ಆ್ಯಪ್ನಗರ

ಎಸ್ಸಿ, ಎಸ್ಟಿ ದೌರ್ಜನ್ಯ ತಡೆ ಕಾಯ್ದೆ ಬಲವರ್ಧನೆಗೆ ಆಗ್ರಹ

ಪ.ಜಾತಿ, ಪ.ಪಂಗಡ ಸಮುದಾಯದವರ ಮೇಲಿನ ದೌರ್ಜನ್ಯ ತಡೆ ಕಾಯ್ದೆಯನ್ನು ಬಲಪಡಿಸಬೇಕು ಎಂದು ಆಗ್ರಹಿಸಿ ಡಿವೈಎಫ್‌ಐನ ತಾಲೂಕು ಸಮಿತಿ ಸ್ಥಳೀಯ ತಹಸೀಲ್ದಾರ್‌ ಗಂಗಪ್ಪರ ಮೂಲಕ ಪ್ರಧಾನಿ ನರೇಂದ್ರ ಮೋದಿಯವರಿಗೆ ಸೋಮವಾರ ಮನವಿಪತ್ರ ರವಾನಿಸಿತು.

Vijaya Karnataka Web 10 Apr 2018, 5:00 am
ಹೊಸಪೇಟೆ : ಪ.ಜಾತಿ, ಪ.ಪಂಗಡ ಸಮುದಾಯದವರ ಮೇಲಿನ ದೌರ್ಜನ್ಯ ತಡೆ ಕಾಯ್ದೆಯನ್ನು ಬಲಪಡಿಸಬೇಕು ಎಂದು ಆಗ್ರಹಿಸಿ ಡಿವೈಎಫ್‌ಐನ ತಾಲೂಕು ಸಮಿತಿ ಸ್ಥಳೀಯ ತಹಸೀಲ್ದಾರ್‌ ಗಂಗಪ್ಪರ ಮೂಲಕ ಪ್ರಧಾನಿ ನರೇಂದ್ರ ಮೋದಿಯವರಿಗೆ ಸೋಮವಾರ ಮನವಿಪತ್ರ ರವಾನಿಸಿತು.
Vijaya Karnataka Web BLR-BLY9HPT4


ಸುಪ್ರೀಂ ಕೋರ್ಟ್‌ ದೌರ್ಜನ್ಯ ತಡೆ ಕಾಯ್ದೆ-1989ಕ್ಕೆ ಸಂಬಂಧಿಸಿದಂತೆ 2018ರ ಮಾರ್ಚ್‌ 20ರಂದು ನೀಡಿದ ತೀರ್ಪು ಎಸ್ಸಿ,ಎಸ್ಟಿ ಸಮುದಾಯದ ಮೇಲಿನ ದೌರ್ಜನ್ಯ ತಡೆ ಕಾಯ್ದೆ ಮುಖ್ಯ ಉದ್ದೇಶಕ್ಕೆ ಮಾರಕವಾಗಿದೆ. ಈ ಕಾಯ್ದೆಯನ್ನು ದುರುಪಯೋಗ ಮಾಡಲಾಗುತ್ತಿದೆ ಎಂದು ಹೇಳುತ್ತಿರುವುದು ಸರಿಯಲ್ಲ. ಸರಕಾರಿ ಅಧಿಕಾರಿಗಳ ಮೇಲೆ ಈ ಕಾಯ್ದೆಯಡಿ ದೂರು ಸಲ್ಲಿಕೆಯಾದರೆ ಕೂಡಲೇ ಎಫ್‌.ಐ.ಆರ್‌. ದಾಖಲಿಸಬಾರದು, ಅವರನ್ನು ಬಂಧಿಸಬಾರದು ಹಾಗೂ ಆರೋಪಿತ ಸರಕಾರಿ ಅಧಿಕಾರಿಗಳಿಗೆ ಸಂಬಂಧಿಸಿದ ಪ್ರಾಧಿಕಾರದ ಅನುಮತಿ ಪಡೆದ ನಂತರವೇ ಆರೋಪಿಗಳನ್ನು ಬಂಧಿಸಬೇಕು ಹಾಗೂ ಆರೋಪಿಗಳು ಸರಕಾರಿ ನೌಕರರಲ್ಲವಾದರೆ ಎಸ್ಪಿಯ ಅನುಮೋದನೆಯ ನಂತರವಷ್ಟೇ ಬಂಧಿಸಬಹುದು ಎಂದು ತೀರ್ಪಿನಲ್ಲಿ ಹೇಳಿದೆ.

ಕೇಂದ್ರ ಸರಕಾರ ತೀರ್ಪಿನ ಕುರಿತು ತಕ್ಷ ಣವೇ ಮರುಪರಿಶೀಲನೆ ಅರ್ಜಿ ಸಲ್ಲಿಸಿಲ್ಲ. ಮರುಪರಿಶೀಲನೆಯ ಅರ್ಜಿಯಲ್ಲಿ ನಿರೀಕ್ಷ ಣಾ ಜಾಮೀನಿಗೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್‌ ನೀಡಿರುವ ತೀರ್ಪು ಪ್ರಶ್ನಿಸಲಾಗಿಲ್ಲ ಎಂದು ದೂರಿದ್ದಾರೆ.

ಡಿವೈಎಫ್‌ಐನ ಪದಾಧಿಕಾರಿಗಳಾದ ಬಿಸಾಟಿ ಮಹೇಶ್‌, ವಿ.ಸ್ವಾಮಿ, ಕಲ್ಯಾಣಯ್ಯ, ಕೆ.ರಮೇಶ್‌, ಇ.ಮಂಜುನಾಥ, ಬಂಡೆ ತಿರುಕಪ್ಪ, ಕಿನ್ನಾಳ್‌ ಹನುಮಂತ, ಸೂರ್ಯಕಿರಣ, ರಾಜಚಂದ್ರಶೇಖರ್‌, ಶಿವುಕುಮಾರ್‌ ಇದ್ದರು.


ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ