ಆ್ಯಪ್ನಗರ

ಅದಿರು ಉತ್ಪಾದನೆಗೆ ವಿರೋಧಿಸಿ ಧರಣಿ

ತಾಲೂಕಿನ ಐತಿಹಾಸಿಕ ಕುಮಾರಸ್ವಾಮಿ ದೇವಸ್ಥಾನದ ಸಮೀಪದಲ್ಲಿನ ಎಚ್‌.ಟಿ.ಗಣಿಯಲ್ಲಿ ಅದಿರು ಉತ್ಪಾದನೆಗೆ ನೀಡಿದ ಅನುಮತಿ ರದ್ದು ಪಡಿಸಬೇಕು ಎಂದು ಆಗ್ರಹಿಸಿ ಜನ ಸಂಗ್ರಾಮ ಪರಿಷತ್‌ ಮತ್ತು ಸಮಾಜ ಪರಿವರ್ತನೆ ಸಮುದಾಯದ ಪದಾಧಿಕಾರಿಗಳು ಪಟ್ಟಣದ ತಹಸಿಲ್‌ ಕಚೇರಿ ಎದುರು ಸೋಮವಾರ ಧರಣಿ ನಡೆಸಿದರು.

Vijaya Karnataka 19 Jun 2018, 5:00 am
ಸಂಡೂರು ; ತಾಲೂಕಿನ ಐತಿಹಾಸಿಕ ಕುಮಾರಸ್ವಾಮಿ ದೇವಸ್ಥಾನದ ಸಮೀಪದಲ್ಲಿನ ಎಚ್‌.ಟಿ.ಗಣಿಯಲ್ಲಿ ಅದಿರು ಉತ್ಪಾದನೆಗೆ ನೀಡಿದ ಅನುಮತಿ ರದ್ದು ಪಡಿಸಬೇಕು ಎಂದು ಆಗ್ರಹಿಸಿ ಜನ ಸಂಗ್ರಾಮ ಪರಿಷತ್‌ ಮತ್ತು ಸಮಾಜ ಪರಿವರ್ತನೆ ಸಮುದಾಯದ ಪದಾಧಿಕಾರಿಗಳು ಪಟ್ಟಣದ ತಹಸಿಲ್‌ ಕಚೇರಿ ಎದುರು ಸೋಮವಾರ ಧರಣಿ ನಡೆಸಿದರು. ಮುಖಂಡರಾದ ಟಿ.ಎಂ.ಶಿವಕುಮಾರ್‌, ಎ.ಜಿ.ಶ್ರೀಶೈಲ ಮಾತನಾಡಿ, ಐತಿಹಾಸಿಕ ಕುಮಾರಸ್ವಾಮಿ ಮತ್ತು ಪಾರ್ವತಿ ದೇವಸ್ಥಾನಗಳು ಶಿಷ್ಟ ಶಿಲೆಯಿಂದ ನಿರ್ಮಿಸಿದಲಾಗಿದ್ದು, ಕೇಂದ್ರ ಪುರಾತತ್ವ ಇಲಾಖೆ ವ್ಯಾಪ್ತಿಗೊಳಪಟ್ಟಿದೆ. ರಾಜ್ಯ ಸೇರಿ ಹೊರ ರಾಜ್ಯದ ಭಕ್ತರು ದೇವರಗಳ ಆರಾಧಕರಾಗಿದ್ದಾರೆ.
Vijaya Karnataka Web BLR-BLY 18 SDR 4


ಈ ಬೆಟ್ಟವನ್ನು ರಾಷ್ಟ್ರೀಯ ಪಾರಂಪರಿಕ ತಾಣ ಎಂದು ಘೋಷಿಸಬೇಕು. ದೇವಸ್ಥಾನದ ಸುತ್ತ 3 ಕಿ.ಮೀ.ವ್ಯಾಪ್ತಿಯಲ್ಲಿ ಗಣಿ ಚಟುವಟಿಕೆ ನಡೆಸಬಾರದು. ಚುನಾವಣೆ ವೇಳೆ 11 ಡಿ.2017 ರಂದು ದೇವಸ್ಥಾನಕ್ಕೆ ಆಗಮಿಸಿದ್ದ ಇಂದಿನ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಅವರಿಗೆ ದೇವಸ್ಥಾನದ ಸಂರಕ್ಷ ಣೆ ಕುರಿತು ಸಲ್ಲಿಸಲಾದ ಮನವಿಗೆ ತಮ್ಮ ಸರಕಾರ ಅಧಿಕಾರಕ್ಕೆ ಬಂದಲ್ಲಿ ದೇವಸ್ಥಾನದ ಸುತ್ತ ಮುತ್ತ 3 ಕಿ.ಮೀ. ವ್ಯಾಪ್ತಿಯಲ್ಲಿ ಗಣಿ ಚಟುವಟಿಕೆಗೆ ಅವಕಾಶ ನೀಡುವುದಿಲ್ಲ ಎಂದು ಹೇಳಿದ್ದರು. ಇದೀಗ ಮುಖ್ಯಮಂತ್ರಿಯಾದ ನಂತರ ಮೇ 31 ರಂದು ಜಿಂದಾಲ್‌ ಒಡೆತನದ ನಂದಿ ಮೈನಿಂಗ್‌ ಕಂಪನಿಗೆ ಅದಿರು ಉತ್ಪಾದಿಸಲು ಪರವಾನಗಿ ನೀಡಿದ್ದು, ಐತಿಹಾಸಿಕ ಕುಮಾರಸ್ವಾಮಿಯ ಭಕ್ತರಿಗೆ ಮಾಡಿದ ಅನ್ಯಾಯವಾಗಿದೆ ಎಂದು ಅಸಮಾಧಾನ ವ್ಯಕ್ತಡಿಸಿದರು.

ಅದಿರು ಬಗೆಯುವ ಭರದಲ್ಲಿ ಬ್ಲಾಸ್ಟಿಂಗ್‌ ನಡೆಸುವುದರಿಂದ ದೇವಸ್ಥಾನಕ್ಕೆ ಹಾನಿಯಾಗುವುದು ಖಚಿತ ಜತಗೆ ಧೂಳಿನ ಹೊಡೆತಕ್ಕೆ ಕಾಡಿನಲ್ಲಿನ ಜೀವ ವೈವಿಧ್ಯತೆಗೆ ಧಕ್ಕೆಯಾಗಲಿದೆ. ಈ ಬೆಟ್ಟದಲ್ಲಿ ಅದಿರು ಗಣಿಗಾರಿಕೆ ನಡೆಸಲು ಅವಕಾಶ ನೀಡಬಾರದು ಎಂದು ಆಗ್ರಹಿಸಿದರು. ತಹಸೀಲ್ದಾರ್‌ ಎಚ್‌.ಎಂ.ರಮೇಶವರಿಗೆ ಮನವಿ ಸಲ್ಲಿಸಿದರು.

ಈ ಸಂದರ್ಭದಲ್ಲಿ ಎಐಡಿವೈಒದ ಸೋಮಶೇಖರ್‌ಗೌಡ, ಎಸ್‌ಯುಸಿಐ(ಸಿ)ಯ ಸೋಮಶೇಖರ್‌ ಇದ್ದರು.


ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ