ಆ್ಯಪ್ನಗರ

ಆಜೀವ ಸದಸ್ಯತ್ವಕ್ಕೆ ಆಗ್ರಹಿಸಿ ಮನವಿ

ವೀರಶೈವ ವಿದ್ಯಾವರ್ಧಕ ಸಂಘದ ಆಜೀವ ಸದಸ್ಯತ್ವ ನೀಡಬೇಕೆಂದು ಆಗ್ರಹಿಸಿ, ವೀರಶೈವ ವಿದ್ಯಾವರ್ಧಕ ಸಂಘ ನೂತನ ಸದಸ್ಯತ್ವ ಹೋರಾಟ ಸಮಿತಿಯು ಗುರುವಾರ ಸಂಘದ ಅಧ್ಯಕ್ಷ ಉಡೇದ ಬಸವರಾಜ್‌ ಮತ್ತು ಪದಾಧಿಕಾರಿಗಳಿಗೆ ಮನವಿ ಪತ್ರ ಸಲ್ಲಿಸಿದರು.

Vijaya Karnataka 22 Sep 2018, 5:00 am
ಬಳ್ಳಾರಿ : ವೀರಶೈವ ವಿದ್ಯಾವರ್ಧಕ ಸಂಘದ ಆಜೀವ ಸದಸ್ಯತ್ವ ನೀಡಬೇಕೆಂದು ಆಗ್ರಹಿಸಿ, ವೀರಶೈವ ವಿದ್ಯಾವರ್ಧಕ ಸಂಘ ನೂತನ ಸದಸ್ಯತ್ವ ಹೋರಾಟ ಸಮಿತಿಯು ಗುರುವಾರ ಸಂಘದ ಅಧ್ಯಕ್ಷ ಉಡೇದ ಬಸವರಾಜ್‌ ಮತ್ತು ಪದಾಧಿಕಾರಿಗಳಿಗೆ ಮನವಿ ಪತ್ರ ಸಲ್ಲಿಸಿದರು.
Vijaya Karnataka Web BLR-21BLYPH14


ಸಂಘದ ಸದಸ್ಯತ್ವ ನೀಡುವಂತೆ ಹೋರಾಟ ಸಮಿತಿ ಆಗ್ರಹಿಸುತ್ತ ಬಂದಿದ್ದರೂ, ಕಾಲಕಾಲಕ್ಕೆ ಬಂದ ಕಾರ್ಯಕಾರಿ ಸಮಿತಿಗಳ ನಿರ್ಲಕ್ಷ್ಯದಿಂದಾಗಿ ಇದುವರೆಗೂ ಈ ವಿಷಯ ನನೆಗುದಿ ಬಿದ್ದಿದೆ. ಸಮಾಜ ಬಾಂಧವರ ಮನವಿಯನ್ನು ಸಹಾನುಭೂತಿಯಿಂದ ಪರಿಶೀಲಿಸಿ, ಕ್ರಮ ಕೈಗೊಂಡಿಲ್ಲ. ಕಳೆದ 8 ವರ್ಷಗಳಿಂದ ಹತ್ತು ಮನವಿ ಪತ್ರಗಳನ್ನು ನೀಡಿದಾಗ್ಯೂ, ಶೀಘ್ರದಲ್ಲಿ ಇದರ ಬಗ್ಗೆ ಚರ್ಚಿಸಿ ನಿರ್ಣಯ ತೆಗೆದುಕೊಳ್ಳುತ್ತೇವೆಂದು ಆಶ್ವಾಸನೆ ನೀಡುತ್ತ ಬಂದಿದ್ದಾರೆ. ಈವರೆಗೆ ಕ್ರಮ ಕೈಗೊಂಡಿಲ್ಲ ಎಂದು ಗಮನ ಸೆಳೆದರು. ಕೂಡಲೇ ಸದಸ್ಯತ್ವ ಪಡೆಯಲು ಕ್ರಮ ಕೈಗೊಳ್ಳಬೇಕೆಂದು ತಿಳಿಸಿದರು.

ಈ ಸಂದರ್ಭದಲ್ಲಿ ಹೋರಾಟ ಸಮಿತಿಯ ಸಂಚಾಲಕ ಮೀನಹಳ್ಳಿ ಚಂದ್ರಶೇಖರ್‌, ಬಿ.ಡಿ.ಗೌಡ, ಚಾನಾಳ್‌ ಶೇಖರ್‌, ಹೊನ್ನನಗೌಡ.ಪಿ, ಶ್ರೀಧರಗೌಡ, ಸಿದ್ರಾಮನಗೌಡ, ಮಂಜುನಾಥ, ಶಿವಕುಮಾರಸ್ವಾಮಿ, ಬೆಳ್ಳಿಗಾರ್‌ ಮಂಜುನಾಥ, ಜಾಲಿಬೆಂಚಿ ಶಿವು, ವೀರನಗೌಡ, ಎ.ಪಿ.ಎಂ.ಸಿ. ವೀರೇಶ್‌, ಬಸವರಾಜ, ಫೋಟೋ ಶಿವರಾಜ, ವಿಶ್ವನಾಥಸ್ವಾಮಿ, ರಮೇಶ್‌, ಡಿ.ಕಗ್ಗಲ್‌ ಅಂಗಡಿ ಶಂಕರ್‌, ವೀರೇಶ್‌ ತೋಟದ ಸೇರಿದಂತೆ ಇತರರು ಇದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ