ಆ್ಯಪ್ನಗರ

ತುಂಬಿ ಬಂದ ವೇದಾವತಿ ಹಗರಿ: ವ್ಯಕ್ತಿ ನೀರು ಪಾಲು

ತಾಲೂಕಿನ ರಾರಾವಿ ಬಳಿಯ ವೇದಾವತಿ ಹಗರಿ ನದಿ ತುಂಬಿ ಹರಿಯುತ್ತಿದ್ದು, ನೀರು ಕುಡಿಯಲು ಹೋದ ವ್ಯಕ್ತಿಯೊಬ್ಬರು ಆಕಸ್ಮಿಕವಾಗಿ ಕಾಲುಜಾರಿಬಿದ್ದು ಅಸುನೀಗಿದ್ದಾರೆ.

Vijaya Karnataka 12 Oct 2017, 8:15 am
ಸಿರುಗುಪ್ಪ (ಬಳ್ಳಾರಿ): ತಾಲೂಕಿನ ರಾರಾವಿ ಬಳಿಯ ವೇದಾವತಿ ಹಗರಿ ನದಿ ತುಂಬಿ ಹರಿಯುತ್ತಿದ್ದು, ನೀರು ಕುಡಿಯಲು ಹೋದ ವ್ಯಕ್ತಿಯೊಬ್ಬರು ಆಕಸ್ಮಿಕವಾಗಿ ಕಾಲುಜಾರಿಬಿದ್ದು ಅಸುನೀಗಿದ್ದಾರೆ.
Vijaya Karnataka Web person died in vedavati rivar
ತುಂಬಿ ಬಂದ ವೇದಾವತಿ ಹಗರಿ: ವ್ಯಕ್ತಿ ನೀರು ಪಾಲು


ರಾಯಚೂರು ಜಿಲ್ಲೆ ಸಿಂಧನೂರು ತಾಲೂಕಿನ ಅಲಬನೂರು ಗ್ರಾಮದ ಬಸವರಾಜ (33) ಮೃತರು. ತಾಲೂಕಿನ ಶಾಲಿಗನೂರು ಗ್ರಾಮದ ಸಂಬಂಧಿಕರ ಮನೆಗೆ ಸೋಮವಾರ ಆಗಮಿಸಿದ್ದ ಅವರು, ಊರಿಗೆ ಮರಳುತ್ತಿದ್ದರು. ಸೇತುವೆ ಮೇಲೆ ಬೈಕ್ ನಿಲ್ಲಿಸಿ, ನೀರು ಕುಡಿಯಲು ಹೋದಾಗ ಆಕಸ್ಮಿಕವಾಗಿ ಕಾಲು ಜಾರಿ ಬಿದ್ದರು. ಸಮೀಪದಲ್ಲಿ ಯಾರೊಬ್ಬರೂ ಇಲ್ಲದ್ದರಿಂದ ಅವರು ಅಪಾರ ಪ್ರಮಾಣದ ನೀರಿನಲ್ಲಿ ಕೊಚ್ಚಿಹೋಗಿದ್ದರು. ಸೇತುವೆ ಮೇಲಿದ್ದ ಬೈಕ್ ಆಧರಿಸಿ, ಕುಟುಂಬದವರು ಹುಡುಕಾಟ ನಡೆಸಿದರು. ಬಸವರಾಜ ಅವರ ಶವ, ರಾರಾವಿ ಗ್ರಾಮದ ಯಲ್ಲಮ್ಮದೇವಿ ದೇವಸ್ಥಾನ ಹಿಂಬದಿಯಲ್ಲಿ ಪತ್ತೆಯಾಗಿದೆ. ಪಿಎಸ್‌ಐ ಎನ್.ರಘು ಅವರು ಸ್ಥಳಕ್ಕೆ ಭೇಟಿನೀಡಿದ್ದರು. ಸ್ಥಳೀಯ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ