ಆ್ಯಪ್ನಗರ

ನಿವೃತ್ತರ ಸೇವೆಗೆ ‘ಗೌರವ ಧನ’ವೇ ಸಂಬಳ

ಸೇವೆಯಲ್ಲಿದ್ದಾಗ ಪ್ರತಿ ತಿಂಗಳು ಸಂಬಳ ಎಣಿಸುತ್ತಿದ್ದ ಶಿಕ್ಷಕರು ಇದೇ ಮೊದಲ ಬಾರಿಗೆ ನಿವೃತ್ತಿಯ ನಂತರ ಆರು ತಿಂಗಳ ಕಾಲ ಕಾಯ್ದು ಕುಳಿತು ಎಂದಿನ ಕೆಲಸಕ್ಕೆ ‘ಗೌರವ ಧನ’ಕ್ಕೆ ಮಾತ್ರ ತೃಪ್ತಿಪಟ್ಟುಕೊಳ್ಳಬೇಕಿದೆ !

Vijaya Karnataka 23 Aug 2018, 12:00 am
ಯಮನಪ್ಪ ಪವಾರ, ಬಳ್ಳಾರಿ
Vijaya Karnataka Web salary is honorable to retirees service
ನಿವೃತ್ತರ ಸೇವೆಗೆ ‘ಗೌರವ ಧನ’ವೇ ಸಂಬಳ


ಸೇವೆಯಲ್ಲಿದ್ದಾಗ ಪ್ರತಿ ತಿಂಗಳು ಸಂಬಳ ಎಣಿಸುತ್ತಿದ್ದ ಶಿಕ್ಷಕರು ಇದೇ ಮೊದಲ ಬಾರಿಗೆ ನಿವೃತ್ತಿಯ ನಂತರ ಆರು ತಿಂಗಳ ಕಾಲ ಕಾಯ್ದು ಕುಳಿತು ಎಂದಿನ ಕೆಲಸಕ್ಕೆ ‘ಗೌರವ ಧನ’ಕ್ಕೆ ಮಾತ್ರ ತೃಪ್ತಿಪಟ್ಟುಕೊಳ್ಳಬೇಕಿದೆ !

ಶಿಕ್ಷಕರ ಅಭಾವ ಸರಿದೂಗಿಸಲು 2017-18 ನೇ ಸಾಲಿನಲ್ಲಿ ನಿವೃತ್ತ ಶಿಕ್ಷಕರನ್ನು ಬಳಸಿಕೊಂಡಿದ್ದ ಶಿಕ್ಷಣ ಇಲಾಖೆ ಪ್ರಸಕ್ತ ಸಾಲಿನಲ್ಲಿ ಗೌರವ ಸಂಭಾವನೆ ಭರಿಸಿದೆ. ರಾಜ್ಯದಲ್ಲಿ ಎಲ್ಲ ಜಿಲ್ಲೆ ಒಳಗೊಂಡಂತೆ ನಿವೃತ್ತರಿಗೆ ನೀಡಬೇಕಾದ ಮೊತ್ತವನ್ನು ಲೆಕ್ಕ ಹಾಕಿ ಆಯಾ ಜಿಲ್ಲೆಗೆ ವರ್ಗಾಯಿಸಲಾಗಿದೆ. ಜಿಲ್ಲಾ ಉಪನಿರ್ದೇಶಕರು ಹಾಗೂ ಕ್ಷೇತ್ರ ಶಿಕ್ಷಣಾಧಿಕಾರಿಗಳು ಪರಿಶೀಲಿಸಿ ಸಂಭಾವನೆಯನ್ನು ಶಿಕ್ಷಕರ ಖಾತೆಗೆ ತಲುಪಿಸಬೇಕಿದೆ. ಆನ್‌ಲೈನ್ ವರ್ಗಾವಣೆಗೆ ಅವಕಾಶ ಇರುವುದರಿಂದ ಗೌರವ ಧನ ಕೈ ಸೇರಲು ವಿಳಂಬವಾಗುವುದಿಲ್ಲ ಎಂದು ಅಧಿಕಾರಿಗಳು ಹೇಳುತ್ತಾರೆ. ಅನುದಾನ ಜೋಡಣೆ, ಬಿಡುಗಡೆಯಲ್ಲಿ ವಿಳಂಬವಾಗಿದ್ದರಿಂದ ಸೇವೆ ಪ್ರತಿಯಾಗಿ ಸಿಗುವ ಮೊತ್ತಕ್ಕೆ ನಿವೃತ್ತರು, ಇದೇ ಮೊದಲ ಬಾರಿಗೆ 6 ತಿಂಗಳು ಕಾಯ್ದಂತಾಗಿದೆ.

ಕಡಿಮೆ ಹೊರೆ, ಅದೇ ಸೇವೆ: 2017-18 ನೇ ಸಾಲಿನಲ್ಲಿ ಮಧ್ಯಮಾವಧಿಯಲ್ಲಿ ನಿವೃತ್ತರಾಗಲಿರುವ ಪ್ರಾಥಮಿಕ, ಪ್ರೌಢಶಾಲೆ ಶಿಕ್ಷಕರ ಸೇವೆಯನ್ನು ಶೈಕ್ಷಣಿಕ ವರ್ಷದ ಕೊನೆಯವರೆಗೆ ಮುಂದುವರಿಸಲು ನಿರ್ಧರಿಸಲಾಗಿತ್ತು. ಮಧ್ಯಾಂತರದಲ್ಲಿ ಉಂಟಾಗುವ ಸಮಸ್ಯೆಯನ್ನು ಪರಿಹರಿಸಲು ಈ ಕ್ರಮ ಕೈಗೊಂಡಿದ್ದರು. ಅದುವರೆಗೆ ಮಾಸಿಕ ಸಂಬಳ ಪಡೆಯುತ್ತಿದ್ದ ನೌಕರರನ್ನು 6 ತಿಂಗಳು ಬಳಸಿಕೊಂಡಿದ್ದಕ್ಕೆ ಪ್ರತಿಯಾಗಿ ಗೌರವ ಸಂಭಾವನೆ ಮಾತ್ರ ಪಾವತಿಸಲು ನಿರ್ಣಯಿಸಲಾಗಿತ್ತು. ನಿವೃತ್ತರನ್ನು ಬಳಸಿಕೊಳ್ಳುವ ಕ್ರಮದಿಂದ ಶಿಕ್ಷಣ ಇಲಾಖೆಗೆ ಆರ್ಥಿಕವಾಗಿ ಉಳಿತಾಯವಾದಂತಾಗಿದೆ. ಸೇವಾವಧಿ ಮುಗಿದ ಮೇಲೆ ಮಾಡಿದ ಕೆಲಸಕ್ಕೆ ‘ಗೌರವ’ ಸಂಭಾವನೆಯಲ್ಲಿ ಗುರುಗಳು ಸಮಾಧಾನ ಪಟ್ಟುಕೊಳ್ಳಬೇಕಿದೆ.

1.96 ಕೋಟಿ ರೂ.ಹಂಚಿಕೆ: ಆಗಸ್ಟ್ 9, 2018 ರಂದು ಪ್ರಾಥಮಿಕ ಶಿಕ್ಷಣ ಇಲಾಖೆ ಹೊರಡಿಸಿರುವ ಆದೇಶದ ಪ್ರಕಾರ, 30 ಜಿಲ್ಲೆಗಳಿಗೆ 1 ಕೋಟಿ 96 ಲಕ್ಷ 62 ಸಾವಿರ ರೂ.ದೊರಕಿದೆ. ಆಯಾ ತಾಲೂಕಿನಲ್ಲಿ ಲಭ್ಯವಾಗಿದ್ದ ನಿವೃತ್ತ ಶಿಕ್ಷಕರ ಪ್ರಮಾಣ ಆಧರಿಸಿ 36 ಸಾವಿರ ರೂ.ನಿಂದ 10 ಲಕ್ಷ 94 ಸಾವಿರ ರೂ.ವರೆಗೆ ಗೌರವ ಸಂಭಾವನೆ ಹಂಚಿಕೆಯಾಗಿದೆ. 2017-18 ನೇ ಶೈಕ್ಷಣಿಕ ವರ್ಷ ಮುಗಿಯಲು 6 ತಿಂಗಳು ಬಾಕಿಯಿದ್ದ ಕೆಲವರಿಗೆ 1 ಲಕ್ಷ ರೂ.ಗೂ ಮೇಲ್ಪಟ್ಟು ಹಣ ದೊರಕಿದೆ. ತಿಂಗಳು ಇಲ್ಲವೇ ಎರಡು ತಿಂಗಳು ಇದ್ದವರಿಗೆ ತೀರಾ ಕಡಿಮೆ ಮೊತ್ತ ಸಿಕ್ಕಿದೆ. ಆದರೆ, ಪಿಂಚಣಿ ಹೊರತುಪಡಿಸಿದರೆ, ಸೇವೆಯ ಕೊನೆಯ ಅವಧಿಯಲ್ಲಿ ಮಾಡಿದ ಪಾಠಕ್ಕೆ ಸಿಕ್ಕ ‘ಗೌರವ ಸಂಭಾವನೆ’ ನಿವೃತ್ತರಲ್ಲಿ ಸಂತಸ ಮೂಡಿಸಿದೆ.

...

ತಾಲೂಕು ಪಂಚಾಯತ್‌ನ ಕಾಲಂ 5 ಮತ್ತು 4 ರ ಕಾರ್ಯಕ್ರಮದಡಿ ಸರಕಾರಿ ಪ್ರಾಥಮಿಕ, ಪ್ರೌಢಶಾಲೆಗಳಲ್ಲಿ ಅತಿಥಿ ಶಿಕ್ಷಕರಾಗಿ ಕೆಲಸ ಮಾಡಿದ, ನಿವೃತ್ರಿಗೆ 196 ಲಕ್ಷ 62 ಸಾವಿರ ರೂ.ಬಿಡುಗಡೆ ಮಾಡಲಾಗಿದೆ. ಸಂಬಂಧಿಸಿದ ಜಿ.ಪಂ.ನವರು ಖಜಾನೆ ಮೂಲಕ ಹಣ ಪಾವತಿಸಲಿದ್ದಾರೆ.

-ಪುರುಷೋತ್ತಮ್‌ಸಿಂಗ್ ಬಿ.ಎಚ್, ವಿಶೇಷಾಧಿಕಾರಿ (ಜಿ.ಪಂ.), ಆರ್ಥಿಕ ಇಲಾಖೆ

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ