ಸಂಡೂರು; ನರೇಗಾ ಕೂಲಿ ಕಾರ್ಮಿಕರ ಅದಾಲತ್
ತಾಲೂಕಿನ ಯರಯ್ಯನಹಳ್ಳಿ ಗ್ರಾ.ಪಂ.ಯಲ್ಲಿ ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ (ನರೇಗಾ) ಯೋಜನೆಯ ಕೂಲಿಕಾರರ ಅದಾಲತ್ ನಡೆಯಿತು.
Vijaya Karnataka 23 Sep 2018, 5:00 am
ಸಂಡೂರು : ತಾಲೂಕಿನ ಯರಯ್ಯನಹಳ್ಳಿ ಗ್ರಾ.ಪಂ.ಯಲ್ಲಿ ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ (ನರೇಗಾ) ಯೋಜನೆಯ ಕೂಲಿಕಾರರ ಅದಾಲತ್ ನಡೆಯಿತು.
ತಾ.ಪಂ.ಇಒ ಜೆ.ಎಂ.ಅನ್ನದಾನಯ್ಯಸ್ವಾಮಿ ಅದಾಲತ್ ಉದ್ಘಾಟಿಸಿ ಮಾತನಾಡಿ, ಈಗಾಗಲೇ ನರೇಗಾ ಯೋಜನೆಯಡಿ ನಿರಂತರ 15 ದಿನಗಳ ಕಾಲ ಕೆಲಸ ಮಾಡಿದ ಕಾರ್ಮಿಕರನ್ನು ಗುರುತಿಸಿ ಕಾರ್ಮಿಕ ಇಲಾಖೆಯಿಂದ ಡಾ.ಬಿ.ಆರ್.ಅಂಬೇಡ್ಕರ್ ಕಾರ್ಮಿಕ ಸಹಾಯ ಹಸ್ತ ಯೋಜನೆಯಡಿ 4 ಸಾವಿರ ಸ್ಮಾರ್ಟ್ ಕಾರ್ಡ್ಗಳನ್ನು ವಿತರಿಸಲಾಗಿದೆ. ಉಳಿದಂತೆ ತಾಲೂಕಿನ 26 ಗ್ರಾ.ಪಂ.ವ್ಯಾಪ್ತಿಯಲ್ಲಿ ನರೇಗಾ ಯೋಜನೆಯಡಿ ಕೆಲಸ ನಿರ್ವಹಿಸುತ್ತಿರುವ 28 ಸಾವಿರ ಕಾರ್ಮಿಕರಿಗೆ ಸ್ಮಾರ್ಟ್ ಕಾರ್ಡ್ಗಳನ್ನು ವಿತರಿಸುವ ಗುರಿ ಹೊಂದಲಾಗಿದೆ ಎಂದರು.
ತಾಲೂಕಿನಾದ್ಯಂತ ಮಳೆಯಿಲ್ಲದೇ ಬರ ಆವರಿಸಿದ್ದು ಕೆರೆ, ಚೆಕ್ ಡ್ಯಾಂ ಹೂಳೆತ್ತುವುದು ಸೇರಿ ಸಮುದಾಯ ಆಧರಿತ ಕೆಲಸಗಳನ್ನು ಹೆಚ್ಚಾಗಿ ಕಲ್ಪಿಸಿ ಜನ ಗುಳೆ ಹೋಗುವುದನ್ನು ತಡೆಯಬೇಕು ಎಂದು ಸೂಚಿಸಿದರು. ತಾ.ಪಂ.ಎಡಿ (ನರೇಗಾ) ಎಂ.ಬಸವರಾಜ ಮಾತನಾಡಿ, ಸ್ಮಾರ್ಟ್ ಕಾರ್ಡ್ ಹೊಂದಿ 3 ವರ್ಷಗಳ ಸದಸ್ಯತ್ವ ಪೂರೈಸಿದವರಿಗೆ ಮಾಸಿಕ 1 ಸಾವಿರ ರೂ.ಪಿಂಚಣಿ, ನರೇಗಾ ಕೆಲಸದ ಸಂದರ್ಭದಲ್ಲಿ ಅಪಘಾತಕ್ಕೀಡಾದಲ್ಲಿ, ವಿಕಲಚೇತನರಾದಲ್ಲಿ ಮಾಸಿಕ 1 ಸಾವಿರ ರೂ. ಪಿಂಚಣಿ ಜತೆಗೆ ದೈಹಿಕ ದುರ್ಬಲತೆ ಆಧರಿಸಿ 2 ಲಕ್ಷ ರೂ. ಅನುಗ್ರಹ ರಾಶಿ ಸಹಾಯಧನ ನೀಡಲಾಗುವುದು. ಮನೆ ಕಟ್ಟಿಸಿಕೊಳ್ಳಲು 2 ಲಕ್ಷ ರೂ.ವರೆಗೆ ಸಹಾಯಧನ, ಮಹಿಳಾ ಫಲಾನುಭವಿಯ ಮೊದಲ ಎರಡು ಹೆಣ್ಣು ಮಕ್ಕಳ ಜನನಕ್ಕೆ 30 ಸಾವಿರ ರೂ.ಗಂಡು ಮಗುವಿನ ಜನನಕ್ಕೆ 20 ಸಾವಿರ ರೂ. ಸಹಾಯಧನ. ಕೂಲಿಕಾರರ ಮಕ್ಕಳಿಗೆ ಶೈಕ್ಷ ಣಿಕ ನೆರವು ಸೇರಿ ನಾನಾ ಸೌಲಭ್ಯಗಳು ದೊರೆಯುತ್ತವೆ ಎಂದರು.
ಕಾರ್ಮಿಕ ನಿರೀಕ್ಷ ಕ ದಿವಾಕರ್ ಮಾತನಾಡಿ, ನರೇಗಾ ಯೋಜನೆಯಡಿ ಸ್ಮಾರ್ಟ್ ಕಾರ್ಡ್ ಪಡೆಯಲು ಬೇಕಾದ ಅರ್ಹತೆ ಮತ್ತು ದಾಖಲಾತಿ ಸಲ್ಲಿಕೆ ಕುರಿತು ಮಾಹಿತಿ ನೀಡಿದರು.ಈ ಸಂದರ್ಭದಲ್ಲಿ ತಾ.ಪಂ.ಸದಸ್ಯ ಜೆ.ಕುಮಾರಸ್ವಾಮಿ, ಗ್ರಾ.ಪಂ.ಅಧ್ಯಕ್ಷ ಹೊನ್ನೂರುಸ್ವಾಮಿ, ಪಿಡಿಒ ಸಿದ್ದಲಿಂಗಸ್ವಾಮಿ, ಗ್ರಾ.ಪಂ.ಸದಸ್ಯರು, ನರೇಗಾ ಸಂಯೋಜಕರು, ಗ್ರಾಮಸ್ಥರು ಇತರರಿದ್ದರು.
ತಾ.ಪಂ.ಇಒ ಜೆ.ಎಂ.ಅನ್ನದಾನಯ್ಯಸ್ವಾಮಿ ಅದಾಲತ್ ಉದ್ಘಾಟಿಸಿ ಮಾತನಾಡಿ, ಈಗಾಗಲೇ ನರೇಗಾ ಯೋಜನೆಯಡಿ ನಿರಂತರ 15 ದಿನಗಳ ಕಾಲ ಕೆಲಸ ಮಾಡಿದ ಕಾರ್ಮಿಕರನ್ನು ಗುರುತಿಸಿ ಕಾರ್ಮಿಕ ಇಲಾಖೆಯಿಂದ ಡಾ.ಬಿ.ಆರ್.ಅಂಬೇಡ್ಕರ್ ಕಾರ್ಮಿಕ ಸಹಾಯ ಹಸ್ತ ಯೋಜನೆಯಡಿ 4 ಸಾವಿರ ಸ್ಮಾರ್ಟ್ ಕಾರ್ಡ್ಗಳನ್ನು ವಿತರಿಸಲಾಗಿದೆ. ಉಳಿದಂತೆ ತಾಲೂಕಿನ 26 ಗ್ರಾ.ಪಂ.ವ್ಯಾಪ್ತಿಯಲ್ಲಿ ನರೇಗಾ ಯೋಜನೆಯಡಿ ಕೆಲಸ ನಿರ್ವಹಿಸುತ್ತಿರುವ 28 ಸಾವಿರ ಕಾರ್ಮಿಕರಿಗೆ ಸ್ಮಾರ್ಟ್ ಕಾರ್ಡ್ಗಳನ್ನು ವಿತರಿಸುವ ಗುರಿ ಹೊಂದಲಾಗಿದೆ ಎಂದರು.
ತಾಲೂಕಿನಾದ್ಯಂತ ಮಳೆಯಿಲ್ಲದೇ ಬರ ಆವರಿಸಿದ್ದು ಕೆರೆ, ಚೆಕ್ ಡ್ಯಾಂ ಹೂಳೆತ್ತುವುದು ಸೇರಿ ಸಮುದಾಯ ಆಧರಿತ ಕೆಲಸಗಳನ್ನು ಹೆಚ್ಚಾಗಿ ಕಲ್ಪಿಸಿ ಜನ ಗುಳೆ ಹೋಗುವುದನ್ನು ತಡೆಯಬೇಕು ಎಂದು ಸೂಚಿಸಿದರು. ತಾ.ಪಂ.ಎಡಿ (ನರೇಗಾ) ಎಂ.ಬಸವರಾಜ ಮಾತನಾಡಿ, ಸ್ಮಾರ್ಟ್ ಕಾರ್ಡ್ ಹೊಂದಿ 3 ವರ್ಷಗಳ ಸದಸ್ಯತ್ವ ಪೂರೈಸಿದವರಿಗೆ ಮಾಸಿಕ 1 ಸಾವಿರ ರೂ.ಪಿಂಚಣಿ, ನರೇಗಾ ಕೆಲಸದ ಸಂದರ್ಭದಲ್ಲಿ ಅಪಘಾತಕ್ಕೀಡಾದಲ್ಲಿ, ವಿಕಲಚೇತನರಾದಲ್ಲಿ ಮಾಸಿಕ 1 ಸಾವಿರ ರೂ. ಪಿಂಚಣಿ ಜತೆಗೆ ದೈಹಿಕ ದುರ್ಬಲತೆ ಆಧರಿಸಿ 2 ಲಕ್ಷ ರೂ. ಅನುಗ್ರಹ ರಾಶಿ ಸಹಾಯಧನ ನೀಡಲಾಗುವುದು. ಮನೆ ಕಟ್ಟಿಸಿಕೊಳ್ಳಲು 2 ಲಕ್ಷ ರೂ.ವರೆಗೆ ಸಹಾಯಧನ, ಮಹಿಳಾ ಫಲಾನುಭವಿಯ ಮೊದಲ ಎರಡು ಹೆಣ್ಣು ಮಕ್ಕಳ ಜನನಕ್ಕೆ 30 ಸಾವಿರ ರೂ.ಗಂಡು ಮಗುವಿನ ಜನನಕ್ಕೆ 20 ಸಾವಿರ ರೂ. ಸಹಾಯಧನ. ಕೂಲಿಕಾರರ ಮಕ್ಕಳಿಗೆ ಶೈಕ್ಷ ಣಿಕ ನೆರವು ಸೇರಿ ನಾನಾ ಸೌಲಭ್ಯಗಳು ದೊರೆಯುತ್ತವೆ ಎಂದರು.
ಕಾರ್ಮಿಕ ನಿರೀಕ್ಷ ಕ ದಿವಾಕರ್ ಮಾತನಾಡಿ, ನರೇಗಾ ಯೋಜನೆಯಡಿ ಸ್ಮಾರ್ಟ್ ಕಾರ್ಡ್ ಪಡೆಯಲು ಬೇಕಾದ ಅರ್ಹತೆ ಮತ್ತು ದಾಖಲಾತಿ ಸಲ್ಲಿಕೆ ಕುರಿತು ಮಾಹಿತಿ ನೀಡಿದರು.ಈ ಸಂದರ್ಭದಲ್ಲಿ ತಾ.ಪಂ.ಸದಸ್ಯ ಜೆ.ಕುಮಾರಸ್ವಾಮಿ, ಗ್ರಾ.ಪಂ.ಅಧ್ಯಕ್ಷ ಹೊನ್ನೂರುಸ್ವಾಮಿ, ಪಿಡಿಒ ಸಿದ್ದಲಿಂಗಸ್ವಾಮಿ, ಗ್ರಾ.ಪಂ.ಸದಸ್ಯರು, ನರೇಗಾ ಸಂಯೋಜಕರು, ಗ್ರಾಮಸ್ಥರು ಇತರರಿದ್ದರು.