ಆ್ಯಪ್ನಗರ

ನರೇಗಾ ನಿಯಮ ಉಲ್ಲಂಘಿಸಿದ 12 ಗ್ರಾ.ಪಂ.ಅಧ್ಯಕ್ಷರ ಅನರ್ಹತೆಗೆ ಶಿಫಾರಸು : ಸಿಇಒ

ಮಹತ್ಮಾ ಗಾಂಧಿ ಗ್ರಾಮೀಣ ಉದ್ಯೋಗ ಖಾತರಿ ಯೋಜನೆ ಅಡಿ ಜಾಬ್‌ಕಾರ್ಡ್‌ ಬಳಸದೇ ಗುತ್ತಿಗೆದಾರರ ಮೂಲಕ ಕೆಲಸ ಮಾಡಿರುವುದು, ಯಂತ್ರಗಳ ಬಳಕೆ ಸೇರಿದಂತೆ ನಿಯಮ ಉಲ್ಲಂಘಿಸಿ ಕೆಲಸ ಮಾಡಿರುವುದರ ಆಧಾರದ ಮೇಲೆ, ಜಿಲ್ಲೆಯ 12 ಗ್ರಾ.ಪಂ ಅಧ್ಯಕ್ಷ ರನ್ನು ಅನರ್ಹತೆಗೊಳಿಸುವಂತೆ ಸರಕಾರಕ್ಕೆ ಶಿಫಾರಸು ಮಾಡಲಾಗಿದೆ ಎಂದು ಜಿ.ಪಂ ಸಿಇಒ ಡಾ.ಕೆ.ವಿ.ರಾಜೇಂದ್ರ ಹೇಳಿದರು.

Vijaya Karnataka 8 Sep 2018, 5:00 am
ಬಳ್ಳಾರಿ : ಮಹತ್ಮಾ ಗಾಂಧಿ ಗ್ರಾಮೀಣ ಉದ್ಯೋಗ ಖಾತರಿ ಯೋಜನೆ ಅಡಿ ಜಾಬ್‌ಕಾರ್ಡ್‌ ಬಳಸದೇ ಗುತ್ತಿಗೆದಾರರ ಮೂಲಕ ಕೆಲಸ ಮಾಡಿರುವುದು, ಯಂತ್ರಗಳ ಬಳಕೆ ಸೇರಿದಂತೆ ನಿಯಮ ಉಲ್ಲಂಘಿಸಿ ಕೆಲಸ ಮಾಡಿರುವುದರ ಆಧಾರದ ಮೇಲೆ, ಜಿಲ್ಲೆಯ 12 ಗ್ರಾ.ಪಂ ಅಧ್ಯಕ್ಷ ರನ್ನು ಅನರ್ಹತೆಗೊಳಿಸುವಂತೆ ಸರಕಾರಕ್ಕೆ ಶಿಫಾರಸು ಮಾಡಲಾಗಿದೆ ಎಂದು ಜಿ.ಪಂ ಸಿಇಒ ಡಾ.ಕೆ.ವಿ.ರಾಜೇಂದ್ರ ಹೇಳಿದರು.
Vijaya Karnataka Web BLR-7BLYPH14


ಗ್ರಾಮೀಣ ಮಟ್ಟದಲ್ಲಿ ಮಹಾತ್ಮಾಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆ ಅಡಿ ಸಾರ್ವಜನಿಕರಿಗೆ ಅವಶ್ಯವಿರುವ ಹಾಗೂ ದೀರ್ಘಕಾಲ ಬಾಳಿಕೆ ಬರುವ ಆಸ್ತಿ ಸೃಜನೆ ಕಾಮಗಾರಿಗಳ ಅನುಷ್ಠಾನದಲ್ಲಿ ಜನಪ್ರತಿನಿಧಿಗಳ ಪಾಲ್ಗೊಳ್ಳುವಿಕೆ ಕುರಿತು ನಗರದ ಜೋಳದರಾಶಿ ದೊಡ್ಡನಗೌಡ ರಂಗಮಂದಿರದಲ್ಲಿ ಶುಕ್ರವಾರ ಏರ್ಪಡಿಸಿದ್ದ ಕಾರ್ಯಾಗಾರಕ್ಕೆ ಚಾಲನೆ ನೀಡಿ ಮಾತನಾಡಿ, ನರೇಗಾ ಅಡಿ ಜಾಬ್‌ಕಾರ್ಡ್‌ ಇಲ್ಲದೇ ಕೆಲಸ ಮಾಡಿದರೆ, ಯಂತ್ರೋಪಕರಣ ಬಳಸಿದರೆ ಕ್ರಿಮಿನಲ್‌ ಕೇಸ್‌ ದಾಖಲಿಸಬೇಕಾಗುತ್ತದೆ. 'ನೀವು ಏನೇ ಕೆಲಸ ಮಾಡಿ, ಅದು ನಿಧಾನವಾದರೂ ಪರವಾಗಿಲ್ಲ. ನರೇಗಾದ ನಿಯಮಗಳನ್ನು ಉಲ್ಲಂಘಿಸದಂತಿಲ್ಲ ' ಎಂದು ಹೇಳಿದರು.

ಮಲ್ಟಿಚೆಕ್‌ಡ್ಯಾಂ ನಿರ್ಮಾಣ: ಎಲ್ಲೆಲ್ಲಿ ಚೆಕ್‌ ಡ್ಯಾಮ್‌ಗಳನ್ನು ನಿರ್ಮಾಣ ಮಾಡಿದರೆ ಅಂತರ್ಜಲಮಟ್ಟ ಹೆಚ್ಚಾಗುತ್ತದೆ ಎಂಬುದನ್ನು ಈಗಾಗಲೇ ಸ್ಯಾಟಲೈಟ್‌ ಮೂಲಕ ಸರ್ವೆ ನಡೆಸಿ ಮಾಹಿತಿ ತರಿಸಿಕೊಳ್ಳಲಾಗಿದೆ. ಅಂತ ಕಡೆಗಳಲ್ಲೆಲ್ಲ ನರೇಗಾ ಯೋಜನೆ ಅಡಿ ಮಲ್ಟಿಚೆಕ್‌ಡ್ಯಾಂಗಳ ನಿರ್ಮಾಣಕ್ಕೆ ಕ್ರಮಕೈಗೊಳ್ಳಲಾಗುವುದು. ಗ್ರಾಮೀಣ ಮಟ್ಟದಲ್ಲಿ ಮಹಾತ್ಮ್ಮಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆ ಅಡಿ ಗ್ರಾಮೀಣ ಮಟ್ಟದ ಸಾರ್ವಜನಿಕರಿಗೆ ಅವಶ್ಯವಿರುವ ಹಾಗೂ ದೀರ್ಘಕಾಲ ಬಾಳಿಕೆ ಬರುವ ಆಸ್ತಿ ಸೃಜನೆ ಕಾಮಗಾರಿಗಳ ಅನುಷ್ಠಾನ ಮಾಡುವುದಕ್ಕೆ ಆದ್ಯತೆ ನೀಡಬೇಕಿದೆ. ನರೇಗಾ ಯೋಜನೆಯ ಸಂಪೂರ್ಣ ಮಾಹಿತಿ ಪಡೆದುಕೊಂಡು ಸಮರ್ಪಕವಾಗಿ ಅನುಷ್ಠಾನ ಮಾಡುವುದರ ಮೂಲಕ ಗ್ರಾಮಗಳ ಅಭಿವೃದ್ಧಿ ಮಾಡಲು ಜನಪ್ರತಿನಿಧಿಗಳು ಮುಂದಾಗಬೇಕು ಎಂದರು.

ಪರಿಣಾಮಕಾರಿಯಾಗಿ ಬಳಸಿಕೊಳ್ಳಿ: ಸರಕಾರಿ ಶಾಲೆಗಳಿಗೆ ತಡೆಗೋಡೆ, ಶೌಚಾಲಯ, ಕೈತೋಟ ಸೇರಿದಂತೆ ನಾನಾ ಸೌಕರ್ಯ ಕಲ್ಪಿಸುವ ಅವಕಾಶ ಖಾತರಿ ಯೋಜನೆ ಅಡಿ ಇದ್ದು, ಅದನ್ನು ಪರಿಣಾಮಕಾರಿಯಾಗಿ ಬಳಸಿಕೊಳ್ಳಬೇಕಿದೆ. ತಡೆಗೋಡೆ, ಶೌಚಾಲಯ ಸೇರಿದಂತೆ ನಾನಾ ಕಾಮಗಾರಿಗಳ ಅನುಷ್ಠಾನ ವಿಷಯದಲ್ಲಿ ಅಂದಾಜು ಪಟ್ಟಿ ನೀಡಿರುವುದು ನಮ್ಮ ಮಾರ್ಗದರ್ಶನಕ್ಕೆ ಹೊರತು, ಅದುವೇ ಅಂತಿಮವಲ್ಲ. ಅದನ್ನು ನಮ್ಮ ಅಗತ್ಯಕ್ಕೆ ತಕ್ಕಂತೆ ಮಾರ್ಪಾಟು ಮಾಡಿ ಕೆಲಸ ಕೈಗೆತ್ತಿಕೊಳ್ಳಬೇಕು ಎಂದರು.

ದೀರ್ಘಕಾಲ ಬಾಳಿಕೆ ಬರುವ ಆಸ್ತಿ ಸೃಜನೆ ಕಾಮಗಾರಿ: ದನದಕೊಟ್ಟಿಗೆ, ಕುರಿದೊಡ್ಡಿಗಳ ನಿರ್ಮಾಣ, ರೈತಸಿರಿ ಅಡಿ ಸಸಿಗಳ ವಿತರಣೆ ಮತ್ತು ನಾಟಿ, ಸರಕಾರದ ಜಾಗ ಲಭ್ಯವಿರುವೆಡೆ ಸಾಮಾಜಿಕ ಅರಣ್ಯ ವಿಭಾಗದಿಂದ ಗಿಡ ನೆಡುವಿಕೆ ಸೇರಿದಂತೆ ನಾನಾ ರೀತಿಯ ದೀರ್ಘಕಾಲ ಬಾಳಿಕೆ ಬರುವಂತ ಆಸ್ತಿ ಸೃಜನೆ ಕಾಮಗಾರಿಗಳನ್ನು ಅನುಷ್ಠಾನಗೊಳಿಸಲಾಗುತ್ತದೆ. ಈ ವರ್ಷ ಉದ್ಯೋಗ ಖಾತರಿ ಯೋಜನೆ ಅಡಿ ನೀಡಲಾಗಿರುವ ಗುರಿಗಳಲ್ಲಿ ಮಾನವ ದಿನಗಳ ಸೃಜನೆಯಲ್ಲಿ ಶೇ.54ರಷ್ಟು ಸಾಧನೆ ಮಾಡಿ ರಾಜ್ಯದಲ್ಲಿ 2ನೇ ಸ್ಥಾನ ಪಡೆದಿದೆ. ನಿರ್ದಿಷ್ಟ ಸಮಯದೊಳಗೆ ಕೂಲಿ ಪಾವತಿಯಲ್ಲಿ 3ನೇ ಸ್ಥಾನ ಪಡೆದಿದೆ. ಇ-ಗವರ್ನೆನ್ಸ್‌ನಲ್ಲಿ ನಮ್ಮ ಜಿಲ್ಲೆ ಉತ್ತಮ ಸ್ಥಾನ ಪಡೆದಿದೆ. ಜಿಲ್ಲೆ ಅಭಿವೃದ್ಧಿಪಡಿಸುವ ನಿಟ್ಟಿನಲ್ಲಿ ನರೇಗಾ ಅಡಿ ವಿಫುಲ ಅವಕಾಶಗಳಿದ್ದು,ಅದನ್ನು ಸದುಪಯೋಗಪಡಿಸಿಕೊಳ್ಳಲು ಜನಪ್ರತಿನಿಧಿಗಳು ಮುಂದಾಗಬೇಕು ಎಂದರು.

ಅಧ್ಯಕ್ಷ ತೆ ವಹಿಸಿದ್ದ ಜಿ.ಪಂ ಅಧ್ಯಕ್ಷೆ ಭಾರತಿ ತಿಮ್ಮಾರೆಡ್ಡಿ ಮಾತನಾಡಿದರು. ಐಎಎಸ್‌ ಪ್ರೊಬೇಷನರಿ ಅಧಿಕಾರಿ ನಂದಿನಿ, ಜಿ.ಪಂ ಸದಸ್ಯರಾದ ರಾಧಾ ಧರಪ್ಪ ನಾಯಕ್‌, ತಾ.ಪಂ ಅಧ್ಯಕ್ಷೆ ರಮೀಜಾ ಬೀ, ಜಿ.ಪಂ ಸದಸ್ಯರು, ನಾನಾ ತಾ.ಪಂಗಳ ಅಧ್ಯಕ್ಷ ರು, ಉಪಾಧ್ಯಕ್ಷ ರು ಮತ್ತು ಸದಸ್ಯರು, ಗ್ರಾ.ಪಂಗಳ ಅಧ್ಯಕ್ಷ ರು, ಜಿಲ್ಲೆಯ ನರೇಗಾ ಯೋಜನೆಯ ತಂತ್ರಾಂಶದಲ್ಲಿ ನಮೂದಾಗಿರುವ ಸಾಮಗ್ರಿ ಸರಬರಾಜುದಾರರು, ಜಿಲ್ಲಾಮಟ್ಟದ ಅನುಷ್ಠಾನ ಇಲಾಖಾ ಅಧಿಕಾರಿಗಳು, ತಾ.ಪಂ ಇಒಗಳು, ಪಿಡಿಒಗಳು, ಪಂಚಾಯತ್‌ರಾಜ್‌ ಎಂಜಿನಿಯರಿಂಗ್‌, ಗ್ರಾಮೀಣ ಕುಡಿವ ನೀರು ಮತ್ತು ನೈರ್ಮಲ್ಯ ಇಲಾಖೆಯ ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್‌ಗಳು, ಎಲ್ಲ ಸಂಯೋಜಕರು,ತಾಂತ್ರಿಕ ಸಹಾಯಕರು ಇದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ