ಆ್ಯಪ್ನಗರ

ಲಾಯಲ್ಟಿ ಕಾರ್ಡ್‌ಗೆ 5ಲಕ್ಷ ರೂ. ಜೀವ ವಿಮೆ

ದೇಶದ ಎಲ್ಲ ಪತಂಜಲಿ ಮೆಗಾ ಸ್ಟೋರ್‌ಗಳ ಗ್ರಾಹಕರಿಗೆ ಫೆ.22ರೊಳಗೆ ಲಾಯಲ್ಟಿ ಕಾರ್ಡ್ ವಿತರಿಸುತ್ತಿದ್ದು, ಈ ಕಾರ್ಡ್ ಹೊಂದಿದವರಿಗೆ 5ಲಕ್ಷ ರೂ. ಜೀವ ವಿಮೆ ದೊರೆಯಲಿದೆ ಎಂದು ಯೋಗ ಗುರು ಬಾಬಾ ರಾಮದೇವ್ ಹೇಳಿದರು.

Vijaya Karnataka 6 Feb 2018, 8:24 am
ಬಳ್ಳಾರಿ: ದೇಶದ ಎಲ್ಲ ಪತಂಜಲಿ ಮೆಗಾ ಸ್ಟೋರ್‌ಗಳ ಗ್ರಾಹಕರಿಗೆ ಫೆ.22ರೊಳಗೆ ಲಾಯಲ್ಟಿ ಕಾರ್ಡ್ ವಿತರಿಸುತ್ತಿದ್ದು, ಈ ಕಾರ್ಡ್ ಹೊಂದಿದವರಿಗೆ 5ಲಕ್ಷ ರೂ. ಜೀವ ವಿಮೆ ದೊರೆಯಲಿದೆ ಎಂದು ಯೋಗ ಗುರು ಬಾಬಾ ರಾಮದೇವ್ ಹೇಳಿದರು.
Vijaya Karnataka Web rs 5 lakh for loyalty card life insurance
ಲಾಯಲ್ಟಿ ಕಾರ್ಡ್‌ಗೆ 5ಲಕ್ಷ ರೂ. ಜೀವ ವಿಮೆ


ಇಲ್ಲಿನ ಎಸ್.ಪಿ. ವತ್ತದಲ್ಲಿರುವ ಪತಂಜಲಿ ಮೆಗಾ ಸ್ಟೋರ್‌ಗೆ ಸೋಮವಾರ ಭೇಟಿನೀಡಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘‘ಈ ಕಾರ್ಡ್ ಹೊಂದಿರುವ ಗ್ರಾಹಕರು ಅಪಘಾತದಲ್ಲಿ ಮತಪಟ್ಟರೆ ತಲಾ 5ಲಕ್ಷ ರೂ. ಹಾಗೂ ಗಾಯಗೊಂಡವರು, ವಿಕಲಚೇತನರಾದವರಿಗೆ ತಲಾ 2.5ಲಕ್ಷ ರೂ. ಪರಿಹಾರ ವಿತರಿಸಲಾಗುವುದು’’ ಎಂದರು.

ಸಾವಿರ ಗ್ರಾಹಕರಿಗೆ ಕಾರ್ಡ್: ‘‘ಆರಂಭದಲ್ಲಿ ಪ್ರತಿ ಮೆಗಾ ಸ್ಟೋರ್ ವ್ಯಾಪ್ತಿಯ ಸಾವಿರ ಗ್ರಾಹಕರಿಗೆ ಈ ಲಾಯಲ್ಟಿ ಕಾರ್ಡ್ ವಿತರಿಸಲಾಗುತ್ತದೆ. ಬಳ್ಳಾರಿಯ ಮೆಗಾ ಸ್ಟೋರ್‌ನಿಂದಲೇ ಕಾರ್ಡ್ ವಿತರಣೆ ಆರಂಭಿಸಲು ನಿರ್ಧರಿಸಲಾಗಿದೆ. ಕರ್ನಾಟಕ ರಾಜ್ಯದ ಹನ್ನೊಂದು ಮೆಗಾ ಸ್ಟೋರ್ ಸೇರಿ ದೇಶದ 260 ಮೆಗಾ ಸ್ಟೋರ್‌ಗಳ ಗ್ರಾಹಕರಿಗೂ ಈ ಸೌಲಭ್ಯ ದೊರೆಯಲಿದೆ. ಈ ಕಾರ್ಡ್ ಸೌಲಭ್ಯ ಪಡೆಯಲು ಪ್ರತಿ ಗ್ರಾಹಕರು 120ರೂ. ನೋಂದಣಿ ಶುಲ್ಕ ಪಾವತಿಸಬೇಕು. 500 ರೂ.ಗಳಿಗೂ ಮೇಲ್ಪಟ್ಟು ಪತಂಜಲಿ ಸಾಮಗ್ರಿ ಖರೀದಿಸಬೇಕು. ಕನಿಷ್ಠ ಆರು ತಿಂಗಳಾದರೂ ಈ ಮೆಗಾ ಸ್ಟೋರ್‌ಗಳಲ್ಲಿ ಪತಂಜಲಿ ಉತ್ಪನ್ನಗಳನ್ನು ಖರೀದಿಸಿರಬೇಕು ಎಂಬ ನಿಯಮಗಳಿವೆ’’ ಎಂದ ಅವರು, ‘‘ಪತಂಜಲಿ ಮೆಗಾ ಸ್ಟೋರ್‌ಗಳಲ್ಲಿ ಖರೀದಿಸುವ ಎಲ್ಲ ಉತ್ಪನ್ನಗಳ ಮೇಲೆ ಶೇ.10ರಷ್ಟು ರಿಯಾಯಿತಿ ಸೌಲಭ್ಯ ದೊರೆಯಲಿದೆ’’ ಎಂದರು.

ಈ ಸಂದರ್ಭದಲ್ಲಿ ಯೋಗ ಸಮಿತಿಯ ಕರ್ನಾಟಕ ಪ್ರಭಾರಿ ಭವರ್‌ಲಾಲ್ ಆರ್ಯ, ಮುಖಂಡರಾದ ಕಣೇಕಲ್ ಯರಿಸ್ವಾಮಿ, ಇಸ್ವಿ ಪಂಪಾಪತಿ, ನಟರಾಜ, ಎಸ್.ಸಿ.ಪುರಾಣಿಕ ಮಠ ಸೇರಿ ಇತರರಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ