ಆ್ಯಪ್ನಗರ

ಕೊಟ್ಟೂರೇಶ್ವರ ಹುಂಡಿಯಲ್ಲಿ ದಾಖಲೆ ಹಣ ಸಂಗ್ರಹ

ಪಟ್ಟಣದ ಶ್ರೀ ಗುರು ಕೊಟ್ಟೂರೇಶ್ವರ ಸ್ವಾಮಿ ದೇವಸ್ಥಾನದ ಹುಂಡಿಯಲ್ಲಿ ದಾಖಲೆಯ 41 ಲಕ್ಷ ರೂಪಾಯಿಗೂ ಹೆಚ್ಚು ದೇಣಿಗೆ ಸಂಗ್ರಹವಾಗಿದೆ.

Vijaya Karnataka 30 Sep 2018, 5:00 am
ಕೊಟ್ಟೂರು : ಪಟ್ಟಣದ ಶ್ರೀ ಗುರು ಕೊಟ್ಟೂರೇಶ್ವರ ಸ್ವಾಮಿ ದೇವಸ್ಥಾನದ ಹುಂಡಿಯಲ್ಲಿ ದಾಖಲೆಯ 41 ಲಕ್ಷ ರೂಪಾಯಿಗೂ ಹೆಚ್ಚು ದೇಣಿಗೆ ಸಂಗ್ರಹವಾಗಿದೆ.
Vijaya Karnataka Web BLR-BLY28KTR1


ದೇವಸ್ಥಾನದ ಕೊಠಡಿಯಲ್ಲಿ ತಹಸೀಲ್ದಾರ್‌, ಧಾರ್ಮಿಕ ಇಲಾಖೆ ಅಧಿಕಾರಿಗಳ ಹಾಗೂ ಪ್ರಮುಖರ ಸಮ್ಮುಖದಲ್ಲಿ ಇತ್ತೀಚೆಗೆ ನಡೆದ ಹುಂಡಿ ಎಣಿಕೆ ಕಾರ್ಯ ನಡೆಯಿತು. ಆರು ತಿಂಗಳ ಕಾಲದ ನಂತರದಲ್ಲಿ ತೆರೆಯಲಾದ ಹುಂಡಿಗಳಲ್ಲಿ ಇದೇ ಮೊದಲ ಬಾರಿಗೆ ಹೆಚ್ಚು ಪ್ರಮಾಣದಲ್ಲಿ ಭಕ್ತರಿಂದ 41,32,068ರೂ. ದೇಣಿಗೆ ಸಂಗ್ರಹವಾಗಿರುವುದು ದಾಖಲೆಯಾಗಿದೆ.

ಬೆಳಗ್ಗೆಯಿಂದ ಸಂಜೆವರೆಗೂ ಎಣಿಕೆ ಕಾರ್ಯ ನಡೆಯಿತು. ತಹಸೀಲ್ದಾರ್‌ ಮಂಜುನಾಥ ಕೆ. ನೇತೃತ್ವದಲ್ಲಿ ದೇವಸ್ಥಾನದೊಳಗೆ ಇರಿಸಿದ್ದ ಹುಂಡಿಗಳಲ್ಲಿನ ಹಣವನ್ನು ತೆರೆದು ಕೊಠಡಿಗಳಲ್ಲಿ ಎಣಿಕೆಗಾಗಿ ಹಾಕಲಾಗಿತ್ತು. ಧಾರ್ಮಿಕ ಇಲಾಖೆ ಸಹಾಯಕ ಆಯುಕ್ತ ಎಸ್‌.ಪಿ.ಬಿ.ಮಹೇಶ, ಕಾರ್ಯನಿರ್ವಹಣಾಧಿಕಾರಿ ಎನ್‌.ಎಚ್‌.ಪ್ರಕಾಶ್‌, ಧರ್ಮಕರ್ತ ಸಿ.ಎಚ್‌.ಎಂ.ಗಂಗಾಧರಯ್ಯ ಸಮ್ಮುಖದಲ್ಲಿ ಪಿಕೆಜಿಬಿ ಬ್ಯಾಂಕ್‌ ಸಿಬ್ಬಂದಿ ಮತ್ತು ಪುರ ಪ್ರಮುಖರು, ವಿದ್ಯಾರ್ಥಿಗಳು ನೋಟು, ನಾಣ್ಯಗಳನ್ನು ಬೇರ್ಪಡಿಸಿ ನಂತರ ಎಣಿಕೆ ಮಾಡಿದರು.ದೇಣಿಗೆ ಹಣವನ್ನು ಪಿಕೆಜಿಬಿಯಲ್ಲಿ ದೇವಸ್ಥಾನದ ಖಾತೆಗೆ ಜಮಾ ಮಾಡಲಾಯಿತು.ಮಾರ್ಚ್‌ನಲ್ಲಿ ನಡೆದ ಹುಂಡಿ ಎಣಿಕೆಯಲ್ಲಿ 20 ಲಕ್ಷ ರೂಪಾಯಿಗೂ ಹೆಚ್ಚು ಸಂಗ್ರಹವಾಗಿತ್ತು. ಆದರೆ ಮತ್ತೆ ಆರು ತಿಂಗಳ ನಂತರ ನಡೆದಿರುವ ಹುಂಡಿ ಎಣಿಕೆಯಲ್ಲಿ ಹಿಂದೆಂದಿಗಿಂತಲೂ ಹೆಚ್ಚು ಪ್ರಮಾಣದಲ್ಲಿ ದೇಣಿಗೆ ಸಂಗ್ರಹವಾಗಿದೆ ಎಂದು ಇಒ ಎನ್‌.ಎಚ್‌.ಪ್ರಕಾಶ್‌ ತಿಳಿಸಿದರು.


ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ