ಆ್ಯಪ್ನಗರ

ಪ್ರಯಾಣಿಕರಿಗೆ ಬ್ಯಾಗ್‌ ಮರಳಿಸಿದ ರೈಲ್ವೆ ಸಿಬ್ಬಂದಿ

ವಿದ್ಯಾರ್ಥಿಯೊಬ್ಬರು ರೈಲಿನಲ್ಲಿ ಕಳೆದುಕೊಂಡಿದ್ದ ಬ್ಯಾಗ್‌ ಅನ್ನು ಪುನ ಆತನಿಗೆ ಒಪ್ಪಿಸಿದ ಘಟನೆ ಶುಕ್ರವಾರ ನಡೆದಿದೆ.

Vijaya Karnataka 12 Jan 2019, 5:00 am
ಹೊಸಪೇಟೆ ; ವಿದ್ಯಾರ್ಥಿಯೊಬ್ಬರು ರೈಲಿನಲ್ಲಿ ಕಳೆದುಕೊಂಡಿದ್ದ ಬ್ಯಾಗ್‌ ಅನ್ನು ಪುನ ಆತನಿಗೆ ಒಪ್ಪಿಸಿದ ಘಟನೆ ಶುಕ್ರವಾರ ನಡೆದಿದೆ.
Vijaya Karnataka Web railway staff returning the bag to passengers
ಪ್ರಯಾಣಿಕರಿಗೆ ಬ್ಯಾಗ್‌ ಮರಳಿಸಿದ ರೈಲ್ವೆ ಸಿಬ್ಬಂದಿ


ವಿದ್ಯಾರ್ಥಿ ಸಾಯಿಕೃಷ್ಣ ಎಂಬುವವರು ಜ.1 ರಂದು ಗುಂಟೂರಿನಿಂದ ವಾಸ್ಕೋಗೆ ಸಿಇಟಿ ಪರೀಕ್ಷೆ ಬರೆಯಲು ತೆರಳುತಿದ್ದರು. ಈ ಸಂದರ್ಭದಲ್ಲಿ ಸಹಪ್ರಯಾಣಿಕರೊಬ್ಬರು ತಿಳಿಯದೇ ಕೃಷ್ಣಸಾಯಿ ಅವರ ಬ್ಯಾಗ್‌ ತೆಗೆದುಕೊಂಡು ಹೊಸಪೇಟೆಯಲ್ಲಿ ಇಳಿದಿದ್ದಾರೆ. ಬಳಿಕ ಅವರಿಗೆ ಈ ಬ್ಯಾಗ್‌ ತಮ್ಮದಲ್ಲಾ ಎಂದು ತಿಳಿದು ಬಂದಿದೆ. ಹಾಗಾಗಿ ನಗರದ ರೈಲ್ವೆ ನಿಲ್ದಾಣದ ವ್ಯವಸ್ಥಾಪಕರ ಸುಪರ್ದಿಗೆ ಒಪ್ಪಿಸಿದ್ದಾರೆ. ಈ ಬ್ಯಾಗ್‌ ಚಿತ್ರವನ್ನು ತೆಗೆದು, ಟಿಕೆಟ್‌ ಕಲೆಕ್ಟರ್‌ ಸಾಮಾಜಿಕ ತಾಣಗಳಲ್ಲಿ ಹಂಚಿಕೊಂಡಿದ್ದರು, ಇದನ್ನು ಗಮನಿಸಿದ ವಿದ್ಯಾರ್ಥಿ ಸಾಯಿಕೃಷ್ಣ ರೈಲ್ವೆ ಸಿಬ್ಬಂದಿಯವರನ್ನು ಸಂಪರ್ಕಿಸಿ ಬ್ಯಾಗ್‌ ತಮ್ಮದೆಂದು ಹೇಳಿದ್ದರು. ವಿದ್ಯಾರ್ಥಿ ಪರೀಕ್ಷೆ ಬರೆದು ಊರಿಗೆ ಮರಳುವಾಗ ರೈಲ್ವೆ ನಿಲ್ದಾಣದ ವ್ಯವಸ್ಥಾಪಕ ಉಮರ್‌ ಬಾನಿ ಮೂಲ ವಾರಸುದಾರರಿಗೆ ಬ್ಯಾಗ್‌ ವಿತರಿಸಿದರು. ಈ ಸಂದರ್ಭದಲ್ಲಿ ಆರ್‌ಎಫ್‌ಒ ಸಿಬ್ಬಂದಿ ಸ್ವಪ್ನಾ ಚಾವ್ಲಾ, ರೈಲ್ವೆ ನಿಲ್ದಾಣದ ಮಾಸ್ಟರ್‌ ಶಿವರಾಜ್‌ ವೀಣಾ, ರೈಲ್ವೆ ಜಿಆರ್‌ಪಿ ಪೊಲೀಸ್‌ ಸಂತೋಷ, ಶರಣಪ್ಪ ಇದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ