ಆ್ಯಪ್ನಗರ

ಪ.ಪಂ.ಚುನಾವಣೆ : ಮತಗಟ್ಟೆಗಳ ಪರಿಶೀಲನೆ

ಪಟ್ಟಣ ಪಂಚಾಯಿತಿಗೆ ನಡೆಯಲಿರುವ ಚುನಾವಣೆ ಹಿನ್ನೆಲೆಯಲ್ಲಿ ತಹಸೀಲ್ದಾರ್‌ ಮಂಜುನಾಥ.ಕೆ. ಸಿಬ್ಬಂದಿಗಳೊಂದಿಗೆ ಮತಗಟ್ಟೆಗಳ ಪರಿಶೀಲನೆ ಕಾರ್ಯವನ್ನು ಮಂಗಳವಾರ ನಡೆಸಿದರು.

Vijaya Karnataka 4 Jul 2018, 5:00 am
ಕೊಟ್ಟೂರು : ಪಟ್ಟಣ ಪಂಚಾಯಿತಿಗೆ ನಡೆಯಲಿರುವ ಚುನಾವಣೆ ಹಿನ್ನೆಲೆಯಲ್ಲಿ ತಹಸೀಲ್ದಾರ್‌ ಮಂಜುನಾಥ.ಕೆ. ಸಿಬ್ಬಂದಿಗಳೊಂದಿಗೆ ಮತಗಟ್ಟೆಗಳ ಪರಿಶೀಲನೆ ಕಾರ್ಯವನ್ನು ಮಂಗಳವಾರ ನಡೆಸಿದರು.
Vijaya Karnataka Web BLR-BLY3KTR1


2018ರ ಸೆಪ್ಟೆಂಬರ್‌ಗೆ ಪಟ್ಟಣ ಪಂಚಾಯಿತಿ ಆಡಳಿತ ಅವಧಿ ಪೂರ್ಣಗೊಳ್ಳಲಿದೆ. ಈ ಹಿನ್ನೆಲೆಯಲ್ಲಿ 20 ವಾರ್ಡ್‌ಗಳಿಗೆ ಚುನಾವಣಾ ಆಯೋಗ ಮೀಸಲಾತಿಯನ್ನು ಪ್ರಕಟಿಸಿದ್ದು, ಚುನಾವಣೆ ದಿನಾಂಕ ಪ್ರಕಟಣೆಯಷ್ಟೇ ಬಾಕಿಯಿದೆ. ಚುನಾವಣೆಗೆ ಅಗತ್ಯವಿರುವ ಎಲ್ಲ ಪೂರ್ವ ತಯಾರಿಯಲ್ಲಿ ಬಿಜಿಯಾಗಿರುವ ತಾಲೂಕು ಆಡಳಿತ 20 ವಾರ್ಡ್‌ಗಳ ವಿಂಗಡಣೆ, ಚಕ್ಕುಬಂದಿ, ಮತದಾರರ ಪಟ್ಟಿಗಳನ್ನು ಸಿದ್ಧಪಡಿಸಿದೆ. 20 ವಾರ್ಡ್‌ಗಳ ಪೈಕಿ 1400ಕ್ಕೂ ಹೆಚ್ಚು ಮತಗಳನ್ನು ಹೊಂದಿರುವ ವಾರ್ಡ್‌ಗಳನ್ನು ಗುರುತಿಸಿ, ಆ ವಾರ್ಡ್‌ಗಳಲ್ಲಿ ಎರಡು ಮತ ಕೇಂದ್ರಗಳನ್ನು ಗುರುತಿಸಿದೆ. ಎಲ್ಲ ಮತಗಟ್ಟೆಗಳಲ್ಲಿ ಚುನಾವಣಾಧಿಕಾರಿಗಳಿಗೆ ಮೂಲ ಸೌಕರ್ಯ ವ್ಯವಸ್ಥೆ ಸೇರಿ ಇತರೆ ಕಾರ್ಯಗಳ ಕುರಿತು ತಹಸೀಲ್ದಾರ್‌ ಮಂಜುನಾಥ.ಕೆ ಕಂದಾಯ ಮತ್ತು ಪಟ್ಟಣ ಪಂಚಾಯಿತಿ ಸಿಬ್ಬಂದಿಯೊಂದಿಗೆ ಪರಿಶೀಲನೆ ನಡೆಸಿದರು.

ಮತದಾರರ ಸಂಖ್ಯೆ; ಇಲ್ಲಿನ 20 ವಾರ್ಡ್‌ಗಳಲ್ಲಿರುವ 23 ಸಾವಿರ ಮತದಾರರ ಪೈಕಿ ಪರುಷ ಮತದಾರರಗಿಂತ 250 ಮಹಿಳಾ ಮತದಾರರು ಹೆಚ್ಚಿದ್ದಾರೆ. (ಪುರುಷರು 11375, ಮಹಿಳೆಯರು 11625). 1ನೇ ವಾರ್ಡ್‌ನಲ್ಲಿ 833, 2ನೇ ವಾರ್ಡ್‌ನಲ್ಲಿ 921, 3ನೇ ವಾರ್ಡ್‌ನಲ್ಲಿ 1004, 4ನೇ ವಾರ್ಡ್‌ನಲ್ಲಿ 1537, 5ನೇ ವಾರ್ಡ್‌ನಲ್ಲಿ 1187, 6ನೇ ವಾರ್ಡ್‌ನಲ್ಲಿ 1027, 7ನೇ ವಾರ್ಡ್‌ನಲ್ಲಿ 700, 8ನೇ ವಾರ್ಡ್‌ನಲ್ಲಿ 1283, 9ನೇ ವಾರ್ಡ್‌ನಲ್ಲಿ 1064, 10ನೇ ವಾರ್ಡ್‌ನಲ್ಲಿ 1488, 11ನೇ ವಾರ್ಡ್‌ನಲ್ಲಿ 633, 12ನೇ ವಾರ್ಡ್‌ನಲ್ಲಿ 1613, 13ನೇ ವಾರ್ಡ್‌ನಲ್ಲಿ 1250, 14ನೇ ವಾರ್ಡ್‌ನಲ್ಲಿ 1598, 15ನೇ ವಾರ್ಡ್‌ನಲ್ಲಿ 1846, 16ನೇ ವಾರ್ಡ್‌ನಲ್ಲಿ 579, 17ನೇ ವಾರ್ಡ್‌ನಲ್ಲಿ 879, 18ನೇ ವಾರ್ಡ್‌ನಲ್ಲಿ 1353, 19ನೇ ವಾರ್ಡ್‌ನಲ್ಲಿ 1129, 20ನೇ ವಾರ್ಡ್‌ನಲ್ಲಿ 1076 ಮತದಾರರಿದ್ದಾರೆ. ಈ ಪೈಕಿ 16ನೇ ವಾರ್ಡ್‌ ಕೇವಲ 579 ಮತದಾರರನ್ನು ಹೊಂದಿ ಸಣ್ಣ ವಾರ್ಡ್‌ ಆಗಿದ್ದರೆ, 1846 ಮತದಾರರನ್ನು ಹೊಂದಿರುವ 15ನೇ ವಾರ್ಡ್‌ ದೊಡ್ಡ ವಾರ್ಡ್‌ ಆಗಿದೆ. ಪ್ರತಿ ವಾರ್ಡ್‌ಗೆ ಒಂದು ಮತಗಟ್ಟೆ ತೆರೆಯಲಾಗಿದೆ. ಆದರೆ ಹೆಚ್ಚು ಮತದಾರರನ್ನು ಹೊಂದಿರುವ ವಾರ್ಡ್‌ ಸಂಖ್ಯೆ 4, 10, 12,14 ಮತ್ತು 15ರಲ್ಲಿ ಹೆಚ್ಚುವರಿ ಮತಗಟ್ಟೆಗಳನ್ನು ತೆರೆಯಲಾಗಿದೆ.

ಆದೇಶ: ಈಗಾಗಲೇ ಪಟ್ಟಣ ಪಂಚಾಯಿತಿಯ ಚುನಾವಣೆಗೆ ಚುನಾವಣಾಧಿಕಾರಿಗಳನ್ನು ನೇಮಕ ಮಾಡಿ ಜಿಲ್ಲಾಡಳಿತ ಆದೇಶ ಹೊರಡಿಸಿದೆ. ವಾರ್ಡ್‌ 1ರಿಂದ 10ರವರೆಗೆ ಕೂಡ್ಲಿಗಿ ತಾಲೂಕು ರೇಷ್ಮೆ ಇಲಾಖೆಯ ಸಹಾಯಕ ನಿರ್ದೇಶಕ ಸುಧೀರ್‌ ಮತ್ತು 11ರಿಂದ20ನೇ ವಾರ್ಡ್‌ಗೆ ಕೃಷಿ ಇಲಾಖೆ ಸಹಾಯಕ ನಿರ್ದೇಶಕ ಪ್ರಕಾಶ ಚುನಾವಣಾಧಿಕಾರಿಗಳಾಗಿ ಕಾರ್ಯ ನಿರ್ವಹಿಸುವರು. ಚುನಾವಣೆ ನಂತರ ಮತ ಎಣಿಕೆ ಕಾರ್ಯವನ್ನು ಇದೇ ಮೊದಲ ಬಾರಿಗೆ ಪಟ್ಟಣದ ತಹಸೀಲ್ದಾರರ ಕಚೇರಿಯಲ್ಲಿ ನಡೆಸಲಾಗುತ್ತಿದೆ.


ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ