ಆ್ಯಪ್ನಗರ

ಪೈಪ್‌ಲೈನ್‌ ಬದಲಾವಣೆಗೆ 12ಕೋಟಿ ರೂ. ಮಂಜೂರು

ಸಿಂಗಟಾಲೂರು ನೀರಾವರಿ ಯೋಜನೆಯ ಹಿರೇಹಡಗಲಿ-ಮಾಗಳ ರೈಸಿಂಗ್‌ ಮೇನ್‌ ಪೈಪ್‌ಲೈನ್‌ನಲ್ಲಿಅಳವಡಿಸಿರುವ ಪಿವಿಸಿ ಪೈಪ್‌ಗಳ ಬದಲಿಗೆ ಗುಣಮಟ್ಟದ ಎಂ.ಎಸ್‌. ಪೈಪ್‌ಗಳನ್ನು ಅಳವಡಿಸಲು 12 ಕೋಟಿ ರೂ. ಮಂಜೂರು ಮಾಡಲಾಗಿದೆ ಎಂದು ಶಾಸಕ ಪಿ.ಟಿ.ಪರಮೇಶ್ವರನಾಯ್ಕ ಹೇಳಿದರು.

Vijaya Karnataka 10 Dec 2018, 6:10 pm
ಹೂವಿನಹಡಗಲಿ ; ಸಿಂಗಟಾಲೂರು ನೀರಾವರಿ ಯೋಜನೆಯ ಹಿರೇಹಡಗಲಿ-ಮಾಗಳ ರೈಸಿಂಗ್‌ ಮೇನ್‌ ಪೈಪ್‌ಲೈನ್‌ನಲ್ಲಿಅಳವಡಿಸಿರುವ ಪಿವಿಸಿ ಪೈಪ್‌ಗಳ ಬದಲಿಗೆ ಗುಣಮಟ್ಟದ ಎಂ.ಎಸ್‌. ಪೈಪ್‌ಗಳನ್ನು ಅಳವಡಿಸಲು 12 ಕೋಟಿ ರೂ. ಮಂಜೂರು ಮಾಡಲಾಗಿದೆ ಎಂದು ಶಾಸಕ ಪಿ.ಟಿ.ಪರಮೇಶ್ವರನಾಯ್ಕ ಹೇಳಿದರು.
Vijaya Karnataka Web rs 12 crore for change of pipeline granted
ಪೈಪ್‌ಲೈನ್‌ ಬದಲಾವಣೆಗೆ 12ಕೋಟಿ ರೂ. ಮಂಜೂರು


ತಾಲೂಕಿನ ದಾಸರಹಳ್ಳಿ ಸೇರಿದಂತೆ ನಾನಾ ಗ್ರಾಮಗಳಲ್ಲಿ1.04ಕೋಟಿ ರೂ. ವೆಚ್ಚದ 13ಶಾಲಾ ಕೋಣೆ ಕಟ್ಟಡಗಳಿಗೆ ಶಿಲಾನ್ಯಾಸ ನೆರವೇರಿಸಿ ಕೊಯಿಲಾರಗಟ್ಟಿಯಲ್ಲಿಶನಿವಾರ ಮಾತನಾಡಿದರು. ಹಿರೇಹಡಗಲಿ,ಮಾಗಳ, ಅಯ್ಯನಹಳ್ಳಿ ಸೇರಿದಂತೆ ಕೆಲ ಗ್ರಾಮಗಳಿಗೆ ನೀರುಣಿಸಲು ಸಿಮೆಂಟ್‌ ಪೈಪ್‌ಗಳನ್ನು ಅಳವಡಿಸಲಾಗಿತ್ತು. ಆದರೆ ನೀರಿನ ರಭಸಕ್ಕೆ ಪೈಪ್‌ಗಳು ಪದೇ ಪದೇ ಕಿತ್ತು ನೀರು ವ್ಯರ್ಥವಾಗಿ ಹರಿದುಹೋಗುತ್ತಿತ್ತು. ಈ ಹಿನ್ನಲೆಯಲ್ಲಿಗುಣಮಟ್ಟದ ಎಂ.ಎಸ್‌.ಪೈಪ್‌ಗಳನ್ನು ಅಳವಡಿಸಲು ಕರ್ನಾಟಕ ನೀರಾವರಿ ನಿಗಮಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿತ್ತು. ಜಲಸಂಪನ್ಮೂಲ ಸಚಿವ ಡಿ.ಕೆ. ಶಿವಕುಮಾರ್‌ ಪ್ರಸ್ತುತ ಪ್ರಸ್ತಾವನೆಗೆ ಶುಕ್ರವಾರ ಮಂಜೂರಾತಿ ನೀಡಿದ್ದಾರೆ ಎಂದು ತಿಳಿಸಿದರು.

ಇದೇವೇಳೆ ಹಿರೇಹಡಗಲಿ, ಹಿರೇಕೊಳಚಿ, ನವಲಿ, ತಿಪ್ಪಾಪುರ, ನಡುವಿನಹಳ್ಳಿ, ಮುದೇನೂರು, ಸೇರಿದಂತೆ ನಾನಾ ಗ್ರಾಮಗಳ 13ಶಾಲೆ ಕೋಣೆಗಳಿಗೆ ಹೈದ್ರಾಬಾದ್‌-ಕರ್ನಾಟಕ ಪ್ರಾದೇಶಿಕ ಅಭಿವೃದ್ಧಿ ಮಂಡಳಿಯಿಂದ ಮೊದಲ ಕಂತಿನಲ್ಲಿ1.04ಕೋಟಿ ರೂ. ಮಂಜೂರಾಗಿದೆ ಎಂದರು. ಪಟ್ಟಣದ ರೇಣುಕ ನಗರದ ಊರಮ್ಮ ದೇವಿ ಕಟ್ಟೆ ಬಳಿ 12ಲಕ್ಷ ರೂ. ವೆಚ್ಚದಲ್ಲಿನಿರ್ಮಿಸಿರುವ ಶುದ್ಧ ಕುಡಿವ ನೀರಿನ ಘಟಕವನ್ನು ಶಾಸಕರು ಉದ್ಘಾಟಿಸಿದರು.

ಈ ಸಂದರ್ಭದಲ್ಲಿಪುರಸಭೆ ಅಧ್ಯಕ್ಷೆ ಮರ್ದಾನ್‌ಬಿ, ಸದಸ್ಯೆ ವೀರಮ್ಮ,ತಾ.ಪಂ. ಸದಸ್ಯ ಸೋಗಿ ಹಾಲೇಶ, ಮುಖಂಡರಾದ ಪಾಟೀಲ ಬಸವನಗೌಡ, ಅಟವಾಳಿಗಿ ಕೊಟ್ರೇಶ, ಸೊಪ್ಪಿನ ಮಂಜುನಾಥ, ಕಿತ್ತೂರು ಚೆನ್ನಮ್ಮ ಪತ್ತಿನ ಬ್ಯಾಂಕಿನ ಉಪಾಧ್ಯಕ್ಷ ಕೆ.ಪತ್ರೇಶ ಚಂದ್ರನಾಯ್ಕ ಹಾಗೂ ಇತರರಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ