ಆ್ಯಪ್ನಗರ

ಗಣಿ ಲೂಟಿಕೋರರಿಗೆ ರಕ್ಷಣೆ: ಎಸ್.ಆರ್.ಹಿರೇಮಠ್

ಅಕ್ರಮ ಗಣಿಗಾರಿಕೆ ವಿರುದ್ಧ ತೊಡೆ ತಟ್ಟಿ ಅಧಿಕಾರಕ್ಕೆ ಬಂದ ಹಿಂದಿನ ಸಿಎಂ ಸಿದ್ದರಾಮಯ್ಯ ಸರಕಾರ, ಅಧಿಕಾರಕ್ಕೆ ಬಂದ ಮೇಲೆ ಸಿ ಕೆಟಗರಿ ಗಣಿಗಳಲ್ಲಿ ಲೂಟಿ ಹೊಡೆಯಲಾದ ಅದಿರಿನ ಮೊತ್ತ ವಸೂಲಿ ಮಾಡುವಲ್ಲಿ ನಿರ್ಲಕ್ಷ್ಯತೋರಿ, ಲೂಟಿಕೋರರನ್ನು ರಕ್ಷಿಸಿತು ಎಂದು ಸಮಾಜ ಪರಿವರ್ತನೆ ಸಮುದಾಯದ ಮುಖ್ಯಸ್ಥ ಎಸ್.ಆರ್.ಹಿರೇಮಠ್ ಆರೋಪಿಸಿದರು.

Vijaya Karnataka 11 Aug 2018, 12:00 am
ಸಂಡೂರು: ಅಕ್ರಮ ಗಣಿಗಾರಿಕೆ ವಿರುದ್ಧ ತೊಡೆ ತಟ್ಟಿ ಅಧಿಕಾರಕ್ಕೆ ಬಂದ ಹಿಂದಿನ ಸಿಎಂ ಸಿದ್ದರಾಮಯ್ಯ ಸರಕಾರ, ಅಧಿಕಾರಕ್ಕೆ ಬಂದ ಮೇಲೆ ಸಿ ಕೆಟಗರಿ ಗಣಿಗಳಲ್ಲಿ ಲೂಟಿ ಹೊಡೆಯಲಾದ ಅದಿರಿನ ಮೊತ್ತ ವಸೂಲಿ ಮಾಡುವಲ್ಲಿ ನಿರ್ಲಕ್ಷ್ಯತೋರಿ, ಲೂಟಿಕೋರರನ್ನು ರಕ್ಷಿಸಿತು ಎಂದು ಸಮಾಜ ಪರಿವರ್ತನೆ ಸಮುದಾಯದ ಮುಖ್ಯಸ್ಥ ಎಸ್.ಆರ್.ಹಿರೇಮಠ್ ಆರೋಪಿಸಿದರು.
Vijaya Karnataka Web protection of mine spoilers sr hiramat
ಗಣಿ ಲೂಟಿಕೋರರಿಗೆ ರಕ್ಷಣೆ: ಎಸ್.ಆರ್.ಹಿರೇಮಠ್


ಇಲ್ಲಿನ ಐತಿಹಾಸಿಕ ಕುಮಾರಸ್ವಾಮಿ ದೇಗುಲಕ್ಕೆ ಭೇಟಿ ನೀಡಿದ ನಂತರ ಶುಕ್ರವಾರ ಸುದ್ದಿಗಾರರೊಂದಿಗೆ ಮಾತನಾಡಿದರು. ಎಚ್.ಕೆ.ಪಾಟೀಲ್ ನೇತತ್ವದ ಸಂಪುಟ ಉಪಸಮಿತಿ, ರಾಜ್ಯದಲ್ಲಿ ಲಕ್ಷ ಕೋಟಿ ರೂ.ಮೌಲ್ಯದ ಅಕ್ರಮ ಅದಿರು ಸಾಗಣೆ ಮಾಡಲಾಗಿದೆ ಎನ್ನುವ ಅಂಕಿ ಅಂಶ ಸಂಗ್ರಹಿಸಿತು. ನಂತರ ಅಕ್ರಮ ಗಣಿ ಹಣ ವಸೂಲಿ ಮಾಡದೆ ಲೂಟಿಕೋರರನ್ನು ರಕ್ಷಿಸಿತು ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಸಿ.ಕೆಟಗರಿಗೆ ಸೇರಿದ ಗಣಿಗಳನ್ನು ಹರಾಜು ಹಾಕಿ ಎಂದು ಸುಪ್ರೀಂಕೋರ್ಟ್ ಎಲ್ಲೂ ನೇರವಾಗಿ ಹೇಳಿಲ್ಲ. ರಾಜ್ಯದ ವಿವೇಚನೆಗೆ ಬಿಟ್ಟದ್ದು ಎಂದು ಹೇಳಿತ್ತು. ಸರಕಾರದ ಗಣಿ ಸಂಬಂಧಿತ ಎಲ್ಲ ಇಲಾಖೆಗಳು ಕಣ್ಮುಚ್ಚಿದ್ದರಿಂದ ಅಕ್ರಮ ಹೆಚ್ಚಾಗಿತ್ತು. ಪರಿಸರ ಪೂರ್ಣ ಪ್ರಮಾಣದಲ್ಲಿ ನಾಶವಾಗಿದ್ದನ್ನು ಮನಗಂಡ ಸುಪ್ರೀಂಕೋರ್ಟ್, ಸಿ ಕೆಟಗರಿಗೆ ಸೇರಿದ ಗಣಿ ಲೂಟಿಕೋರರಿಂದ ಹಣ ವಸೂಲಿ ಮಾಡಿ ಪರಿಸರ ಪುನರುಜ್ಜೀವನ, ಪುನರುತ್ಥಾನ ಮಾಡಲು ಹೇಳಿತು. ಸರಕಾರ ಪರಿಸರ ಸೂಕ್ಷ್ಮವಲಯ ಸ್ಥಾಪಿಸುವ ಕಾಳಜಿ ತೋರಬೇಕಿತ್ತು. ಬೇಕಾಬಿಟ್ಟಿಯಾಗಿ ನೈಸರ್ಗಿಕ ಸಂಪನ್ಮೂಲ ಬಗೆದು ಮುಂದಿನ ಪೀಳಿಗೆಗೆ ಪರಿಸರ ಇಲ್ಲದಂತೆ ಮಾಡಲಾಗುತ್ತಿದ್ದು, ಸರಕಾರಗಳು ಯೋಚಿಸಬೇಕು ಎಂದರು.

ರಾಜ್ಯ ಪುರಾತತ್ವ ಇಲಾಖೆ ವ್ಯಾಪ್ತಿಯ ಜಂಬುನಾಥೇಶ್ವರ ದೇಗುಲವನ್ನು ಗಣಿಗಳಿಂದ ಸಂರಕ್ಷಣೆ ಮಾಡಲು 2013 ರಲ್ಲಿ ಸುಪ್ರೀಂಕೋರ್ಟ್ ಆದೇಶ ನೀಡಿತ್ತು. ಕೇಂದ್ರ ಪುರಾತತ್ವ ಇಲಾಖೆ ಐತಿಹಾಸಿಕ ಕುಮಾರಸ್ವಾಮಿ ದೇಗುಲದ 2 ಕಿ.ಮೀ ಸುತ್ತ ಗಣಿಗಾರಿಕೆ ನಡೆಸದಂತೆ ಆದೇಶ ಹೊರಡಿಸಬೆಕು. ಸುಪ್ರೀಂಕೋರ್ಟ್‌ನ ಪ್ರತ್ಯೇಕ ಆದೇಶಕ್ಕಾಗಿ ಕಾಯಬಾರದು. ವಿಧಾನಸಭೆ ಚುನಾವಣೆಗೆ ಮುನ್ನ ಕುಮಾರಸ್ವಾಮಿ ದೇಗುಲಕ್ಕೆ ಭೇಟಿ ನೀಡಿದಾಗ ದೇಗುಲದ ಸುತ್ತ 2 ಕಿ.ಮೀ.ವ್ಯಾಪ್ತಿಯಲ್ಲಿ ಗಣಿಗಾರಿಕೆಗೆ ಅವಕಾಶ ನೀಡುವುದಿಲ್ಲ ಎಂದು ನೀಡಿದ್ದ ಭರವಸೆಯನ್ನು ಸಿಎಂ ಕುಮಾರಸ್ವಾಮಿ ಈಡೇರಿಸಬೇಕು. ಜಿಂದಾಲ್ ಸಂಸ್ಥೆ ಎಂಎಂಎಲ್‌ಗೆ ನೀಡಬೇಕಾದ ಬಾಕಿ 870 ಕೋಟಿ ರೂ.ವಸೂಲಿಗೆ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು. ಈ ಸಂದರ್ಭದಲ್ಲಿ ಜನ ಸಂಗ್ರಾಮ ಪರಿಷತ್‌ನ ಟಿ.ಎಂ.ಶಿವಕುಮಾರ್, ಎ.ಜಿ.ಶ್ರೀಶೈಲ ಸೇರಿದಂತೆ ಇತರರಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ