ಆ್ಯಪ್ನಗರ

ವೆಸ್ಕೋ ಫೌಂಡೇಶನ್‌ನಿಂದ ನೋಟ್‌ ಪುಸ್ತಕ, ಪರಿಕರ ಉಚಿತ ವಿತರಣೆ

ಆರ್ಥಿಕ, ಶೈಕ್ಷ ಣಿಕ, ಸಾಮಾಜಿಕವಾಗಿ ಹಿಂದುಳಿದ ಗ್ರಾಮಗಳ ವಿದ್ಯಾರ್ಥಿಗಳ ಏಳಿಗೆ ಮತ್ತು ಅವರನ್ನು ಮುಖ್ಯ ವಾಹಿನಿಗೆ ಸಮಾಜದ ಪ್ರತಿ ವ್ಯಕ್ತಿಯ ಜವಾಬ್ದಾರಿಯಾಗಿದೆ ಎಂದು ಬಿಇಒ ಡಾ.ಐ.ಆರ್‌.ಅಕ್ಕಿ ಹೇಳಿದರು.

Vijaya Karnataka 13 Jul 2019, 5:00 am
ಸಂಡೂರು : ಆರ್ಥಿಕ, ಶೈಕ್ಷ ಣಿಕ, ಸಾಮಾಜಿಕವಾಗಿ ಹಿಂದುಳಿದ ಗ್ರಾಮಗಳ ವಿದ್ಯಾರ್ಥಿಗಳ ಏಳಿಗೆ ಮತ್ತು ಅವರನ್ನು ಮುಖ್ಯ ವಾಹಿನಿಗೆ ಸಮಾಜದ ಪ್ರತಿ ವ್ಯಕ್ತಿಯ ಜವಾಬ್ದಾರಿಯಾಗಿದೆ ಎಂದು ಬಿಇಒ ಡಾ.ಐ.ಆರ್‌.ಅಕ್ಕಿ ಹೇಳಿದರು.
Vijaya Karnataka Web notebook tool free distribution from wesco foundation
ವೆಸ್ಕೋ ಫೌಂಡೇಶನ್‌ನಿಂದ ನೋಟ್‌ ಪುಸ್ತಕ, ಪರಿಕರ ಉಚಿತ ವಿತರಣೆ


ತಾಲೂಕಿನ ಸುಶೀಲಾನಗರದ ಸ.ಹಿ.ಪ್ರಾ.ಶಾಲೆಯಲ್ಲಿ ವೆಸ್ಕೋ ಢೌಂಡೇಷನ್‌ವತಿಯಿಂದ ತಾಲೂಕಿನ 41 ಶಾಲೆ, ಕಾಲೇಜು ವಿದ್ಯಾರ್ಥಿಗಳಿಗೆ 21 ಲಕ್ಷ ರೂ. ಗೂ ಹೆಚ್ಚಿನ ನೋಟ್‌ ಪುಸ್ತಕ, ಬ್ಯಾಗ್‌ ಸೇರಿ ಕಲಿಕಾ ಸಾಮಗ್ರಿ ಉಚಿತ ವಿತರಣೆ ಕಾರ್ಯಕ್ರಮವನ್ನು ಉದ್ದೇಶಿಸಿ ಶುಕ್ರವಾರ ಮಾತನಾಡಿದರು.

ಸರಕಾರ ಶಾಲೆಗಳಿಗೆ ಬಿಸಿಯೂಟ, ಹಾಲು, ಶೂ, ಸೈಕಲ್‌, ಸುಸಜ್ಜಿತ ಕೊಠಡಿಗಳು, ನುರಿತ ಶಿಕ್ಷ ಕರನ್ನು ಗ್ರಾಮೀಣ ಪ್ರದೇಶದಲ್ಲಿ ನೀಡಿದ್ದು ಸದ್ಭಳಕೆ ಮಾಡಿಕೊಳ್ಳಬೇಕು. ಗ್ರಾಮದಲ್ಲಿ ಮುಂದಿನ ಶೈಕ್ಷ ಣಿಕ ವರ್ಷದಲ್ಲಿ ಆರಂಭವಾಗಲಿರುವ ಸರಕಾರಿ ಪ್ರೌಢಶಾಲೆಗೆ ವೈದ್ಯಕೀಯ ಶಿಕ್ಷ ಣ ಸಚಿವ ಈ.ತುಕಾರಾಮ್‌ರ ಆಶಯದಂತೆ ಈಗಾಗಲೆ ಪೂರ್ಣ ಪ್ರಮಾಣದ ಕಟ್ಟಡ ನಿರ್ಮಿಸಲಾಗಿದೆ. ಕೆಲ ದಿನಗಳಲ್ಲಿ ಕಟ್ಟಡ ಲೋಕಾರ್ಪಣೆಯಾಗಲಿದೆ. ಯಾವುದೇ ಮಗು ಶಾಲೆಯಿಂದ ಹೊರಗುಳಿಯಬಾರದು. ಉನ್ನತ ಶಿಕ್ಷ ಣ ಪಡೆದು ದೇಶದ ಸಾಧಕರ ಪಟ್ಟಿಯಲ್ಲಿ ಸ್ಥಾನ ಪಡೆಯಬೇಕು. ಶಿಕ್ಷ ಕರಲ್ಲಿ ಪೂರ್ಣ ಪ್ರಮಾಣದ ಅರ್ಪಣೆ ಮನೋಭಾವ ಬೆಳೆಯಬೇಕು, ಬೌದ್ಧಿಕ ವಿಕಾಸ ಹೊಂದಿದಲ್ಲಿ ವಿದ್ಯಾರ್ಥಿಗಳ ಸ್ಪಷ್ಟ ಕಲಿಕೆಗೆ ಅನುಕೂಲವಾಗುತ್ತದೆ. ವಿದ್ಯಾರ್ಥಿನಿಯರ ಮಾಸಿಕ ಖುತು ಸ್ರಾವದ ಸಂದರ್ಭದಲ್ಲಿ ಶುಚಿತ್ವ ಕಾಪಾಡಿಕೊಳ್ಳುವ ಕುರಿತು ಮಾಹಿತಿ ನೀಡಲು 10 ಜನ ಮಹಿಳಾ ಕಾರ್ಯಕರ್ತರನ್ನು ವೆಸ್ಕೋ ಫೌಂಡೇಶನ್‌ ನೇಮಿಸಿದೆ ಎಂದು ಸ್ಮರಿಸಿದರು.

ಬಿಸಿಯೂಟ ಯೋಜನೆ ಎಡಿ ತೇನ್‌ಸಿಂಗ್‌ ನಾಯ್ಕ ಮಾತನಾಡಿ, ಮೀನು ತಿನ್ನುವುದನ್ನು ಕಲಿಸುವುದಕ್ಕಿಂದ ಮೀನು ಹಿಡಿಯುವುದನ್ನು ಕಲಿಸಬೇಕು ಎಂಬ ಮಾತಿನಂತೆ ವೆಸ್ಕೋ ಫೌಂಡೇಶನ್‌ ವಿದ್ಯಾರ್ಥಿಗಳ ಶೈಕ್ಷ ಣಿಕ ಅನುಕೂಲಕ್ಕಾಗಿ ನೀಡಿದ ಪರಿಕರಗಳು ಉಪಯುಕ್ತವಾಗಿವೆ. ಇರುವ ಉತ್ತಮ ಸೌಲಭ್ಯಗಳನ್ನು ಬಳಕೆ ಮಾಡಿಕೊಂಡು ಜೀವನದಲ್ಲಿ ಮುಂದೆ ಬರಬೇಕು ಎಂದರು.

ಈ ಸಂದರ್ಭದಲ್ಲಿ ತಾ.ಪಂ.ಉಪಾಧ್ಯಕ್ಷೆ ಗಂಗಾಬಾಯಿ ಚಂದ್ರಾನಾಯ್ಕ, ಫೌಂಡೇಶನ್‌ವ ವ್ಯವಸ್ಥಾಪಕ ಶಶಿಧರ್‌, ಸಹಾಯಕ ವ್ಯವಸ್ಥಾಪಕ ಚನ್ನಬಸಪ್ಪ, ಅಧಿಕಾರಿ ಬೊಮ್ಮಯ್ಯ, ಗ್ರಾ.ಪಂ.ಅಧ್ಯಕ್ಷೆ ರತ್ನಾಬಾಯಿ, ಉಪಾಧ್ಯಕ್ಷ ರಾಘವೇಂದ್ರ ನಾಯ್ಕ, ಎಸ್ಡಿಎಂಸಿ ಅಧ್ಯಕ್ಷ ಗೋಪಿನಾಯ್ಕ, ಪಿಡಿಒ ದೌಲಾಸಾಬ್‌, ಶಾಲೆಯ ಬಡ್ತಿ ಮುಖ್ಯಗುರು ರತ್ನಾಬಾಯಿ ಸೇರಿದಂತೆ ಸಹ ಶಿಕ್ಷ ಕರು, ವಿದ್ಯಾರ್ಥಿಗಳು, ಗ್ರಾಮಸ್ಥರು ಇತರರಿದ್ದರು. ಶಿಕ್ಷ ಕರಾದ ಅನಿತಾ, ಪಾರ್ವತಮ್ಮ, ಬಸವರಾಜ, ಬಿ.ಕಲ್ಪನಾ ನಿರ್ವಹಿಸಿದರು.

.........................

ಬಿಎಲ್‌ವೈ 12 ಎಸ್ಡಿಆರ್‌ 1: ಸಂಡೂರಿನ ಸುಶೀಲಾನಗರದಲ್ಲಿ ವೆಸ್ಕೋ ಫೌಂಡೇಶನ್‌ವತಿಯಿಂದ ನಾನಾ ಶಾಲೆ ವಿದ್ಯಾರ್ಥಿಗಳಿಗೆ 21 ಲಕ್ಷ ರೂ. ವೆಚ್ಚದ ನೋಟ್‌ಪುಸ್ತಕ, ಬ್ಯಾಗ್‌ ಸೇರಿ ನಾನಾ ಪರಿಕರಗಳನ್ನು ಉಚಿತವಾಗಿ ವಿತರಿಸಲಾಯಿತು. ಬಿಇಒ ಡಾ.ಐ.ಆರ್‌.ಅಕ್ಕಿ, ಫೌಂಡೇಶನ್‌ವ ವ್ಯವಸ್ಥಾಪಕ ಶಶಿಧರ್‌, ಸಹಾಯಕ ವ್ಯವಸ್ಥಾಪಕ ಚನ್ನಬಸಪ್ಪ ಸೇರಿದಂತೆ ಇತರರಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ