ಆ್ಯಪ್ನಗರ

ಮರಳು: ಸರಳೀಕರಿಸಲು ಆಗ್ರಹಿಸಿ ಧರಣಿ

ಮರಳು ನೀತಿ ಸರಳೀಕರಿಸಲು ಆಗ್ರಹಿಸಿ ಮಾಜಿ ಶಾಸಕ ಎಂ.ಎಸ್.ಸೋಮಲಿಂಗಪ್ಪ ನೇತೃತ್ವದಲ್ಲಿ ಸೋಮವಾರ ಅನಿರ್ದಿಷ್ಟಾವಧಿ ಧರಣಿ ಆರಂಭವಾಯಿತು.

ವಿಕ ಸುದ್ದಿಲೋಕ 2 Mar 2016, 4:59 am
ಸಿರುಗುಪ್ಪ; ಮರಳು ನೀತಿ ಸರಳೀಕರಿಸಲು ಆಗ್ರಹಿಸಿ ಮಾಜಿ ಶಾಸಕ ಎಂ.ಎಸ್.ಸೋಮಲಿಂಗಪ್ಪ ನೇತೃತ್ವದಲ್ಲಿ ಸೋಮವಾರ ಅನಿರ್ದಿಷ್ಟಾವಧಿ ಧರಣಿ ಆರಂಭವಾಯಿತು.
Vijaya Karnataka Web sand protest demanding to simplify
ಮರಳು: ಸರಳೀಕರಿಸಲು ಆಗ್ರಹಿಸಿ ಧರಣಿ


ಧರಣಿಯಲ್ಲಿ ಮಾತನಾಡಿದ ಮಾಜಿ ಶಾಸಕ, ನೈಸರ್ಗಿಕವಾಗಿ ದೊರೆಯುತ್ತಿರುವ ಮರಳು ತಾಲೂಕಿನ ರೈತರಿಗೆ ಸುಲಭವಾಗಿ ದೊರೆಯುತ್ತಿಲ್ಲ. ಅಭಿವದ್ಧಿ ಕಾಮಗಾರಿ ಕೈಗೊಳ್ಳಲು ಮರಳು ನೀತಿಯನ್ನು ಸರಳೀಕರಿಸಬೇಕು. ತಾಲೂಕಿನಿಂದ ಹೊರ ಭಾಗಕ್ಕೆ ಮರಳು ಹೋಗುವುದನ್ನು ತಡೆಗಟ್ಟಬೇಕು. ಇದೇ ಬೇಡಿಕೆ ಮುಂದಿಟ್ಟು ಚುನಾವಣೆಗೂ ಮುನ್ನ 12 ದಿನಗಳ ನಿರಶನ ನಡೆಸಿದರೂ ಸ್ಪಂದನೆ ದೊರೆತಿಲ್ಲ. ಜನಪ್ರತಿನಿಧಿಗಳು, ಅಧಿಕಾರಿಗಳು ಜನರ ಬೇಡಿಕೆಗೆ ಸ್ಪಂದಿಸುತ್ತಿಲ್ಲ. ತಾಲೂಕಿನಲ್ಲಿ ಜನಸಾಮಾನ್ಯರು ಮರಳು ಸಿಗದೇ ಪರಿತಪಿಸುವಂತಾಗಿದೆ. 300 ರೂ.ಗೆ ಒಂದು ಕ್ಯೂಬಿಕ್ ಮರಳಿನಂತೆ ಮಾರಾಟ ಮಾಡಬೇಕು. ನಾಲ್ಕು ಭಾಗದಲ್ಲಿ ಮರಳು ಯಾರ್ಡ್ ಆರಂಭಿಸಬೇಕು. ಆವರೆಗೂ ಧರಣಿ ಕೈ ಬಿಡುವುದಿಲ್ಲ ಎಂದು ಎಚ್ಚರಿಸಿದರು. ತಾ.ಪಂ.ಸದಸ್ಯ ವೈ.ಶಂಕ್ರಪ್ಪ ಸೇರಿದಂತೆ ಹಳೇಕೋಟೆ ಗ್ರಾ.ಪಂ. ವ್ಯಾಪ್ತಿಯ 5 ಸದಸ್ಯರು ನಿರಶನ ನಡೆಸಿದರು. ಬಿಜೆಪಿ ತಾಲೂಕ ಘಟಕದ ಅಧ್ಯಕ್ಷ ಶಾಂತಮೂರ್ತಿಸ್ವಾಮಿ, ದೊಡ್ಡವೀರನಗೌಡ, ಯುವ ಮೋರ್ಚಾ ತಾಲೂಕ ಅಧ್ಯಕ್ಷ ಬೈರಾಪುರ ವಿರೂಪಾಕ್ಷಗೌಡ, ಸಿದ್ದರಾಮನಗೌಡ, ಮಧುಸೂದನಶೆಟ್ಟಿ, ದಿವಾಕರಗೌಡ, ಕಂಬಳಿ ಮಲ್ಲಿಕಾರ್ಜುನ, ಶೇಖಪ್ಪ ಸೇರಿದಂತೆ ಇತರರಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ