ಆ್ಯಪ್ನಗರ

ಪರ, ವಿರೋಧ ವ್ಯಕ್ತಪಡಿಸಿದ ಸಾರ್ವಜನಿಕರು

ತಾಲೂಕಿನ ತೋರಣಗಲ್ಲು ಹೋಬಳಿಯ ಮಸಿನಾಯಕನಹಳ್ಳಿಯಲ್ಲಿ ಎಪ್ಸಿಲಾನ್‌ ಕಾರ್ಬನ್‌ ಪ್ರೈ.ಲಿ.ನ ಕಲ್ಲಿದ್ದಲು ಮತ್ತು ಡಾಂಬರ್‌ ಘಟಕವನ್ನು ವಾರ್ಷಿಕ 3 ಲಕ್ಷ ಟನ್‌ ಉತ್ಪಾದನೆ ಸಾಮರ್ಥ್ಯ‌ದಿಂದ 5 ಲಕ್ಷ ಟನ್‌ ಉತ್ಪಾದನೆಗೆ ಹೆಚ್ಚಿಸಲು ಮಂಗಳವಾರ ಪರಿಸರ ಸಾರ್ವಜನಿಕ ಅಹವಾಲು ಆಲಿಕೆ ಸಭೆ ಜರುಗಿತು.

Vijaya Karnataka 6 Mar 2019, 5:00 am
ಸಂಡೂರು : ತಾಲೂಕಿನ ತೋರಣಗಲ್ಲು ಹೋಬಳಿಯ ಮಸಿನಾಯಕನಹಳ್ಳಿಯಲ್ಲಿ ಎಪ್ಸಿಲಾನ್‌ ಕಾರ್ಬನ್‌ ಪ್ರೈ.ಲಿ.ನ ಕಲ್ಲಿದ್ದಲು ಮತ್ತು ಡಾಂಬರ್‌ ಘಟಕವನ್ನು ವಾರ್ಷಿಕ 3 ಲಕ್ಷ ಟನ್‌ ಉತ್ಪಾದನೆ ಸಾಮರ್ಥ್ಯ‌ದಿಂದ 5 ಲಕ್ಷ ಟನ್‌ ಉತ್ಪಾದನೆಗೆ ಹೆಚ್ಚಿಸಲು ಮಂಗಳವಾರ ಪರಿಸರ ಸಾರ್ವಜನಿಕ ಅಹವಾಲು ಆಲಿಕೆ ಸಭೆ ಜರುಗಿತು.
Vijaya Karnataka Web pro opposition expressed by the public
ಪರ, ವಿರೋಧ ವ್ಯಕ್ತಪಡಿಸಿದ ಸಾರ್ವಜನಿಕರು


ಸಾರ್ವಜನಿಕ ಅಹವಾಲು ಸಭೆಯನ್ನು ಉದ್ದೇಶಿಸಿ ಜಿಲ್ಲಾ ಕಾರ್ಮಿಕ ಸಂಘಟನೆಯ ಸಂಚಾಲಕ ಸೈಯದ್‌ ಸಿಕಂದರ್‌, ಸಿಐಟಿಯು ಅಧ್ಯಕ್ಷ ಚನ್ನಬಸಯ್ಯ, ದೇವದಾಸಿ ವಿಮೋಚನೆ ಸಂಘದ ಜಿಲ್ಲಾ ಕಾರ್ಯದರ್ಶಿ ಎ.ಸ್ವಾಮಿ, ಜನ ಸಂಗ್ರಾಮ ಪರಿಷತ್‌ನ ಟಿ.ಎಂ.ಶಿವಕುಮಾರ್‌, ಎ.ಜಿ.ಶ್ರೀಶೈಲ ಮಾತನಾಡಿ, ಡಾಂಬರ್‌ ಕಾರ್ಖಾನೆಗೆ ಸಂಬಂಧಿಸಿದ ಪ್ರಕರಣ ಧಾರವಾಡದ ಹೈ.ಕೋರ್ಟ್‌ ಪೀಠದಲ್ಲಿ ವಿಚಾರಣೆಯಲ್ಲಿದೆ. ವಿಚಾರಣೆ ಇತ್ಯರ್ಥಪಡಿಸುವವರೆಗೆ ಉತ್ಪಾದನೆ ಹೆಚ್ಚಳದ ಕುರಿತ ಸಾರ್ವಜನಿಕ ಅಹವಾಲು ಸಭೆ ನಡೆಸುವುದು ಬೇಡ ಎಂದು ಆಗ್ರಹಿಸಿದರು.

ಕಂಪನಿ ಡಾಂಬರ್‌ ಉತ್ಪಾದನೆ ಪ್ರಾರಂಭದಿಂದ ಸ್ಥಳೀಯ ಪ್ರದೇಶಾಭಿವೃದ್ಧಿ ನಿಧಿಯಡಿ ಸುತ್ತಲಿನ ಗ್ರಾಮಗಳಲ್ಲಿ ಹಮ್ಮಿಕೊಂಡ ಸಾಮಾಜಿಕ ಜವಾಬ್ದಾರಿಯ ಕಾಮಗಾರಿಗಳಾವು, ಸ್ವಚ್ಛ ಪರಿಸರ ನಿರ್ಮಾಣ ಮಾಡಿದ್ದಾದರೂ ಎಲ್ಲಿ, ಎಷ್ಟು ಹಣ ಖರ್ಚು ಮಾಡಿದ್ದೀರಿ. ನಿಖರ ವರದಿಯನ್ನು ಸಭೆಯಲ್ಲಿ ಮಂಡಿಸಿರಿ ಎಂದು ಆಗ್ರಹಿಸಿದರು.

ಪ್ರತಿಕ್ರಿಯಿಸಿದ ಕಂಪನಿಯ ಸಿಬ್ಬಂದಿ ಸಿಎಸ್‌ಆರ್‌ ಅಡಿ 9 ಲಕ್ಷ ರೂ. ಖರ್ಚುಮಾಡಲಾಗಿದೆ. ಯಾವ ಗ್ರಾಮದಲ್ಲಿ, ಯಾವ ಕಾಮಗಾರಿ ಮಾಡಿದ್ದೀರಿ, ಯೋಜನಾ ವರದಿ ನೀಡಿ ಎಂದು ಜನ ಆಗ್ರಹಿಸಿದರು. ಕಾರ್ಖಾನೆಯ ಪರ ಮಾತನಾಡಿದ ಕೆಲವರಿಗೂ ವಿರೋಧಿಸಿದ ಮುಖಂಡರ ನಡುವೆ ಕೆಲ ಕಾಲ ವಾಗ್ವಾದ ನಡೆಯಿತು. ಮಧ್ಯ ಪ್ರವೇಶಿಸಿದ ಪೊಲೀಸರು ವಾತಾವರಣ ತಿಳಿಗೊಳಿಸಿದರು.

ಅಪರ ಜಿಲ್ಲಾಧಿಕಾರಿ ಸತೀಶಕುಮಾರ್‌ ಮಾತನಾಡಿ, ಕಾರ್ಖಾನೆಯ ಪರ, ವಿರೋಧದ ಅಭಿಪ್ರಾಯಗಳನ್ನು ಸರಕಾರಕ್ಕೆ ಸಲ್ಲಿಸಲಾಗುವುದು ಎಂದರು. ಈ ಸಂದರ್ಭದಲ್ಲಿ ಪರಿಸರ ಅಧಿಕಾರಿಗಳಾದ ಕೆ.ಎಂ.ನಾಗರಾಜ, ಮಂಜುನಾಥ, ಹಮಾಲರ ಸಂಘದ ತಾಲೂಕು ಅಧ್ಯಕ್ಷ ತಿಪ್ಪೇಸ್ವಾಮಿ, ರಾಜ್ಯ ಪ್ರಾಂತ ರೈತ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ಶಿವಶಂಕರ್‌, ತಾಲೂಕು ಅಧ್ಯಕ್ಷ ಕಾಲೂಬಾ, ಜಿಲ್ಲಾ ಕಾರ್ಮಿಕ ಸಂಘಟನೆಯ ಅಧ್ಯಕ್ಷ ಎಚ್‌.ಪಂಪಾಪತಿ, ಕಾರ್ಯದರ್ಶಿ ಯು.ಕೋನಪ್ಪ, ಮುಖಂಡರಾದ ವಡ್ಡರಹಳ್ಳಿ ಸ್ವಾಮಿ, ಕುಡಿತಿನಿ ಕಾಮೇಶ, ಜಂಗ್ಲಿಸಾಬ್‌, ಬಸವರಾಜ, ಮೂಲಿಮನಿ ಈರಣ್ಣ, ಹೊನ್ನೂರುಸಾಬ್‌ ಸೇರಿದಂತೆ ಇತರರಿದ್ದರು.


ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ