ಆ್ಯಪ್ನಗರ

ಹಳ್ಳಕ್ಕೆ ಉರುಳಿಬಿದ್ದ ಲಾರಿ: ಪ್ರಯಾಣಿಕರು ಪಾರು

ತಾಲೂಕಿನ ರಾರಾವಿ ಗ್ರಾಮದ ಬಳಿಯಿರುವ ಯಲ್ಲಮ್ಮನ ಹಳ್ಳ ಮತ್ತು ಲಕ್ಷ ್ಮಮ್ಮನ ಹಳ್ಳ, ಭಾನುವಾರ ರಾತ್ರಿ ಸುರಿದ ಮಳೆಯಿಂದ ತುಂಬಿಬಂದು, ನೆಲಮಟ್ಟದ ಸೇತುವೆ ಮುಳುಗಿದ್ದರಿಂದ, ಸರಕು ತುಂಬಿಕೊಂಡು ಹೊರಟಿದ್ದ ಲಾರಿಗಳು ಉರುಳಿಬಿದ್ದ ಘಟನೆ ಸೋಮವಾರ ಬೆಳಗ್ಗೆ ನಡೆದಿದೆ.

Vijaya Karnataka 25 Jun 2019, 5:00 am
ಸಿರುಗುಪ್ಪ: ತಾಲೂಕಿನ ರಾರಾವಿ ಗ್ರಾಮದ ಬಳಿಯಿರುವ ಯಲ್ಲಮ್ಮನ ಹಳ್ಳ ಮತ್ತು ಲಕ್ಷ ್ಮಮ್ಮನ ಹಳ್ಳ, ಭಾನುವಾರ ರಾತ್ರಿ ಸುರಿದ ಮಳೆಯಿಂದ ತುಂಬಿಬಂದು, ನೆಲಮಟ್ಟದ ಸೇತುವೆ ಮುಳುಗಿದ್ದರಿಂದ, ಸರಕು ತುಂಬಿಕೊಂಡು ಹೊರಟಿದ್ದ ಲಾರಿಗಳು ಉರುಳಿಬಿದ್ದ ಘಟನೆ ಸೋಮವಾರ ಬೆಳಗ್ಗೆ ನಡೆದಿದೆ.
Vijaya Karnataka Web orry fallen brook passengers escaped
ಹಳ್ಳಕ್ಕೆ ಉರುಳಿಬಿದ್ದ ಲಾರಿ: ಪ್ರಯಾಣಿಕರು ಪಾರು


ಖಾಸಗಿ ಬಸ್‌ ಚಾಲಕರೊಬ್ಬರು ಹಳ್ಳದ ನೀರಲ್ಲಿ ವಾಹನ ದಾಟಿಸಲು ಹೋಗಿ ನೀರಲ್ಲಿ ವಾಹನ ಸಿಲುಕಿದೆ. ಇದನ್ನು ಗಮನಿಸಿದ ಪ್ರತ್ಯಕ್ಷದರ್ಶಿಗಳು ಹಾಗೂ ಗ್ರಾಮಸ್ಥರು ನೆರವಿಗೆ ಧಾವಿಸಿ ಪ್ರಯಾಣಿಕರನ್ನು ರಕ್ಷಿಸಿದ ಘಟನೆ ನಡೆದಿದೆ. ಸಿರುಗುಪ್ಪದಿಂದ ನೆರೆಯ ಸೀಮಾಂಧ್ರದ ಆದೋನಿಗೆ ಸಂಪರ್ಕ ಕಲ್ಪಿಸುವ ಲಕ್ಷ ್ಮಮ್ಮ ದೇವಸ್ಥಾನ ಇರುವ ಹಿರೇಹಳ್ಳ ತುಂಬಿ ಬಂದಿದ್ದರಿಂದ ಸಂಪರ್ಕ ಕಡಿತಗೊಂಡಿದೆ. ವಿಷಯ ತಿಳಿಯುತ್ತಿದ್ದಂತೆ ಸಿರುಗುಪ್ಪ ಠಾಣೆ ಸಿಪಿಐ ಮೌನೇಶ ಮಾಲಿಪಾಟೀಲ್‌, ಪಿಎಸ್‌ಐ ಹೊಸಕೇರಪ್ಪ ಹಾಗೂ ಸಿಬ್ಬಂದಿ ಘಟನಾ ಸ್ಥಳಕ್ಕೆ ಭೇಟಿ ನೀಡಿ, ಮುಂಜಾಗೃತೆ ಕ್ರಮ ಕೈಗೊಂಡರು. ನಂತರ ಸ್ಥಳಕ್ಕೆ ತಹಸೀಲ್ದಾರ್‌ ದಯಾನಂದ ಪಾಟೀಲ್‌ ಭೇಟಿ ನೀಡಿ ಪರಿಶೀಲಿಸಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ