ಆ್ಯಪ್ನಗರ

ಭೂಸ್ವಾಧೀನ ಮಸೂದೆಗೆ ಅಂಕಿತ ಹಾಕದಂತೆ ಧರಣಿ

ಸಮ್ಮಿಶ್ರ ಸರಕಾರ ಉದ್ದೇಶಿತ ಭೂಸ್ವಾಧೀನ ಮಸೂದೆಗೆ ರಾಜ್ಯಪಾಲರು ಅಂಕಿತ ಹಾಕದಂತೆ ಒತ್ತಾಯಿಸಿ ಪ್ರಾಂತರೈತಸಂಘದ ತಾಲೂಕು ಪದಾಧಿಕಾರಿಗಳು ತಹಿಸಿಲ್‌ ಕಚೇರಿ ಎದುರು ಇತ್ತೀಚೆಗೆ ಧರಣಿ ನಡೆಸಿದರು.

Vijaya Karnataka 6 Mar 2019, 5:00 am
ಹಗರಿಬೊಮ್ಮನಹಳ್ಳಿ : ಸಮ್ಮಿಶ್ರ ಸರಕಾರ ಉದ್ದೇಶಿತ ಭೂಸ್ವಾಧೀನ ಮಸೂದೆಗೆ ರಾಜ್ಯಪಾಲರು ಅಂಕಿತ ಹಾಕದಂತೆ ಒತ್ತಾಯಿಸಿ ಪ್ರಾಂತರೈತಸಂಘದ ತಾಲೂಕು ಪದಾಧಿಕಾರಿಗಳು ತಹಿಸಿಲ್‌ ಕಚೇರಿ ಎದುರು ಇತ್ತೀಚೆಗೆ ಧರಣಿ ನಡೆಸಿದರು.
Vijaya Karnataka Web protest agnist declaration on land acquisition bill
ಭೂಸ್ವಾಧೀನ ಮಸೂದೆಗೆ ಅಂಕಿತ ಹಾಕದಂತೆ ಧರಣಿ


ಸಂಘದ ಜಿಲ್ಲಾ ಉಪಾಧ್ಯಕ್ಷ ಕೊಟಿಗಿ ಮಲ್ಲಿಕಾರ್ಜುನ ಮಾತನಾಡಿ, ರಾಜ್ಯ ಸರಕಾರ ಜಾರಿಗೊಳಿಸಲು ಉದ್ದೇಶಿತ ಭೂಸ್ವಾದೀನ ಮಸೂದೆ ರೈತ ವಿರೋಧಿಯಾಗಿದೆ. ವಿಧಾನಸಭೆ ಅಧಿವೇಶನದಲ್ಲಿ ಭೂಸ್ವಾಧೀನ ತಿದ್ದುಪಡಿಯ ಮಸೂದೆ ಕುರಿತಂತೆ ಚರ್ಚೆ ನಡೆಸದೆ ರಾಜ್ಯಪಾಲರ ಅಂಕಿತಕ್ಕೆ ಕಳುಹಿಸಲಾಗಿದೆ. ಸರಕಾರ ಸ್ವಾದೀನಪಡಿಸಿಕೊಳ್ಳುವ ರೈತರ ಜಮೀನಿಗೆ ಸರಕಾರದಿಂದ ನ್ಯಾಯಯುತ ಪರಿಹಾರ ಒದಗುವುದಿಲ್ಲ. ಕಾಯಿದೆ ಜಾರಿಯಾದರೆ ರಾಜ್ಯದ 65 ಲಕ್ಷ ರೈತ ಕುಟುಂಬಗಳ ಬದುಕಿನ ಮೇಲೆ ಗದಾಪ್ರಹಾರ ನಡೆಸಿದಂತಾಗಲಿದೆ. ಈ ಹಿನ್ನೆಲೆಯಲ್ಲಿ ಪರಿಸ್ಥಿತಿ ಕೈಮೀರಿ ಹೋಗುವ ಮುನ್ನ ಮಸೂದೆಗೆ ರಾಜ್ಯಪಾಲರು ಅಂಕಿತ ಹಾಕದæೕ ತಡೆಯೊಡ್ಡಬೇಕು ಎಂದು ಆಗ್ರಹಿಸಿದರು.

ಸಿಐಟಿಯು ತಾಲೂಕು ಅಧ್ಯಕ್ಷ ಎಸ್‌.ಜಗನ್ನಾಥ ಮಾತನಾಡಿ, ರಾಜ್ಯದ ರೈತರ ಅಭಿಪ್ರಾಯಪಡೆಯದೆ ತರಾತುರಿಯಿಂದ ರೂಪಿಸಲಾದ ಕಾಯಿದೆಯಿಂದ ರೈತರಿಗೆ ಅಪಾಯ ತಪ್ಪಿದ್ದಲ್ಲ. ಸರಕಾರ ಮತ್ತು ಪ್ರತಿಪಕ್ಷ ಗಳ ನಡುವಿನ ಗದ್ದಲದಲ್ಲೆ ಮಸೂದೆ ಅಂಗೀಕಾರಕ್ಕೆ ರಾಜ್ಯಪಾಲರಿಗೆ ಕಳುಹಿಸಿರುವುದು ಸರಕಾರದ ರೈತ ವಿರೋಧಿ ನೀತಿಗೆ ಸಾಕ್ಷಿಯಾಗಿದೆ. ರಾಜ್ಯಪಾಲರು ಮಸೂದೆ ನಿರಾಕರಿಸಬೇಕು ಎಂದು ಒತ್ತಾಯಿಸಿದರು. ರಾಜ್ಯ ದೇವದಾಸಿ ವಿಮೋಚನೆ ಸಂಘದ ರಾಜ್ಯ ಪ್ರಧಾನ ಕಾರ್ಯದರ್ಶಿ ಬಿ.ಮಾಳಮ್ಮ ಮಾತನಾಡಿದರು. ಪ್ರಾಂತರೈತ ಸಂಘದ ತಾಲೂಕು ಕಾರ್ಯದರ್ಶಿ ಎಚ್‌.ಮಂಜುನಾಥ, ಮುಖಂಡರಾದ ಪಿ.ಚಾಂದ್‌ಬಿ, ಸಿ.ಹನುಮಂತಪ್ಪ, ಜಿ.ಸರೋಜಾ, ಸರ್ದಾರ್‌ ಹುಲಿಗೆಮ್ಮ ಇತರರಿದ್ದರು. ತಹಸೀಲ್ದಾರ್‌ ವಿಜಯಕುಮಾರ್‌ಗೆ ಮನವಿ ಸಲ್ಲಿಸಿದರು.


ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ