ಆ್ಯಪ್ನಗರ

ನದಿಪ್ರವಾಹ ಇಳಿಮುಖ : ತ್ಯಾಜ್ಯ ವಿಲೇವಾರಿ ಚುರುಕು

ತುಂಗಭದ್ರಾ ನದಿಯಲ್ಲಿ ನೀರಿನ ಹರಿವು ಶುಕ್ರವಾರ ರಾತ್ರಿಯಿಂದಲೇ ಇಳಿಮುಖವಾಗಿರುವುದರಿಂದ ಕೋಟೆ ಬಳಿ ನದಿಗೆ ಅಡ್ಡಲಾಗಿ ಕಟ್ಟಿರುವ ಸೇತುವೆ ಮೇಲೆ ತ್ಯಾಜ್ಯ ವಿಲೇವಾರಿ ಕಾರ್ಯ ಶನಿವಾರ ಚುರುಕಿನಿಂದ ನಡೆಯಿತು.

Vijaya Karnataka 19 Aug 2018, 5:00 am
ಕಂಪ್ಲಿ : ತುಂಗಭದ್ರಾ ನದಿಯಲ್ಲಿ ನೀರಿನ ಹರಿವು ಶುಕ್ರವಾರ ರಾತ್ರಿಯಿಂದಲೇ ಇಳಿಮುಖವಾಗಿರುವುದರಿಂದ ಕೋಟೆ ಬಳಿ ನದಿಗೆ ಅಡ್ಡಲಾಗಿ ಕಟ್ಟಿರುವ ಸೇತುವೆ ಮೇಲೆ ತ್ಯಾಜ್ಯ ವಿಲೇವಾರಿ ಕಾರ್ಯ ಶನಿವಾರ ಚುರುಕಿನಿಂದ ನಡೆಯಿತು.
Vijaya Karnataka Web BLR-18KMP1


ಇಲ್ಲಿನ ಪುರಸಭೆ ಆಡಳಿತ ಮಂಡಳಿ ಸೇತುವೆ ಮೇಲೆ ನೀರಿನ ಜತೆ ಸಾಗಿ ಬಂದ ಕಸವನ್ನು ತೆರವುಗೊಳಿಸುವ ಕಾರ್ಯ ಆರಂಭಿಸಿದೆ. ನದಿ ನೀರಿನ ರಭಸಕ್ಕೆ ಸೇತುವೆ ಎರಡೂ ಬದಿಗೆ ಅಳವಡಿಸಿದ ರಕ್ಷ ಣಾ ಸರಳುಗಳು ಅಲ್ಲಲ್ಲಿ ಕಿತ್ತು ಹೋಗಿವೆ. ಈ ವೇಳೆ ಪುರಸಭೆ ಅಧ್ಯಕ್ಷ ಎಂ.ಸುಧೀರ್‌ ಮಾತನಾಡಿ, ನೀರಿನ ರಭಸಕ್ಕೆ ತೇಲಿ ಬಂದು ಸೇತುವೆಯ ಸರಳುಗಳಿಗೆ ಸಿಕ್ಕಿಕೊಂಡ ಜಲ ಸಸ್ಯ ಮತ್ತು ಕೋಟೆಯಲ್ಲಿ ಸ್ವಚ್ಛತಾ ಕ್ರಮಗಳಾದ ಬ್ಲೀಚಿಂಗ್‌ ಪುಡಿ ಎರಚುವುದು, ಫಾಗಿಂಗ್‌ ಕಾರ್ಯ ನಡೆಸಲಾಗಿದೆ. ಎಲ್ಲ ರೀತಿಯ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳಲಾಗಿದೆ ಎಂದರು. ತಹಸೀಲ್ದಾರ್‌ ಎಂ.ರೇಣುಕಾ ಮಾತನಾಡಿ, ಸೇತುವೆ ಮೇಲಿನಿಂದ ಇನ್ನೂ ಎರಡು ದಿನಗಳವರೆಗೆ ಯಾವುದೇ ವಾಹನಗಳ ಸಂಚಾರಕ್ಕೆ ಅನುವು ಮಾಡುವುದಿಲ್ಲ. ಗಂಗಾವತಿ ಲೋಕೋಪಯೋಗಿ ಇಲಾಖೆ ಅಧಿಕಾರಿಗಳು ಸೇತುವೆ ಪರಿಶೀಲಿಸಿ,ವಾಹನ ಸಂಚಾರಕ್ಕೆ ದೃಢೀಕರಣ ಪತ್ರ ಕೇಳಿದ್ದೇವೆ. ಅವರಿಂದ ಉತ್ತರ ಬಂದ ನಂತರ ವಾಹನ ಸಂಚಾರಕ್ಕೆ ಅನುವು ಮಾಡಲಾಗುವುದು. ಕೃಷಿ, ತೋಟಗಾರಿಕೆ, ಕಂದಾಯ ಇಲಾಖೆ ಅಧಿಕಾರಿಗಳು ಜಂಟಿಯಾಗಿ ಬೆಳೆ ಹಾನಿ ಸಮೀಕ್ಷೆ ನಡೆಸಿದ್ದೇವೆ. ನದಿ ನೀರು ಇಳಿಮುಖವಾಗಿದ್ದರಿಂದ ಕೋಟೆಯಲ್ಲಿ ತೆರೆದ ಗಂಜಿ ಕೇಂದ್ರ ಸ್ಥಗಿತಗೊಳಿಸಲಾಗಿದೆ ಎಂದರು. ಉಪ ತಹಸೀಲ್ದಾರ್‌ ಬಿ.ರವೀಂದ್ರಕುಮಾರ್‌, ವಿಎ ಗಿರೀಶ್‌ಬಾಬು, ಪುರಸಭೆ ಸದಸ್ಯರಾದ ಬಿ.ನಾಗರಾಜ, ಗೆಜ್ಜೆಳ್ಳಿ ಬಾಷಾ, ಮುಖಂಡ ಲಡ್ಡು ಹೊನ್ನೂರಲಿ, ಆರೋಗ್ಯ ನಿರೀಕ್ಷ ಕ ಸಿ.ಫಕೃದ್ದೀನ್‌ಸಾಬ್‌, ರಾಧಿಕಾ ಇದ್ದರು.

ಆಗ್ರಹ: ನದಿ ನೀರಿನ ರಭಸಕ್ಕೆ ಸೇತುವೆ ಮೇಲಿನ ಎರಡೂ ಬದಿ ಅಳವಡಿಸಿದ ರಕ್ಷ ಣಾ ಸರಳುಗಳು ಅಲ್ಲಲ್ಲಿ ಕಿತ್ತು ಹೋಗಿವೆ. ಅಲ್ಲದೇ ಸೇತುವೆಯ ಎಕ್ಸ್‌ ಪಾಯಿಂಟ್‌ ಜಾಯಿಂಟ್‌ಗೆ ಅಲ್ಲಲ್ಲಿ ಹಾನಿಯಾಗಿದೆ. ಸೇತುವೆ ಮೇಲಿನಿಂದ ಸಂಚರಿಸುವ ದ್ವಿಚಕ್ರವಾಹನ ಸವಾರರಿಗೆ ಗಾಳಿ ಹೊಡೆತಕ್ಕೆ ಅಪಾಯವಾಗುವ ಸಾಧ್ಯತೆ ಹೆಚ್ಚಾಗಿದ್ದು, ಸಂಬಂಧಿಸಿದ ಅಧಿಕಾರಿಗಳು ಸೇತುವೆ ಪಕ್ಕದ ಸರಳುಗಳನ್ನು ದುರಸ್ತಿಪಡಿಸಬೇಕು ಎಂದು ಕೋಟೆ ಜನರು ಆಗ್ರಹಿಸಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ