ಆ್ಯಪ್ನಗರ

ಸಾಲುಮರ ತೆರವು ವಿರೋಧಿಸಿ ಧರಣಿ

ಪಟ್ಟಣದ ಕೊಟ್ಟೂರು ರಸ್ತೆಯಿಂದ ರಾಮನಗರ ಬಸ್‌ನಿಲ್ದಾಣದವರೆಗಿನ ರಸ್ತೆ ವಿಸ್ತರಣೆ ಹಿನ್ನೆಲೆಯಲ್ಲಿ ಮಾರ್ಗದ ಸಾಲುಮರಗಳನ್ನು ತೆರವುಗೊಳಿಸದಂತೆ ಒತ್ತಾಯಿಸಿ ಗ್ರೀನ್‌ಎಚ್‌ಬಿಎಚ್‌ ಸಂಘಟನೆ ಪದಾಧಿಕಾರಿಗಳು ಪುರಸಭೆ ಎದುರು ಬುಧವಾರ ಧರಣಿ ನಡೆಸಿದರು.

Vijaya Karnataka 6 Sep 2018, 5:00 am
ಹಗರಿಬೊಮ್ಮನಹಳ್ಳಿ : ಪಟ್ಟಣದ ಕೊಟ್ಟೂರು ರಸ್ತೆಯಿಂದ ರಾಮನಗರ ಬಸ್‌ನಿಲ್ದಾಣದವರೆಗಿನ ರಸ್ತೆ ವಿಸ್ತರಣೆ ಹಿನ್ನೆಲೆಯಲ್ಲಿ ಮಾರ್ಗದ ಸಾಲುಮರಗಳನ್ನು ತೆರವುಗೊಳಿಸದಂತೆ ಒತ್ತಾಯಿಸಿ ಗ್ರೀನ್‌ಎಚ್‌ಬಿಎಚ್‌ ಸಂಘಟನೆ ಪದಾಧಿಕಾರಿಗಳು ಪುರಸಭೆ ಎದುರು ಬುಧವಾರ ಧರಣಿ ನಡೆಸಿದರು.
Vijaya Karnataka Web BLR-BLY5HBH3


ಸಂಘಟನೆಯ ಅಧ್ಯಕ್ಷ ಬಿ.ಎಸ್‌.ಸುಭಾಷ್‌ ಮಾತನಾಡಿ, ಅಭಿವೃದ್ಧಿ ಭರದಲ್ಲಿ ಸಮೃದ್ಧವಾಗಿ ಬೆಳೆದ ನೂರಾರು ಮರಗಳನ್ನು ತೆರವುಗೊಳಿಸುವುದು ಸೂಕ್ತವಲ್ಲ. ಪಟ್ಟಣದ ಅತ್ಯಂತ ಹೆಚ್ಚು ಮರಗಳನ್ನು ಹೊಂದಿರುವ ರಸ್ತೆ ಇದಾಗಿದ್ದು, ಬೇಸಿಗೆಯಲ್ಲಿ ನೆರಳು ಚಪ್ಪರದಂತಿವೆ. ಈ ಹಿಂದೆ ಸಮುದಾಯದ ಸಹಭಾಗಿತ್ವದಲ್ಲಿ ಪ್ರಕಾಶಕ ಚನ್ನಬಸವಣ್ಣ ನೆಟ್ಟ 40 ವರ್ಷದ ಮರಗಳು ಇದೀಗ ರಸ್ತೆ ವಿಸ್ತರಣೆಗೆ ತಲೆದಂಡ ನೀಡುತ್ತಿವೆ. ಪಟ್ಟಣದಲ್ಲಿ ಹಸಿರೀಕರಣ ಅಗತ್ಯವಾಗಿರುವ ಹಿನ್ನೆಯಲ್ಲಿ ಸಮೃದ್ಧವಾಗಿ ಬೆಳೆದ ಮರಗಳನ್ನು ತೆರವುಗೊಳಿಸದಂತೆ ವಿಸ್ತರಣೆ ಕಾರ್ಯ ಕೈಗೆತ್ತಿಕೊಳ್ಳಬೇಕು ಎಂದು ಆಗ್ರಹಿಸಿದರು. ಸಂಘಟನೆಯ ಪ್ರಸಾದ್‌ಭಟ್‌, ವಿನಾಯಕ,ಎಚ್‌.ಗುರುಬಸವರಾಜ, ಚಂದ್ರಶೇಖರ್‌, ಅಶೋಕ್‌ಉಪ್ಪಾರ್‌, ನಾಗರಾಜ, ಗಿರೀಶ್‌ ರಾಥೋಡ್‌, ವೆಂಕಟೇಶ, ಬಿ.ರಮೇಶ್‌, ಮೆಕ್ಯಾನಿಕ್‌ ಬಾಬು ಇತರರಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ