ಹೂವಿನಹಡಗಲಿ : ಕೇವಲ ಐದೇ ವರ್ಷದಲ್ಲಿ ಶಾಸಕ ಪಿ.ಟಿ.ಪರಮೇಶ್ವರನಾಯ್ಕ ಕೋಟಿ ಕೋಟಿ ರೂ.ಗಳ ಒಡೆಯರಾಗಿದ್ದಾರೆ.
ಕಳೆದ 2013ರ ಚುನಾವಣೆಯಲ್ಲಿ 50ಲಕ್ಷ ರೂ. ಸ್ಥಿರಾಸ್ತಿ, 98.24ಲಕ್ಷ ರೂ. ಚರಾಸ್ತಿ ಹೊಂದಿದ್ದ ಶಾಸಕರು, ಈ ಬಾರಿಯ ಚುನಾವಣೆಯಲ್ಲಿ 6.78ಕೋಟಿ ಚರಾಸ್ತಿ,11.84 ಕೋಟಿ ರೂ. ಸ್ಥಿರಾಸ್ತಿಯನ್ನು ಘೋಷಿಸಿಕೊಂಡಿದ್ದಾರೆ. ಇದೇವೇಳೆ 1.06 ಕೋಟಿ ರೂ. ಸಾಲಗಾರರೂ ಆಗಿದ್ದಾರೆ.
ಒಟ್ಟು ಆಸ್ತಿ ವಿವರ: ಪಿಟಿಪಿ ಸ್ವಂತಕ್ಕೆ ಕೈಯಲ್ಲಿ 15ಲಕ್ಷ ರೂ. ನಗದು ಹಣವನ್ನು ಹೊಂದಿದ್ದರೆ, ಪತ್ನಿ ಪ್ರೇಮಾ ಹತ್ತಿರ 2ಲಕ್ಷ ರೂ., ಪುತ್ರ ಅವಿನಾಶ ಬಳಿ 1.50ಲಕ್ಷ ರೂ. ಇನ್ನೊಬ್ಬ ಪುತ್ರ ಭರತ್ ಬಳಿ 60ಸಾವಿರ ರೂ. ಹಣವಿದೆ.
ಹುಂಡೈ ಕ್ರೆಟಾ, ಟೊಯೋಟಾ ಇನ್ನೋವಾ ಕಾರು ಇರುವ ಶಾಸಕರು, ಒಂದು ಹಿರೋ ಹೊಂಡಾ ದ್ವಿಚಕ್ರ ವಾಹನವಿದೆ. ಇವುಗಳ ಒಟ್ಟು ಮೌಲ್ಯ ಅಂದಾಜು 37.85ಲಕ್ಷ ರೂ.
ಬ್ಯಾಂಕ್ ಖಾತೆಯಲ್ಲಿ 53.90ಲಕ್ಷ ರೂ. ಇದೆ. ಪತ್ನಿ ಪ್ರೇಮಾ ಹೆಸರಿನ ಖಾತೆಯಲ್ಲಿ 1.92ಲಕ್ಷ ರೂ., ಪುತ್ರ ಅವಿನಾಶ್ ಖಾತೆ 0.19ಲಕ್ಷ ರೂ., ಭರತ್ ಖಾತೆ .94ಲಕ್ಷ ರೂ. ಜಮಾ ಇದೆ.
ಇನ್ನು 900ಗ್ರಾಂ ಬಂಗಾರ, 25ಕೆಜಿ ಬೆಳ್ಳಿ, ನಾನಾ ಕಡೆಗಳಿಂದ ಉಡುಗೊರೆಯಾಗಿ ನೀಡಿದ 22ಲಕ್ಷ ರೂ. ಬೆಲೆ ಬಾಳುವ ನಾನಾ ಲೋಹಗಳಿವೆ.
ಪತ್ನಿ ಪ್ರೇಮಾ ಬಳಿ 2600ಕೆಜಿ ಬಂಗಾರವಿದ್ದರೆ, 48ಕೆಜಿ ಬೆಳ್ಳಿಯಿದೆ. ಪುತ್ರ ಅವಿನಾಶ ಬಳಿ 25ಗ್ರಾಂ., ಭರತ್ ಬಳಿ 75ಗ್ರಾಂ. ಚಿನ್ನವಿದೆ.ಉಡುಗೊರೆಯಾಗಿ ನೀಡಿರುವ 1.50 ಲಕ್ಷ ಮೌಲ್ಯದ ನಾನಾ ಲೋಹಗಳು. (ಒಟ್ಟು ಮೌಲ್ಯ 93.15 ಲಕ್ಷ )
ನಾನಾ ಕಡೆ ವಿಮೆ ಮಾಡಿಸಿದ್ದು, ಶಾಸಕ ಪಿಟಿಪಿ ಹೆಸರಿನಲ್ಲಿ ವಾರ್ಷಿಕ 25 ಸಾವಿರ ಪ್ರೀಮಿಯಂ, ಪತ್ನಿ ಪ್ರೇಮಾ ಹೆಸರಿನಲ್ಲಿ 75ಸಾವಿರ ರೂ. ವಾರ್ಷಿಕ ಪ್ರೀಮಿಯಂ, ಪುತ್ರ ಅವಿನಾಶ್ 75 ಸಾವಿರ, ಪುತ್ರ ಭರತ್ನ ಹೆಸರಿನಲ್ಲಿ ವಾರ್ಷಿಕ ಪ್ರೀಮಿಯಂ 75 ಸಾವಿರ ರೂ. ಇದೆ.
ಒಟ್ಟು ಚರಾಸ್ತಿ ಮೌಲ್ಯ 6.78 ಕೋಟಿ ರೂ.ನಲ್ಲಿ ತಮ್ಮ ಸ್ವಂತ ಹೆಸರಿನಲ್ಲಿ 23.24 ಎಕರೆ ಜಮೀನು, ಪತ್ನಿ ಹೆಸರಿನಲ್ಲಿ 17.11ಎಕರೆ ಪುತ್ರರಿಬ್ಬರ ಹೆಸರಿನಲ್ಲಿ 7.03 ಎಕರೆ ಜಮೀನು ಹೊಂದಿದ್ದಾರೆ.
ಬೆಂಗಳೂರು ಎಚ್ಆರ್ಬಿಆರ್ ಲೇಔಟ್ನಲ್ಲಿ 3ಕೋಟಿ ರೂ. ಮೌಲ್ಯದ 4000 ಚದುರ ಅಡಿಯ ವಾಣಿಜ್ಯ ಕಟ್ಟಡ, ಬೆಂಗಳೂರು ಡಾಲರ್ಸ್ ಕಾಲೊನಿಯಲ್ಲಿ ಮನೆ, ಹರಪನಹಳ್ಳಿ ತಾಲೂಕು ಲಕ್ಷ್ಮಿಪುರ, ಹರಪನಹಳ್ಳಿ, ಹೂವಿನಹಡಗಲಿಯಲ್ಲಿ ವಾಸದ ಮನೆ, ದಾವಣಗೆರೆಯ ಶ್ರೀನಿವಾಸ ನಗರದಲ್ಲಿ ನಿವೇಶನ, ದಾವಣಗೆರೆಯ ಶ್ರೀನಿವಾಸ ನಗರ ಮತ್ತು ಬೆಂಗಳೂರಿನ ಅಶ್ವಥನಗರದಲ್ಲಿ ಪತ್ನಿಯ ಹೆಸರಿನಲ್ಲಿ ವಾಸದ ಮನೆ ಇವೆ. ಪುತ್ರರ ಹೆಸರಲ್ಲಿ ಬೆಂಗಳೂರಿನ ಚೊಕ್ಕನಹಳ್ಳಿಯಲ್ಲಿ ನಿವೇಶನ, ದಾವಣಗೆರೆಯಲ್ಲಿ ಗೃಹ ಮಂಡಳಿಯ ಕಾಲೊನಿಯಲ್ಲಿ ನಿವೇಶನವಿದೆ.
ಸ್ಥಿರಾಸ್ತಿಯಲ್ಲಿ ಮಾಜಿ ಶಾಸಕ ಚಂದ್ರನಾಯ್ಕರೂ ಏರಿಕೆ
ಹೂವಿನಹಡಗಲಿ: ಮಾಜಿ ಶಾಸಕ, ಬಿಜೆಪಿ ಅಭ್ಯರ್ಥಿ ಬಿ. ಚಂದ್ರನಾಯ್ಕ ಚರಾಸ್ತಿಯಲ್ಲಿ ಏರಿಕೆಯಾಗದಿದ್ದರೂ ಸ್ಥಿರಾಸ್ತಿಯಲ್ಲಿ ಕೊಂಚ ಅಂದರೆ 2.13 ಕೋಟಿ ರೂ. ಏರಿಕೆ ಕಂಡಿದ್ದಾರೆ.
ಈವರೆಗೆ 2ಲಕ್ಷ ರೂ. ನಗದು ಹಣವನ್ನು ಹೊಂದಿದ್ದು, ಪತ್ನಿ ದೂದಿಬಾಯಿ ಬಳಿ 50 ಸಾವಿರ, ಪುತ್ರರಾದ ಮಂಜುನಾಥ
1ಲಕ್ಷ , ಸೇತುರಾಮ್ 50 ಸಾವಿರ, ಓಂಪ್ರಕಾಶ್ ಬಳಿ 10 ಸಾವಿರ ರೂ. ನಗದು ಹಣವಿದೆ.
ಮಾರುತಿ ಸ್ವಿಫ್ಟ್ ಕಾರು ಹೊಂದಿದ್ದು, ಪುತ್ರನ ಬಳಿ ಟಾಟಾ ಆರ್ಯ ಕಾರು, ಪಲ್ಸರ್ ಬೈಕ್, ಹಿರೋ ಗ್ಲಾಮರ್ ಬೈಕ್ಗಳಿವೆ.
8.97 ಲಕ್ಷ ರೂ. ಬ್ಯಾಂಕ್ ಖಾತೆಯಲ್ಲಿದ್ದರೆ, ಮೂವರು ಮಕ್ಕಳ ಖಾತೆಯಲ್ಲಿ 0.33 ಲಕ್ಷ ರೂ. ಇದೆ. 200 ಗ್ರಾಂ ಚಿನ್ನ, 1 ಕೆಜಿ ಬೆಳ್ಳಿ, ಪತ್ನಿಯ ಬಳಿ 300 ಗ್ರಾಂ ಚಿನ್ನ, 500 ಗ್ರಾಂ.ಬೆಳ್ಳಿ, ಪುತ್ರರ ಬಳಿ 100 ಗ್ರಾಂ ಚಿನ್ನವಿದೆ. 84 ಸಾವಿರ ರೂ.ಪ್ರೀಮಿಯಂ ಇರುವ ವಿಮೆ ಮಾಡಿಸಿದ್ದರೆ, ಮಕ್ಕಳ ಹೆಸರಲ್ಲಿ 1.25 ಲಕ್ಷ ರೂ. ಇದೆ. ಇನ್ನು ಚರಾಸ್ತಿ ಮೌಲ್ಯ 59.52 ಲಕ್ಷ ರೂ. ಇದ್ದು, ಇದರಲ್ಲಿ 22.36 ಎಕರೆ ಕೃಷಿ ಭೂಮಿ ಇದೆ. ಸೊಪ್ಪಿನ ಕಾಳಮ್ಮ ಬಡಾವಣೆಯಲ್ಲಿ ನಿವೇಶನ ಹೊಂದಿದ್ದಾರೆ. ಜತೆಗೆ ಹೂವಿನಹಡಗಲಿಯಲ್ಲಿ ವಾಸದ ಮನೆಯಿದೆ.
ಕಳೆದ 2013ರ ಚುನಾವಣೆಯಲ್ಲಿ 50ಲಕ್ಷ ರೂ. ಸ್ಥಿರಾಸ್ತಿ, 98.24ಲಕ್ಷ ರೂ. ಚರಾಸ್ತಿ ಹೊಂದಿದ್ದ ಶಾಸಕರು, ಈ ಬಾರಿಯ ಚುನಾವಣೆಯಲ್ಲಿ 6.78ಕೋಟಿ ಚರಾಸ್ತಿ,11.84 ಕೋಟಿ ರೂ. ಸ್ಥಿರಾಸ್ತಿಯನ್ನು ಘೋಷಿಸಿಕೊಂಡಿದ್ದಾರೆ. ಇದೇವೇಳೆ 1.06 ಕೋಟಿ ರೂ. ಸಾಲಗಾರರೂ ಆಗಿದ್ದಾರೆ.
ಒಟ್ಟು ಆಸ್ತಿ ವಿವರ: ಪಿಟಿಪಿ ಸ್ವಂತಕ್ಕೆ ಕೈಯಲ್ಲಿ 15ಲಕ್ಷ ರೂ. ನಗದು ಹಣವನ್ನು ಹೊಂದಿದ್ದರೆ, ಪತ್ನಿ ಪ್ರೇಮಾ ಹತ್ತಿರ 2ಲಕ್ಷ ರೂ., ಪುತ್ರ ಅವಿನಾಶ ಬಳಿ 1.50ಲಕ್ಷ ರೂ. ಇನ್ನೊಬ್ಬ ಪುತ್ರ ಭರತ್ ಬಳಿ 60ಸಾವಿರ ರೂ. ಹಣವಿದೆ.
ಹುಂಡೈ ಕ್ರೆಟಾ, ಟೊಯೋಟಾ ಇನ್ನೋವಾ ಕಾರು ಇರುವ ಶಾಸಕರು, ಒಂದು ಹಿರೋ ಹೊಂಡಾ ದ್ವಿಚಕ್ರ ವಾಹನವಿದೆ. ಇವುಗಳ ಒಟ್ಟು ಮೌಲ್ಯ ಅಂದಾಜು 37.85ಲಕ್ಷ ರೂ.
ಬ್ಯಾಂಕ್ ಖಾತೆಯಲ್ಲಿ 53.90ಲಕ್ಷ ರೂ. ಇದೆ. ಪತ್ನಿ ಪ್ರೇಮಾ ಹೆಸರಿನ ಖಾತೆಯಲ್ಲಿ 1.92ಲಕ್ಷ ರೂ., ಪುತ್ರ ಅವಿನಾಶ್ ಖಾತೆ 0.19ಲಕ್ಷ ರೂ., ಭರತ್ ಖಾತೆ .94ಲಕ್ಷ ರೂ. ಜಮಾ ಇದೆ.
ಇನ್ನು 900ಗ್ರಾಂ ಬಂಗಾರ, 25ಕೆಜಿ ಬೆಳ್ಳಿ, ನಾನಾ ಕಡೆಗಳಿಂದ ಉಡುಗೊರೆಯಾಗಿ ನೀಡಿದ 22ಲಕ್ಷ ರೂ. ಬೆಲೆ ಬಾಳುವ ನಾನಾ ಲೋಹಗಳಿವೆ.
ಪತ್ನಿ ಪ್ರೇಮಾ ಬಳಿ 2600ಕೆಜಿ ಬಂಗಾರವಿದ್ದರೆ, 48ಕೆಜಿ ಬೆಳ್ಳಿಯಿದೆ. ಪುತ್ರ ಅವಿನಾಶ ಬಳಿ 25ಗ್ರಾಂ., ಭರತ್ ಬಳಿ 75ಗ್ರಾಂ. ಚಿನ್ನವಿದೆ.ಉಡುಗೊರೆಯಾಗಿ ನೀಡಿರುವ 1.50 ಲಕ್ಷ ಮೌಲ್ಯದ ನಾನಾ ಲೋಹಗಳು. (ಒಟ್ಟು ಮೌಲ್ಯ 93.15 ಲಕ್ಷ )
ನಾನಾ ಕಡೆ ವಿಮೆ ಮಾಡಿಸಿದ್ದು, ಶಾಸಕ ಪಿಟಿಪಿ ಹೆಸರಿನಲ್ಲಿ ವಾರ್ಷಿಕ 25 ಸಾವಿರ ಪ್ರೀಮಿಯಂ, ಪತ್ನಿ ಪ್ರೇಮಾ ಹೆಸರಿನಲ್ಲಿ 75ಸಾವಿರ ರೂ. ವಾರ್ಷಿಕ ಪ್ರೀಮಿಯಂ, ಪುತ್ರ ಅವಿನಾಶ್ 75 ಸಾವಿರ, ಪುತ್ರ ಭರತ್ನ ಹೆಸರಿನಲ್ಲಿ ವಾರ್ಷಿಕ ಪ್ರೀಮಿಯಂ 75 ಸಾವಿರ ರೂ. ಇದೆ.
ಒಟ್ಟು ಚರಾಸ್ತಿ ಮೌಲ್ಯ 6.78 ಕೋಟಿ ರೂ.ನಲ್ಲಿ ತಮ್ಮ ಸ್ವಂತ ಹೆಸರಿನಲ್ಲಿ 23.24 ಎಕರೆ ಜಮೀನು, ಪತ್ನಿ ಹೆಸರಿನಲ್ಲಿ 17.11ಎಕರೆ ಪುತ್ರರಿಬ್ಬರ ಹೆಸರಿನಲ್ಲಿ 7.03 ಎಕರೆ ಜಮೀನು ಹೊಂದಿದ್ದಾರೆ.
ಬೆಂಗಳೂರು ಎಚ್ಆರ್ಬಿಆರ್ ಲೇಔಟ್ನಲ್ಲಿ 3ಕೋಟಿ ರೂ. ಮೌಲ್ಯದ 4000 ಚದುರ ಅಡಿಯ ವಾಣಿಜ್ಯ ಕಟ್ಟಡ, ಬೆಂಗಳೂರು ಡಾಲರ್ಸ್ ಕಾಲೊನಿಯಲ್ಲಿ ಮನೆ, ಹರಪನಹಳ್ಳಿ ತಾಲೂಕು ಲಕ್ಷ್ಮಿಪುರ, ಹರಪನಹಳ್ಳಿ, ಹೂವಿನಹಡಗಲಿಯಲ್ಲಿ ವಾಸದ ಮನೆ, ದಾವಣಗೆರೆಯ ಶ್ರೀನಿವಾಸ ನಗರದಲ್ಲಿ ನಿವೇಶನ, ದಾವಣಗೆರೆಯ ಶ್ರೀನಿವಾಸ ನಗರ ಮತ್ತು ಬೆಂಗಳೂರಿನ ಅಶ್ವಥನಗರದಲ್ಲಿ ಪತ್ನಿಯ ಹೆಸರಿನಲ್ಲಿ ವಾಸದ ಮನೆ ಇವೆ. ಪುತ್ರರ ಹೆಸರಲ್ಲಿ ಬೆಂಗಳೂರಿನ ಚೊಕ್ಕನಹಳ್ಳಿಯಲ್ಲಿ ನಿವೇಶನ, ದಾವಣಗೆರೆಯಲ್ಲಿ ಗೃಹ ಮಂಡಳಿಯ ಕಾಲೊನಿಯಲ್ಲಿ ನಿವೇಶನವಿದೆ.
ಸ್ಥಿರಾಸ್ತಿಯಲ್ಲಿ ಮಾಜಿ ಶಾಸಕ ಚಂದ್ರನಾಯ್ಕರೂ ಏರಿಕೆ
ಹೂವಿನಹಡಗಲಿ: ಮಾಜಿ ಶಾಸಕ, ಬಿಜೆಪಿ ಅಭ್ಯರ್ಥಿ ಬಿ. ಚಂದ್ರನಾಯ್ಕ ಚರಾಸ್ತಿಯಲ್ಲಿ ಏರಿಕೆಯಾಗದಿದ್ದರೂ ಸ್ಥಿರಾಸ್ತಿಯಲ್ಲಿ ಕೊಂಚ ಅಂದರೆ 2.13 ಕೋಟಿ ರೂ. ಏರಿಕೆ ಕಂಡಿದ್ದಾರೆ.
ಈವರೆಗೆ 2ಲಕ್ಷ ರೂ. ನಗದು ಹಣವನ್ನು ಹೊಂದಿದ್ದು, ಪತ್ನಿ ದೂದಿಬಾಯಿ ಬಳಿ 50 ಸಾವಿರ, ಪುತ್ರರಾದ ಮಂಜುನಾಥ
1ಲಕ್ಷ , ಸೇತುರಾಮ್ 50 ಸಾವಿರ, ಓಂಪ್ರಕಾಶ್ ಬಳಿ 10 ಸಾವಿರ ರೂ. ನಗದು ಹಣವಿದೆ.
ಮಾರುತಿ ಸ್ವಿಫ್ಟ್ ಕಾರು ಹೊಂದಿದ್ದು, ಪುತ್ರನ ಬಳಿ ಟಾಟಾ ಆರ್ಯ ಕಾರು, ಪಲ್ಸರ್ ಬೈಕ್, ಹಿರೋ ಗ್ಲಾಮರ್ ಬೈಕ್ಗಳಿವೆ.
8.97 ಲಕ್ಷ ರೂ. ಬ್ಯಾಂಕ್ ಖಾತೆಯಲ್ಲಿದ್ದರೆ, ಮೂವರು ಮಕ್ಕಳ ಖಾತೆಯಲ್ಲಿ 0.33 ಲಕ್ಷ ರೂ. ಇದೆ. 200 ಗ್ರಾಂ ಚಿನ್ನ, 1 ಕೆಜಿ ಬೆಳ್ಳಿ, ಪತ್ನಿಯ ಬಳಿ 300 ಗ್ರಾಂ ಚಿನ್ನ, 500 ಗ್ರಾಂ.ಬೆಳ್ಳಿ, ಪುತ್ರರ ಬಳಿ 100 ಗ್ರಾಂ ಚಿನ್ನವಿದೆ. 84 ಸಾವಿರ ರೂ.ಪ್ರೀಮಿಯಂ ಇರುವ ವಿಮೆ ಮಾಡಿಸಿದ್ದರೆ, ಮಕ್ಕಳ ಹೆಸರಲ್ಲಿ 1.25 ಲಕ್ಷ ರೂ. ಇದೆ. ಇನ್ನು ಚರಾಸ್ತಿ ಮೌಲ್ಯ 59.52 ಲಕ್ಷ ರೂ. ಇದ್ದು, ಇದರಲ್ಲಿ 22.36 ಎಕರೆ ಕೃಷಿ ಭೂಮಿ ಇದೆ. ಸೊಪ್ಪಿನ ಕಾಳಮ್ಮ ಬಡಾವಣೆಯಲ್ಲಿ ನಿವೇಶನ ಹೊಂದಿದ್ದಾರೆ. ಜತೆಗೆ ಹೂವಿನಹಡಗಲಿಯಲ್ಲಿ ವಾಸದ ಮನೆಯಿದೆ.