ಆ್ಯಪ್ನಗರ

ಸಂಡೂರಿನ ಕಾಡಿನಲ್ಲಿ ನವಿಲುಗಳ ನರ್ತನ: ಮೊಬೈಲ್‍ನಲ್ಲಿ ಸೆರೆ

ಸಂಡೂರು ಕಾಡಿನ ಉತ್ತರ ಮತ್ತು ದಕ್ಷಿಣ ವಲಯದಲ್ಲಿ ನವಿಲುಗಳಿದ್ದು, ಅದರಲ್ಲೂ ಸ್ವಾಮಿಮಲೈ ಬೆಟ್ಟದಲ್ಲಿ ನವಿಲುಗಳ ಸಂಖ್ಯೆ ಅತ್ಯಂತ ಹೇರಳವಾಗಿದೆ. ಇದರಲ್ಲಿ ಇತ್ತೀಚಿಗೆ ನವಿಲೊಂದು ನರ್ತನ ಮಾಡುತ್ತಿರುವ ದೃಶ್ಯವನ್ನು ಪರಿಸರ ಪ್ರಿಯರು ಮೊಬೈಲ್‍ನಲ್ಲಿ ಸೆರೆ ಹಿಡಿದಿದ್ದಾರೆ.

Vijaya Karnataka Web 17 Jun 2022, 9:59 pm
ಬಳ್ಳಾರಿ: ಮುಂಗಾರು ಆರಂಭದ ಹಿನ್ನಲೆಯಲ್ಲಿ ಸಂಡೂರಿನಲ್ಲಿ ಆವರಿಸಿದ ಮೋಡ ಮುಸುಕಿನ ವಾತಾವರಣ, ಆಗಾಗ್ಗೆ ಸುರಿಯುವ ಮಳೆಯಿಂದ ನವಿಲುಗಳ ನರ್ತನ ನೋಡುಗರನ್ನು ಸೆಳೆಯುತ್ತಿದೆ.
Vijaya Karnataka Web ನವಿಲು ನರ್ತನ
ನವಿಲು ನರ್ತನ


ಸಂಡೂರುಕಾಡಿನ ಉತ್ತರ ಮತ್ತು ದಕ್ಷಿಣ ವಲಯದಲ್ಲಿ ನವಿಲುಗಳಿದ್ದು, ಅದರಲ್ಲೂ ಸ್ವಾಮಿಮಲೈ ಬೆಟ್ಟದಲ್ಲಿ ನವಿಲುಗಳ ಸಂಖ್ಯೆ ಅತ್ಯಂತ ಹೇರಳವಾಗಿದೆ. ಇದರಲ್ಲಿ ಇತ್ತೀಚಿಗೆ ನವಿಲೊಂದು ನರ್ತನ ಮಾಡುತ್ತಿರುವ ದೃಶ್ಯವನ್ನು ಪರಿಸರ ಪ್ರಿಯರು ಮೊಬೈಲ್‍ನಲ್ಲಿ ಸೆರೆ ಹಿಡಿದಿದ್ದಾರೆ. ಚಾರಣ ಪ್ರಿಯರು, ಪ್ರಯಾಣಿಕರು, ಪ್ರವಾಸಿಗರು ಇಲ್ಲಿನ ಕಾಡಿನಲ್ಲಿನ ನವಿಲುಗಳ ನರ್ತನವನ್ನು ಕಣ್ಣು ತುಂಬಿಕೊಳ್ಳುತ್ತಿದ್ದಾರೆ.

ಬಳ್ಳಾರಿಯಲ್ಲಿ ಮತ್ತೆ ಶುರುವಾಯ್ತು ಕೊರೊನಾ..! ಮಾರ್ಗಸೂಚಿ ಪಾಲನೆಗೆ ಜನರ ನಿರಾಸಕ್ತಿ..

ಸಂಡೂರಿನ ಬೆಟ್ಟಗುಡ್ಡಗಳು ಹಸಿರು ಸೀರೆ ಹೊದ್ದಂತೆ ಕಂಗೊಳಿಸುತ್ತಿವೆ. ಮಳೆ ಸುರಿಸಿ ಗಣಿಗಾರಿಕೆಯ ಕೆಂಧೂಳಿನಿಂದ ಮಿಂದೆದ್ದ ಗಿಡ ಮರಗಳ ಎಲೆಗಳ ಮುಖ ತೊಳೆದು ಹಚ್ಚ ಹಸಿರಾಗಿಸುತ್ತಿವೆ. ಕಾಡೆಲ್ಲವೂ ಹಸಿರಾಗಿದೆ, ಆಗಾಗ್ಗೆ ತಂಗಾಳಿ ಬೀಸುತ್ತಿದೆ, ಮೋಡ ಮುಸುಕಿದ ವಾತಾವರಣ, ಆಗಾಗ್ಗೆ ತುಂತುರು ಸುರಿಯುವ ಮಳೆಗೆ ನವಿಲುಗಳು ಮನಸೋತು ನರ್ತಿಸುವುದನ್ನು ಕಾಣುವುದು ಕಣ್ಣಿಗೆ ಹಬ್ಬದಂತಿದೆ.

ಜೂ.21ರಂದು ಯೋಗ ದಿನ

ಅಂತಾರಾಷ್ಟ್ರೀಯ ಯೋಗ ದಿನಾಚರಣೆಯನ್ನು ‘ಮಾನವತೆಗಾಗಿ ಯೋಗ’ ಎಂಬ ಘೋಷ ವಾಕ್ಯದೊಂದಿಗೆ ಜೂ.21 ರಂದು ಕನಕದುರ್ಗಮ್ಮ ದೇವಸ್ಥಾನದ ಆವರಣದಲ್ಲಿ ನಡೆಯಲಿದೆ.

ಕೇಂದ್ರ ಆಯುಷ್‌ ಮಂತ್ರಾಲಯ ಆಯುಷ್‌ ಇಲಾಖೆ, ಜಿಲ್ಲಾಡಳಿತ, ಜಿಲ್ಲಾ ಪಂಚಾಯತಿ, ಜಿಲ್ಲಾಆಯುಷ್‌ ಇಲಾಖೆ ಹಾಗೂ ಸಮಸ್ತ ಯೋಗ ಸಂಸ್ಥೆಗಳ ಸಹಯೋಗದೊಂದಿಗೆ ನಡೆಯಲಿದೆ.

ಜಿಲ್ಲಾಉಸ್ತುವಾರಿ ಸಚಿವ ಬಿ.ಶ್ರೀರಾಮುಲು, ಶಾಸಕ ಜಿ.ಸೋಮಶೇಖರ ರೆಡ್ಡಿ, ಸಂಸದರಾದ ವೈ.ದೇವೇಂದ್ರಪ್ಪ, ಕರಡಿ ಸಂಗಣ್ಣ, ಡಾ.ಸೈಯದ್‌ ನಾಸೀರ್‌ ಹುಸೇನ್‌, ಶಾಸಕರಾದ ಈ.ತುಕಾರಾಂ, ಬಿ.ನಾಗೇಂದ್ರ, ಎಂ.ಎಸ್‌.ಸೋಮಲಿಂಗಪ್ಪ, ಜೆ.ಎನ್‌.ಗಣೇಶ್‌, ವೈ.ಎಂ.ಸತೀಶ್‌, ಕರ್ನಾಟಕ ರಾಜ್ಯ ಸಫಾಯಿ ಕರ್ಮಚಾರಿ ಅಭಿವೃದ್ಧಿ ನಿಗಮದ ಅಧ್ಯಕ್ಷ ಎಚ್‌.ಹನುಮಂತಪ್ಪ, ಮೇಯರ್‌ ಎಂ.ರಾಜೇಶ್ವರಿ, ಬುಡಾ ಅಧ್ಯಕ್ಷ ಪಿ.ಪಾಲಣ್ಣ, ಆಯುಷ್‌ ಇಲಾಖೆಯ ಆಯುಕ್ತ ರಾಮಚಂದ್ರ ಭಾಗವಹಿಸಲಿದ್ದಾರೆ.
ಅದಿರು ಸಾಗಣೆ ಮುಕ್ತ: ಅಭಿವೃದ್ಧಿಗೆ ರಹದಾರಿ, ಕೈಗಾರಿಕೋದ್ಯಮಿಗಳಿಗೆ ಭರವಸೆ ತಂದ ಸುಪ್ರೀಂ ಆದೇಶ
ನಗರದ ಕೋಟೆ ಮಲ್ಲೇಶ್ವರ ದೇವಸ್ಥಾನದ ಆವರಣದಲ್ಲಿನಡೆಯುವ ಯೋಗ ದಿನಾಚರಣೆ ಕಾರ್ಯಕ್ರಮಕ್ಕೆ ಶಾಸಕ ಬಿ.ನಾಗೇಂದ್ರ, ಜಿಲ್ಲಾಧಿಕಾರಿ ಪವನಕುಮಾರ್‌ ಮಾಲಪಾಟಿ, ಜಿಪಂ ಸಿಇಒ ಜಿ.ಲಿಂಗಮೂರ್ತಿ, ಪಾಲಿಕೆ ಆಯುಕ್ತೆ ಪ್ರೀತಿ ಗೆಹ್ಲೋಟ್‌, ಎಸ್‌ಪಿ ಸೈದುಲು ಅಡಾವತ್‌, ಜಿಲ್ಲಾಆಯುಷ್‌ ಅಧಿಕಾರಿ ಡಾ. ಸುಜಾತ ಪಾಟೀಲ್‌ ಉಪಸ್ಥಿತರಿರಲಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ