ಹೊಸಪೇಟೆ:ತುಂಗಭದ್ರಾ ಮಂಡಳಿಯ ಕಾರ್ಯದರ್ಶಿಯಾಗಿರುವ ಡಿ.ರಂಗಾರೆಡ್ಡಿ ಅವರನ್ನು ಮಂಡಳಿಯ ಚೇರ್ಮನ್ರನ್ನಾಗಿ ನೇಮಿಸಿ ಭಾರತ ಸರಕಾರದ ಜಲ ಸಚಿವಾಲಯ ಇತ್ತೀಚೆಗೆ ಆದೇಶ ಹೊರಡಿಸಿದೆ.
ತುಂಗಭದ್ರಾ ಮಂಡಳಿ ಕರ್ನಾಟಕ, ಆಂಧ್ರಪ್ರದೇಶ ಹಾಗೂ ತೆಲಂಗಾಣ ರಾಜ್ಯಗಳ ನಡುವೆ ತುಂಗಭದ್ರಾ ಜಲಾಶಯದಿಂದ ನಿಯಮಾನುಸಾರ ನೀರಿನ ಹಂಚಿಕೆ ಮಾಡುತ್ತದೆ. ಮಂಡಳಿಯ ಕಾರ್ಯದರ್ಶಿಯಾಗಿ ಸೇವಾನುಭವ ಹೊಂದಿರುವ ಡಿ. ರಂಗಾರೆಡ್ಡಿ ಅವರು ಅ.23ರಂದು ಮಂಡಳಿಯ ಅಧ್ಯಕ್ಷ ರಾಗಿ ಹೈದರಾಬಾದ್ನಲ್ಲಿ ಅಧಿಕಾರ ಸ್ವೀಕರಿಸಲಿದ್ದಾರೆ.