ಆ್ಯಪ್ನಗರ

ಕೊಪ್ಪಳ: ಯಶಸ್ವಿ ಚಿಕಿತ್ಸೆ, 9 ತಿಂಗಳ ಮಗುವಿನ ಗಂಟಲಿಂದ ಕಾಡಿಗೆ ಡಬ್ಬಿ ಹೊರಕ್ಕೆ ತೆಗೆದ ವೈದ್ಯರು

ಡಬ್ಬಿ ಬಾಯಿಯಲ್ಲಿ ಒಳಗೆ ಹೋಗದೇ ಹೊರಗೆ ಬಾರದ್ದರಿಂದ ಆತಂಕಗೊಂಡ ಪಾಲಕರು, ಮಗುವನ್ನು ತಕ್ಷಣ ಇಲ್ಲಿನ ಆಸ್ಪತ್ರೆಗೆ ಕರೆದುಕೊಂಡು ಬಂದರು. ಕಿಮ್ಸ್‌ ವೈದ್ಯ ಡಾ.ಕೆ.ಮಲ್ಲಿಕಾರ್ಜುನ್‌ ಅವರು ಯಶಸ್ವಿ ಚಿಕಿತ್ಸೆ ನಡೆಸಿ, ಗಂಟಲಿನಲ್ಲಿ ಸಿಲುಕಿದ್ದ ಡಬ್ಬಿಯನ್ನು ಹೊರತೆಗೆದಿದ್ದಾರೆ.

Vijaya Karnataka Web 23 Jul 2020, 4:49 pm
ಕೊಪ್ಪಳ: 9 ತಿಂಗಳ ಗಂಡು ಮಗುವಿನ ಗಂಟಲಿನಲ್ಲಿ ಸಿಲುಕಿದ್ದ ಕಾಡಿಗೆ ಡಬ್ಬಿಯನ್ನು ವೈದ್ಯರು, ಮಂಗಳವಾರ ರಾತ್ರಿ ಶಸ್ತ್ರ ಚಿಕಿತ್ಸೆ ಮೂಲಕ ಯಶಸ್ವಿಯಾಗಿ ಹೊರತೆಗೆದಿದ್ದಾರೆ.
Vijaya Karnataka Web ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ


ತಾಲೂಕಿನ ಅಳವಂಡಿ ಗ್ರಾಮದ ಚಂದ್ರಹಾಸ್‌ ಹಾಗೂ ಲಕ್ಷ್ಮವ್ವ ದಂಪತಿಯ 9 ತಿಂಗಳ ಪುತ್ರ ಪವನ್‌, ಕಾಡಿಗೆ ಡಬ್ಬಿ ಹಿಡಿದು ಆಡುತ್ತಿದ್ದ. ಆಕಸ್ಮಿಕವಾಗಿ ಬಾಯಲ್ಲಿಇಟ್ಟುಕೊಂಡಾಗ ಗಂಟಲಿನಲ್ಲಿ ಸಿಲುಕಿದೆ.

ಈ ಡಬ್ಬಿ ಬಾಯಿಯಲ್ಲಿ ಒಳಗೆ ಹೋಗದೇ ಹೊರಗೆ ಬಾರದ್ದರಿಂದ ಆತಂಕಗೊಂಡ ಪಾಲಕರು, ಮಗುವನ್ನು ತಕ್ಷಣ ಇಲ್ಲಿನ ಆಸ್ಪತ್ರೆಗೆ ಕರೆದುಕೊಂಡು ಬಂದರು. ಕಿಮ್ಸ್‌ ವೈದ್ಯ ಡಾ.ಕೆ.ಮಲ್ಲಿಕಾರ್ಜುನ್‌ ಅವರು ಯಶಸ್ವಿ ಚಿಕಿತ್ಸೆ ನಡೆಸಿ, ಗಂಟಲಿನಲ್ಲಿ ಸಿಲುಕಿದ್ದ ಡಬ್ಬಿಯನ್ನು ಹೊರತೆಗೆದಿದ್ದಾರೆ. ಐದಾರು ತಾಸಿನವರೆಗೆ ಮಗು ಸಾಕಷ್ಟು ಸಂಕಷ್ಟ ಅನುಭವಿಸಿದೆ. ಡಬ್ಬಿ ಹೊರ ತೆಗೆಯುತ್ತಿದ್ದಂತೆ ಮಗುವಿನ ಮೊಗದಲ್ಲಿ ನಗು ತೇಲಾಡಿತು ಎಂದು ವೈದ್ಯರು ತಿಳಿಸಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ