ಆ್ಯಪ್ನಗರ

ಶ್ರೀಗಳ ದಂಡು, ಕಳೆಗಟ್ಟಿದ ರೆಡ್ಡಿ ನಿವಾಸ

ಮಾಜಿ ಸಚಿವ ಜನಾರ್ದನ ರೆಡ್ಡಿ ನಿವಾಸಕ್ಕೆ ಕಾಶಿ ಪೀಠದ ಜಗದ್ಗುರು ಡಾ.ಶ್ರೀ ಚಂದ್ರಶೇಖರ್‌ ಶಿವಾಚಾರ್ಯ ಸ್ವಾಮೀಜಿ ಹಾಗೂ ಶ್ರೀಶೈಲ ಪೀಠದ ಜಗದ್ಗುರು ಚನ್ನ ಸಿದ್ಧರಾಮ ಪಂಡಿತರಾಧ್ಯ ಶಿವಾಚಾರ್ಯ ಸ್ವಾಮಿಜಿ ಗುರುವಾರ ಭೇಟಿ ನೀಡಿದರು.

Vijaya Karnataka 21 Jun 2019, 5:00 am
ಬಳ್ಳಾರಿ : ಮಾಜಿ ಸಚಿವ ಜನಾರ್ದನ ರೆಡ್ಡಿ ನಿವಾಸಕ್ಕೆ ಕಾಶಿ ಪೀಠದ ಜಗದ್ಗುರು ಡಾ.ಶ್ರೀ ಚಂದ್ರಶೇಖರ್‌ ಶಿವಾಚಾರ್ಯ ಸ್ವಾಮೀಜಿ ಹಾಗೂ ಶ್ರೀಶೈಲ ಪೀಠದ ಜಗದ್ಗುರು ಚನ್ನ ಸಿದ್ಧರಾಮ ಪಂಡಿತರಾಧ್ಯ ಶಿವಾಚಾರ್ಯ ಸ್ವಾಮಿಜಿ ಗುರುವಾರ ಭೇಟಿ ನೀಡಿದರು.
Vijaya Karnataka Web panchapreet jagadgurus meet reddy home
ಶ್ರೀಗಳ ದಂಡು, ಕಳೆಗಟ್ಟಿದ ರೆಡ್ಡಿ ನಿವಾಸ


ನಗರದಲ್ಲಿನ ಕಾರ್ಯಕ್ರಮವೊಂದಕ್ಕೆ ಆಗಮಿಸಿದ್ದ ಜಗದ್ಗುರುಗಳು ರೆಡ್ಡಿ ಕುಟುಂಬದ ಆಹ್ವಾನದ ಮೇರೆಗೆ ಅವರ ನಿವಾಸಕ್ಕೆ ತೆರಳಿದರು. ರೆಡ್ಡಿ ಅವರ ಕುಟಂಬಸ್ಥರು ಶ್ರೀಗಳನ್ನು ಸ್ವಾಗತಿಸಿಕೊಂಡು ಪಾದ ಪೂಜೆ ನೆರವೇರಿಸಿದರು.

ಕಾಶಿ ಪೀಠದ ಜಗದ್ಗುರು ಡಾ.ಶ್ರೀ.ಚಂದ್ರಶೇಖರ್‌ ಶಿವಾಚಾರ್ಯ ಸ್ವಾಮೀಜಿ ಅವರು ಮಾತನಾಡಿ, ''ಸಾಮೂಹಿಕ ಮದುವೆ ನಿಮಿತ್ತ ಬಳ್ಳಾರಿಗೆ ಆಗಮಿಸಿ, ರೆಡ್ಡಿ ನಿವಾಸಕ್ಕೆ ಭೇಟಿ ನೀಡಲಾಗಿದೆ. ರೆಡ್ಡಿ ಅವರು ಕಾಶಿ ಪೀಠದಲ್ಲಿ ಲಿಂಗಧಾರಣೆ ಮಾಡಿಕೊಂಡಿದ್ದು, ಅಂದಿನಿಂದ ನಿಷ್ಠೆ ಭಕ್ತಿಯಿಂದ ಲಿಂಗ ಪೂಜೆ ಮಾಡುತ್ತಿದ್ದಾರೆ. ಬೆಳಗ್ಗೆ ಲಿಂಗಪೂಜೆ, ಪಾದ ಪೂಜೆ ನೆರವೇರಿಸುತ್ತಿದ್ದಾರೆ. ಅವರು ಕಳೆದ ಕೆಲ ವರ್ಷಗಳಿಂದ ನಾನಾ ಸಮಸ್ಯೆಗಳಲ್ಲಿ ಸಿಲುಕಿದ್ದು, ಬಹುಬೇಗ ಎಲ್ಲ ಸಮಸ್ಯೆಗಳಿಂದ ಮುಕ್ತಿ ಹೊಂದಲಿದ್ದಾರೆ. ಅವರ ಗತ ವೈಭವ ಮರುಕಳಿಸಲಿ'' ಎಂದರು.

ಮಾಜಿ ಸಚಿವ ಜನಾರ್ದನ ರೆಡ್ಡಿ ಅವರು ಮಾತನಾಡಿ, ''ಕಳೆದ ಕೆಲ ವರ್ಷಗಳ ಹಿಂದೆ ಲಿಂಗಧಾರಣೆ ಮಾಡಿದ್ದು, ಅಂದಿನಿಂದ ನಿತ್ಯ ಲಿಂಗ ಪೂಜೆ ಮಾಡುತ್ತಿರುವೆ. ಜಗದ್ಗುರುಗಳ ಸಮ್ಮುಖದಲ್ಲಿ ಲಿಂಗ ಪೂಜೆ ಮಾಡುವುದು ವಿಶೇಷ. ಇಂದು ಬೇರೆ ಕಾರ್ಯಕ್ರಮದಲ್ಲಿ ಭಾಗಿಯಾಗಲು ಬಂದಿದ್ದ ಜಗದ್ಗುರುಗಳನ್ನು ನಮ್ಮ ನಿವಾಸಕ್ಕೆ ಆಹ್ವಾನಿಸಿ ಪಾದ ಪೂಜೆ ನೆರವೇರಿಸಲಾಗಿದೆ. ನಾನು ನ್ಯಾಯಾಲಯದ ಮೇಲೆ ನಂಬಿಕೆ ಇಟ್ಟಿದ್ದು, ನನ್ನ ಮನಸಾಕ್ಷಿಯಾಗಿ ಯಾವ ತಪ್ಪು ಮಾಡಿಲ್ಲ. ಜಗದ್ಗುರುಗಳು ಹೇಳಿದಂತೆ ಆರೋಪ ಮುಕ್ತನಾಗುವೆ''

...

ಕೋಟ್‌

ಸಾಮೂಹಿಕ ಮದುವೆ ನಿಮಿತ್ತ ಬಳ್ಳಾರಿಗೆ ಆಗಮಿಸಿ, ರೆಡ್ಡಿ ನಿವಾಸಕ್ಕೆ ಭೇಟಿ ನೀಡಲಾಗಿದೆ. ರೆಡ್ಡಿ ಅವರು ಕಾಶಿ ಪೀಠದಲ್ಲಿ ಲಿಂಗಧಾರಣೆ ಮಾಡಿಕೊಂಡಿದ್ದು, ಅಂದಿನಿಂದ ನಿಷ್ಠೆ ಭಕ್ತಿಯಿಂದ ಲಿಂಗ ಪೂಜೆ ಮಾಡುತ್ತಿದ್ದಾರೆ. ಬೆಳಗ್ಗೆ ಲಿಂಗಪೂಜೆ, ಪಾದ ಪೂಜೆ ನೆರವೇರಿಸುತ್ತಿದ್ದಾರೆ. ಅವರು ಕಳೆದ ಕೆಲ ವರ್ಷಗಳಿಂದ ನಾನಾ ಸಮಸ್ಯೆಗಳಲ್ಲಿ ಸಿಲುಕಿದ್ದು, ಬಹುಬೇಗ ಮುಕ್ತರಾಗಲಿ.

- ಜಗದ್ಗುರು ಡಾ.ಶ್ರೀ.ಚಂದ್ರಶೇಖರ್‌ ಶಿವಾಚಾರ್ಯ ಸ್ವಾಮೀಜಿ, ಕಾಶಿ ಪೀಠ

20 ಮಾರುತಿ 01: ಬಳ್ಳಾರಿ ನಗರದ ಹಾವಂಬಾವಿ ಪ್ರದೇಶದಲ್ಲಿನ ಮಾಜಿ ಸಚಿವ ಜಿ.ಜನಾರ್ದನರೆಡ್ಡಿ ಅವರ ನಿವಾಸಕ್ಕೆ ಗುರುವಾರ ಶ್ರೀಶೈಲ ಜಗದ್ಗುರು ಭೇಟಿ ನೀಡಿದರು.

20 ಮಾರುತಿ 02: ಬಳ್ಳಾರಿ ನಗರದ ಹಾವಂಬಾವಿ ಪ್ರದೇಶದಲ್ಲಿನ ಮಾಜಿ ಸಚಿವ ಜಿ.ಜನಾರ್ದನರೆಡ್ಡಿ ಅವರ ನಿವಾಸಕ್ಕೆ ಗುರುವಾರ ಶ್ರೀಶೈಲ ಜಗದ್ಗುರು ಭೇಟಿ ನೀಡಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ