ಆ್ಯಪ್ನಗರ

ಅಕಾಲಿಕ ಮಳೆ : ಸಂತೆ ಅಸ್ತವ್ಯಸ್ತ

ಪಟ್ಟಣದಲ್ಲಿ ಶುಕ್ರವಾರ ಸಂಜೆ ಗುಡುಗು ಸಹಿತ ಮಳೆಯಾಗಿದ್ದು ಬಿಸಿಲಿನಿಂದ ಕಂಗೆಟ್ಟಿದ್ದ ಜನರು ಮಳೆರಾಯನ ಆಗಮನದಿಂದ ತುಸು ತಂಪಿನ ಅನುಭವ ಪಡೆದರು.

Vijaya Karnataka 30 Mar 2019, 5:00 am
ಕೂಡ್ಲಿಗಿ : ಪಟ್ಟಣದಲ್ಲಿ ಶುಕ್ರವಾರ ಸಂಜೆ ಗುಡುಗು ಸಹಿತ ಮಳೆಯಾಗಿದ್ದು ಬಿಸಿಲಿನಿಂದ ಕಂಗೆಟ್ಟಿದ್ದ ಜನರು ಮಳೆರಾಯನ ಆಗಮನದಿಂದ ತುಸು ತಂಪಿನ ಅನುಭವ ಪಡೆದರು.
Vijaya Karnataka Web premature rain suspicious disaster
ಅಕಾಲಿಕ ಮಳೆ : ಸಂತೆ ಅಸ್ತವ್ಯಸ್ತ


ಕಳೆದ 2-3 ದಿನಗಳಿಂದ ಬಿಸಿಲಿನ ತಾಪ ತೀವ್ರಗತಿಯಲ್ಲಿ ಏರಿತ್ತು. ಪರಿಣಾಮವಾಗಿ ಜನ-ಜಾನುವಾರುಗಳು, ಪ್ರಾಣಿ-ಪಕ್ಷಿಗಳು, ತಾಪ ತಾಳದೆ ನೀರು ನೆರಳನ್ನರಸುವಂತಾಗಿತ್ತು. ಶುಕ್ರವಾರ ಮತ್ತಷ್ಟು ಬಿಸಿಲು ಹೆಚ್ಚಾಗಿತ್ತು. ಸಂಜೆ 4ರ ನಂತರ ಮೋಡ ಕವಿದ ವಾತಾವರಣ ಸೃಷ್ಟಿಯಾಗಿ ಗಾಳಿ ಬೀಸತೊಡಗಿತು. ಇದ್ದಕ್ಕಿದ್ದಂತೆ ಗುಡುಗು ಸಹಿತ ಅಲ್ಪ ಪ್ರಮಾಣದಲ್ಲಿ ಮಳೆ ಸುರಿಯಿತು. ಶುಕ್ರವಾರ ಸಂತೆಯ ದಿನವಾಗಿದ್ದರಿಂದ ನಾನಾ ತರಕಾರಿಗಳು, ಸೊಪ್ಪು, ದವಸ ಧಾನ್ಯಗಳು ಮಳೆ ನೀರಲ್ಲಿ ನೆನೆದು ವ್ಯಾಪಾರಸ್ಥರಿಗೆ ಗ್ರಾಹಕರಿಗೆ ಸಮಸ್ಯೆಯಾಯಿತು. ತಾಲೂಕಿನ ಕೆಲ ಗ್ರಾಮಗಳಲ್ಲಿ ಅಲ್ಪ ಪ್ರಮಾಣದ ಮಳೆಯಾಗಿರುವ ಬಗ್ಗೆ ವರದಿಯಾಗಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ