ಆ್ಯಪ್ನಗರ

ಬಳ್ಳಾರಿ ಇಬ್ಬಾಗ ಮಾಡಿದರೆ ರಾಜೀನಾಮೆ: ಬಿಎಸ್‌ವೈಗೆ ಸೋಮಶೇಖರ್‌ ರೆಡ್ಡಿ ಎಚ್ಚರಿಕೆ

ಕಾಂಗ್ರೆಸ್‌ನ ಮಾಜಿ ಶಾಸಕ ಎಚ್‌.ಅನಿಲ್ ಲಾಡ್‌ ಅವರು ಬಿಜೆಪಿ ಸೇರ್ಪಡೆಯಾಗುತ್ತಿರುವ ಬಗ್ಗೆ ಯಾವುದೇ ರೀತಿಯ ಪ್ರತಿಕ್ರಿಯೆ ನೀಡಲು ಶಾಸಕ ಜಿ.ಸೋಮಶೇಖರ್‌ ರೆಡ್ಡಿ ನಿರಾಕರಿಸಿದರು.

Vijaya Karnataka Web 28 Sep 2019, 8:26 pm
ಬಳ್ಳಾರಿ: ಅನರ್ಹ ಶಾಸಕ ಆನಂದ್‌ ಸಿಂಗ್‌ ಅವರೊಬ್ಬರ ರಾಜೀನಾಮೆ ಪರಿಗಣಿಸಿ, ನೂತನ ಜಿಲ್ಲೆರಚನೆ ಬಗ್ಗೆ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಯಾವುದೇ ನಿರ್ಧಾರ ತೆಗೆದುಕೊಳ್ಳಬಾರದು. ಒಂದು ವೇಳೆ ನೂತನ ಜಿಲ್ಲೆಆಗಬಾರದೆಂದು ನಾವೂ ರಾಜೀನಾಮೆ ಕೊಟ್ಟರೆ ಹೇಗೆ? ಎಂದು ಬಳ್ಳಾರಿ ನಗರ ಶಾಸಕ ಜಿ.ಸೋಮಶೇಖರ್‌ ರೆಡ್ಡಿ ಪ್ರಶ್ನಿಸಿದರು.
Vijaya Karnataka Web ಸೋಮಶೇಖರ್‌ ರೆಡ್ಡಿ
ಸೋಮಶೇಖರ್‌ ರೆಡ್ಡಿ


ಶನಿವಾರ ಸುದ್ದಿಗಾರರೊಂದಿಗೆ ಸೋಮಶೇಖರ್‌ ರೆಡ್ಡಿ ಮಾತನಾಡಿದರು.

''ಅನರ್ಹ ಶಾಸಕ ಆನಂದಸಿಂಗ್‌ ಅವರ ಪ್ರತ್ಯೇಕ ಜಿಲ್ಲೆ ರಚನೆ ಬೇಡಿಕೆಗೆ ರಾಜ್ಯ ಸರಕಾರ ಯಾವುದೇ ಕಾರಣಕ್ಕೂ ಮಣೆ ಹಾಕಬಾರದು. ಅವರೊಬ್ಬರ ರಾಜೀನಾಮೆಯಿಂದಾಗಿ ಈ ರೀತಿಯ ನಿರ್ಧಾರ ಕೈಗೊಳ್ಳಬಾರದು. ಜಿಲ್ಲೆಯ ನಾನಾ ಕ್ಷೇತ್ರಗಳಿಂದ ಗೋಪಾಲಕೃಷ್ಣ, ಸೋಮಲಿಂಗಪ್ಪ, ಜಿ.ಕರುಣಾಕರರೆಡ್ಡಿ ಹಾಗೂ ನಾನು ಬಿಜೆಪಿಯಿಂದ ಗೆದ್ದು ಶಾಸಕರಾಗಿದ್ದೇವೆ. ಪ್ರತ್ಯೇಕ ಜಿಲ್ಲೆ ರಚನೆ ವಿಚಾರ ಕುರಿತು ಚರ್ಚಿಸಲು ಮುಖ್ಯಮಂತ್ರಿಯವರು ಜಿಲ್ಲೆಯ ಶಾಸಕರ ಸಭೆ ಕರೆಯಬೇಕು. ಎಲ್ಲರ ಅಭಿಪ್ರಾಯ ಕೇಳಬೇಕು. ಆನಂತರವಷ್ಟೇ ಜಿಲ್ಲೆಯ ಇಬ್ಭಾಗದ ಕುರಿತು ಸೂಕ್ತ ನಿರ್ಧಾರ ಪ್ರಕಟಿಸಬೇಕು ಎಂದರು.

ಈ ಹಿಂದೆ ಕೊಪ್ಪಳ, ಯಾದಗಿರಿಯನ್ನು ಜಿಲ್ಲೆಗಳನ್ನಾಗಿ ಘೋಷಿಸಲಾಗಿದೆ. ಅಭಿವೃದ್ಧಿ ದೃಷ್ಟಿಕೋನದಿಂದ ಪ್ರತ್ಯೇಕ ಜಿಲ್ಲೆಗಳಾದ ಮೇಲೆ ಆ ಜಿಲ್ಲೆಗಳಲ್ಲಿಶೂನ್ಯ ಸಾಧನೆಯಾಗಿದೆ. ಅಖಂಡ ಬಳ್ಳಾರಿ ಜಿಲ್ಲೆಯನ್ನಾಗಿ ಉಳಿಸುವುದೇ ನಮ್ಮ ಮೊದಲ ಗುರಿ'' ಎಂದರು.

ಹಂಪಿ ಉತ್ಸವ ವಿಳಂಬವಾದರೆ ಹೋರಾಟ

''ಪ್ರಸಕ್ತ ಸಾಲಿನ ನವೆಂಬರ್‌ನಲ್ಲೇ ಹಂಪಿ ಉತ್ಸವ ಆಚರಿಸಬೇಕು. ಜಿಲ್ಲಾ ಉಸ್ತುವಾರಿ ಸಚಿವ ಲಕ್ಷ್ಮಣ ಸವದಿಯವರಿಗೂ ಈ ಕುರಿತು ತಿಳಿಸಲಾಗುವುದು. ಒಂದು ವೇಳೆ ವೇಳೆ ಹಂಪಿ ಉತ್ಸವ ಆಚರಣೆಗೆ ಹಿಂದೇಟು ಹಾಕಿದರೆ ಕಳೆದ ಬಾರಿಯಂತೆ ಹೋರಾಟ ನಡೆಸಲಾಗುವುದು'' ಎಂದು ಸೋಮಶೇಖರ್‌ ರೆಡ್ಡಿ ಎಚ್ಚರಿಕೆ ನೀಡಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ