ಸೋಂಕಿತರ ಸಂಖ್ಯೆ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿಜಿಲ್ಲಾಡಳಿತ ಸಾವಿರಾರು ಬೆಡ್‌ಗಳ ವ್ಯವಸ್ಥೆ ಮಾಡಿದೆ. ಬೆಡ್‌ಗಳ ಕೊರತೆಯಿಲ್ಲಎಂದೇ ಹೇಳುತ್ತಿದೆ. ಆದರೆ, ರೋಗಿಗಳು ಬೆಡ್‌ಗಳಿಗಾಗಿ ಪರದಾಡುತ್ತಿರುವುದು ಅಚ್ಚರಿ ಮೂಡಿಸಿದೆ.

ವಿಮ್ಸ್‌ ನಿರ್ದೇಶಕ ಡಾ.ದೇವಾನಂದ ಪ್ರತಿಕ್ರಿಯಿಸಿ, ''ಕೊರೊನಾ ಸೋಂಕಿತ ವ್ಯಕ್ತಿ ಆಸ್ಪತ್ರೆಗೆ ಬರುತ್ತಿದ್ದಂತೆ ಕೆಲ ಕಾಲ ಬೆಡ್‌ ಸಮಸ್ಯೆಯಾದ ಹಿನ್ನೆಲೆ ಅವರು ನೆಲದ ಮೇಲೆ ಮಲಗಿದ್ದರು. ಬಳಿಕ ಹೊಸ ಬೆಡ್‌ಗಳನ್ನು ಹಾಕಿಸಿ, ಅವರನ್ನು ಅಲ್ಲಿಗೆ ಸ್ಥಳಾಂತರಿಸಲಾಗಿದೆ. ಸದ್ಯ ಅವರಿಗೆ ಚಿಕಿತ್ಸೆ ಮುಂದುವರಿಸಲಾಗಿದೆ'' ಎಂದು ಹೇಳಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ