ಆ್ಯಪ್ನಗರ

ಶ್ರೀರಾಮುಲುಗೆ ಡಿಸಿಎಂ ಸ್ಥಾನಕ್ಕೆ ಒತ್ತಾಯಿಸಿ ಅಭಿಮಾನಿಗಳಿಂದ ಪ್ರತಿಭಟನೆ

ಸಿಎಂ ಯಡಿಯೂರಪ್ಪ ಅವರ ಜತೆ ತಮ್ಮ ನೋವನ್ನು ಹೇಳಿಕೊಂಡಿರುವ ಶ್ರೀರಾಮುಲು, ಪಕ್ಷಕ್ಕಾಗಿ ಡಿಸಿಎಂ ಸ್ಥಾನವನ್ನು ತ್ಯಜಿಸಿದ್ದೇನೆ. ಹಾಗಾಗಿ ಹೆಚ್ಚಿನ ಪ್ರಾಮುಖ್ಯತೆ ಇರುವ ಖಾತೆಯನ್ನು ನೀಡುತ್ತೀರಿ ಎಂಬ ನಿರೀಕ್ಷೆಯನ್ನು ಇಟ್ಟುಕೊಂಡಿದ್ದೆ ಎಂದು ಬಿಎಸ್‌ವೈ ಬಳಿ ಹೇಳಿಕೊಂಡಿದ್ದರು.

Vijaya Karnataka Web 27 Aug 2019, 2:19 pm
ಹೊಸಪೇಟೆ: ಶ್ರೀರಾಮುಲು ಅವರಿಗೆ ಉಪ ಮುಖ್ಯಮಂತ್ರಿ ಸ್ಥಾನ ನೀಡದ್ದಕ್ಕೆ ಆಕ್ರೋಶ ವ್ಯಕ್ತ ಪಡಿಸಿ ಅವರ ಅಭಿಮಾನಿಗಳು ನಗರದಲ್ಲಿ ಪ್ರತಿಭಟನೆಗಿಳಿದಿದ್ದಾರೆ. ನಗರದ ರೋಟರಿ ವೃತ್ತದಲ್ಲಿ ಟೈರ್ ಗೆ ಬೆಂಕಿ ಹಚ್ಚಿ ಆಕ್ರೋಶ ವ್ಯಕ್ತಪಡಿಸಿದ ನೂರಾರು ಪ್ರತಿಭಟನಾಕಾರರು, ಶ್ರೀ ರಾಮುಲುಗೆ ಡಿ.ಸಿ.ಎಂ.ಪಟ್ಟ ನೀಡುವಂತೆ ಒತ್ತಾಯಿಸಿದರು.
Vijaya Karnataka Web Strike


ಶ್ರೀ ರಾಮುಲುಗೆ ಆಗಿರುವ ಅನ್ಯಾಯ ಉತ್ತರ ಕರ್ನಾಟಕಕ್ಕೆ ಆದಂತಹ ಅನ್ಯಾಯ, ದಕ್ಷಿಣ ಕರ್ನಾಟಕದವರೇ ಮುಖ್ಯಮಂತ್ರಿ, ಉಪ ಮುಖ್ಯಮಂತ್ರಿ ಆಗಬೇಕಾ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಉತ್ತರ ಕರ್ನಾಟಕದ ಬಗ್ಗೆ ನಿರ್ಲಕ್ಷ ಧೋರಣೆ ತೋರಿದ್ರೆ ಮತ್ತೆ ಉತ್ತರ ಕರ್ನಾಟಕ ಪ್ರತ್ಯೇಕ ಕೂಗು ಏಳುತ್ತೆ ಎಚ್ಚರ ಎಂದ ಪ್ರತಿಭಟನಾಕಾರರು, ಶ್ರೀ ರಾಮುಲು ಉತ್ತರ ಕರ್ನಾಟಕದ ಜನ ಪ್ರಿಯ ನಾಯಕ, ಅವರಿಗೆ ಡಿ.ಸಿ.ಎಂ.ಸ್ಥಾನ ನೀಡಲೇ ಬೇಕೆಂದು ಪಟ್ಟು ಹಿಡಿದಿದ್ದಾರೆ.

ಬಿಎಸ್‌ವೈ ಬಳಿ ಭಾರಿ ಅಸಮಾಧಾನ, ಟ್ವೀಟರ್‌ನಲ್ಲಿ ಫುಲ್‌ ಸಮಾಧಾನ; ಇದು ಶ್ರೀರಾಮುಲು ವರಸೆ

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ