ಆ್ಯಪ್ನಗರ

ಅತ್ಯಾಚ್ಯಾರ ಖಂಡಿಸಿ ಡಿವೈಎಫ್‌ಐನಿಂದ ಪ್ರತಿಭಟನೆ

ಮಹಿಳೆಯರ ಮತ್ತು ಮಕ್ಕಳ ಮೇಲಿನ ಅತ್ಯಾಚಾರಗಳನ್ನು ಖಂಡಿಸಿ ಮತ್ತು ಸೂಕ್ತ ಕ್ರಮಗಳಿಗೆ ಒತ್ತಾಯಿಸಿ ಭಾರತ ಪ್ರಜಾಸತ್ತಾತ್ಮಕ ಯುವಜನ ಫೆಡರೇಷನ್‌(ಡಿ.ವೈ.ಎಫ್‌.ಐ)ನ ಸ್ಥಳೀಯ ತಾಲೂಕು ಸಮಿತಿಯು ತಹಸೀಲ್ದಾರ್‌ ಗಂಗಪ್ಪರ ಮೂಲಕ ಗುರುವಾರ ಪ್ರಧಾನಿ ನರೇಂದ್ರ ಮೋದಿಯವರಿಗೆ ಮನವಿಪತ್ರ ರವಾನಿಸಿತು.

Vijaya Karnataka 27 Apr 2018, 5:00 am
ಹೊಸಪೇಟೆ ; ಮಹಿಳೆಯರ ಮತ್ತು ಮಕ್ಕಳ ಮೇಲಿನ ಅತ್ಯಾಚಾರಗಳನ್ನು ಖಂಡಿಸಿ ಮತ್ತು ಸೂಕ್ತ ಕ್ರಮಗಳಿಗೆ ಒತ್ತಾಯಿಸಿ ಭಾರತ ಪ್ರಜಾಸತ್ತಾತ್ಮಕ ಯುವಜನ ಫೆಡರೇಷನ್‌(ಡಿ.ವೈ.ಎಫ್‌.ಐ)ನ ಸ್ಥಳೀಯ ತಾಲೂಕು ಸಮಿತಿಯು ತಹಸೀಲ್ದಾರ್‌ ಗಂಗಪ್ಪರ ಮೂಲಕ ಗುರುವಾರ ಪ್ರಧಾನಿ ನರೇಂದ್ರ ಮೋದಿಯವರಿಗೆ ಮನವಿಪತ್ರ ರವಾನಿಸಿತು.
Vijaya Karnataka Web BLR-BLY26HPT2


ಸ್ಥಳೀಯ ತಹಸಿಲ್‌ ಕಚೇರಿ ಎದುರು ಪ್ರತಿಭಟನೆ ನಡೆಸಿದ ಡಿವೈಎಫ್‌ಐನ ಪದಾಧಿಕಾರಿಗಳು ಹಾಗೂ ಸದಸ್ಯರು, ದೇಶದಲ್ಲಿ ನಡೆಯುತ್ತಿರುವ ಮಕ್ಕಳ ಮತ್ತು ಮಹಿಳೆಯರ ಮೇಲಿನ ಅತ್ಯಾಚಾರ, ಲೈಂಗಿಕ ದೌರ್ಜನ್ಯಗಳನ್ನು ಡಿ.ವೈ.ಎಫ್‌.ಐ ಸಂಘಟನೆ ತ್ರೀವವಾಗಿ ಖಂಡಿಸುತ್ತದೆ ಹಾಗೂ ಆಘಾತವನ್ನು ವ್ಯಕ್ತಪಡಿಸುತ್ತದೆ. ಕಟುವಾ, ಉನ್ನಾವ್‌ ಪ್ರಕರಣಗಳು ದೇಶ ತಲೆತಗ್ಗಿಸುವಂತಹ ಪರಿಸ್ಥಿತಿಯನ್ನು ತರುವುದರ ಜತೆಗೆ ದೇಶವು ಎತ್ತ ಸಾಗುತ್ತಿದೆ ಎಂದು ಆಳವಾಗಿ ಯೋಚಿಸುವ ಮತ್ತು ಆತಂಕಗೊಳುವ ಪರಿಸ್ಥಿತಿ ಪ್ರತಿಯೊಬ್ಬ ಭಾರತೀಯ ಪ್ರಜೆಯನ್ನು ಕಾಡುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು. ಇಂತಹ ಘಟನೆಗಳು ಮತ್ತೆ ಮರುಕಳಿಸದ ರೀತಿಯಲ್ಲಿ ಒಂದು ವ್ಯವಸ್ಥಿತವಾದ ಸಮಾಜವನ್ನು ರೂಪಿಸುವ ನಿಟ್ಟಿನಲ್ಲಿ ಸರಕಾರ ಕ್ರಮಕೈಗೊಳ್ಳಬೇಕು ಎಂದು ಪ್ರತಿಭಟನಾಕಾರರು ಆಗ್ರಹಿಸಿದರು. ಸಂಘಟನೆಯ ಪದಾಧಿಕಾರಿಗಳಾದ ಬಿಸಾಟಿ ಮಹೇಶ್‌, ವಿ.ಸ್ವಾಮಿ, ಕಲ್ಯಾಣಯ್ಯ, ಕೆ.ರಮೇಶ್‌, ಈ. ಮಂಜುನಾಥ್‌, ಬಂಡೆ ತಿರುಕಪ್ಪ, ಕಿನ್ನಾಳ್‌ ಹನುಮಂತ, ಜೆ.ಶಿವುಕುಮಾರ್‌ ಮತ್ತಿತರರಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ