ಆ್ಯಪ್ನಗರ

ಮದುವೆಗೆ ತಡೆ, ಬಾಲಮಂದಿರದ ವಶಕ್ಕೆ

ಸಮೀಪದ ರಾಮಸಾಗರದ ಅಪ್ರಾಪ್ತ ಬಾಲಕಿಗೆ ಸಿರುಗುಪ್ಪದಲ್ಲಿ ಜು.18 ರಂದು ಮದುವೆ ಮಾಡಿಸಲು ಸಜ್ಜಾಗಿದ್ದ ಮಾಹಿತಿ ತಿಳಿದ ಮಕ್ಕಳ ಕಲ್ಯಾಣ ಸಮಿತಿ, ಶುಕ್ರವಾರ ಬಾಲಕಿಯನ್ನು ಪತ್ತೆ ಹಚ್ಚಿ ಬಾಲಮಂದಿರದ ವಶಕ್ಕೆ ನೀಡಿತು.

Vijaya Karnataka 16 Jun 2018, 5:00 am
ಕಂಪ್ಲಿ : ಸಮೀಪದ ರಾಮಸಾಗರದ ಅಪ್ರಾಪ್ತ ಬಾಲಕಿಗೆ ಸಿರುಗುಪ್ಪದಲ್ಲಿ ಜು.18 ರಂದು ಮದುವೆ ಮಾಡಿಸಲು ಸಜ್ಜಾಗಿದ್ದ ಮಾಹಿತಿ ತಿಳಿದ ಮಕ್ಕಳ ಕಲ್ಯಾಣ ಸಮಿತಿ, ಶುಕ್ರವಾರ ಬಾಲಕಿಯನ್ನು ಪತ್ತೆ ಹಚ್ಚಿ ಬಾಲಮಂದಿರದ ವಶಕ್ಕೆ ನೀಡಿತು.
Vijaya Karnataka Web prevention of marriage detention of the childs house
ಮದುವೆಗೆ ತಡೆ, ಬಾಲಮಂದಿರದ ವಶಕ್ಕೆ


ಈ ಕುರಿತು ತಹಸೀಲ್ದಾರ್‌ ಶರಣಮ್ಮ ಮಾತನಾಡಿ, ಗ್ರಾಮದ ಅಪ್ರಾಪ್ತ ಬಾಲಕಿಯನ್ನು ಸಿರುಗುಪ್ಪದಲ್ಲಿನ ವರನೊಂದಿಗೆ ಮದುವೆ ಮಾಡಿಸಲು ಪಾಲಕರು ಸಿದ್ಧತೆ ಮಾಡಿಕೊಂಡಿದ್ದರು. 1098 ಮೂಲಕ ವಿಷಯ ತಿಳಿದ ಸಹಾಯಕ ಆಯುಕ್ತರು, ಗ್ರಾಮಕ್ಕೆ ತೆರಳುವಂತೆ ಸೂಚಿಸಿದ್ದರು. ಮಕ್ಕಳ ಕಲ್ಯಾಣ ಸಮಿತಿಯವರು, ಊರಿಗೆ ಭೇಟಿ ನೀಡಿ ಮನೆಯವರ ಜತೆ ಸಮಾಲೋಚನೆ ನಡೆಸಿದರು. ಬಾಲ್ಯ ಮದುವೆ ಅಪರಾಧವೆಂದು ತಿಳಿಸಿದ್ದು, ಮದುವೆ ದಿನಾಂಕದವರೆಗೆ ಬಾಲಕಿಯನ್ನು ಬಾಲಮಂದಿರಕ್ಕೆ ಒಪ್ಪಿಸಲಾಗಿದೆ ಎಂದು ಮಕ್ಕಳ ಕಲ್ಯಾಣ ಸಮಿತಿಯವರು ತಿಳಿಸಿದ್ದಾರೆ. ಪಿಎಸ್‌ಐ ಬಿ.ನಿರಂಜನ, ಗ್ರಾ.ಪಂ.ಪಿಡಿಒ ಟಿ.ಎ.ರಾಜೇಶ್ವರಿ, ಶಿರಸ್ತೇದಾರ ಶ್ರೀಧರ, ಕಂದಾಯ ನಿರೀಕ್ಷ ಕ ಎಸ್‌.ಎಸ್‌.ತಂಗಡಗಿ, ಮಕ್ಕಳ ಸಹಾಯವಾಣಿ ಸಂಯೋಜಕರಾದ ಚಿದಾನಂದ, ನೇತ್ರಾ, ಗ್ರಾಮ ಲೆಕ್ಕಿಗರಾದ ವೆಂಕಟೇಶ್‌, ಜಿಲಾನ್‌, ಲಕ್ಷ ್ಮಣನಾಯ್ಕ ಇದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ