ಬಳ್ಳಾರಿ: ಸನ್ನಡತೆ ಆಧರಿಸಿ, ರಾಜ್ಯದ ನಾನಾ ಕಾರಾಗೃಹಗಳಿಂದ 92 ಕೈದಿಗಳನ್ನು ಬೆಂಗಳೂರಿನಲ್ಲಿ ಬುಧವಾರ ಬಿಡುಗಡೆಗೊಳಿಸಲಾಗಿದ್ದು, ಅವರಲ್ಲಿ ಬಳ್ಳಾರಿ ಕೇಂದ್ರ ಕಾರಾಗೃಹದ ಆರು ಕೈದಿಗಳು ಸೇರಿದ್ದಾರೆ.
ಇಲ್ಲಿನ ಕಾರಾಗೃಹದಲ್ಲಿದ್ದ ಮೈಸೂರಿನ ಅಲ್ವಿನ್, ಮೈಸೂರು ಜಿಲ್ಲೆ ಕೆಸರೆಯ ಸೈಯದ್ ಸುಭಾನ್, ದಾವಣಗೆರೆಯ ಎನ್.ಜಿ.ಶಿವಕುಮಾರ್, ತೋಳಹುಣಸೆ ಗ್ರಾಮದ ವೀರಣ್ಣ, ಹಾಸನ ಜಿಲ್ಲೆ ಕಲ್ಲಹಳ್ಳಿ ಗ್ರಾಮದ ಮಂಜುನಾಥ್, ಚಿತ್ರದುರ್ಗ ಜಿಲ್ಲೆ ಮಲ್ಲಾಡಿಹಳ್ಳಿಯ ಧರ್ಮಪ್ಪ ಅವರು ಸನ್ನಡತೆ ಆಧರಿಸಿ ಬಿಡುಗಡೆಯಾದವರು. 2017, ಡಿ.13ರಂದು ಬಳ್ಳಾರಿ ಕೇಂದ್ರ ಕಾರಾಗೃಹದಿಂದ 8 ಕೈದಿಗಳು ಸನ್ನಡತೆ ಆಧರಿಸಿ ಬಿಡುಗಡೆಯಾಗಿದ್ದರು.