ಆ್ಯಪ್ನಗರ

Mission Ballari - ‘ಭಾರತ್ ಜೋಡೋ’ ನಡುವೆ 'ಬಳ್ಳಾರಿ' ಮರುವಶಕ್ಕೆ ಸೋನಿಯಾ ಗಾಂಧಿ ಆಲೋಚನೆ

1999ರಲ್ಲಿ ಅವರು ಬಳ್ಳಾರಿಯಿಂದಲೇ ಸ್ಪರ್ಧಿಸಿದ್ದರು. ಅವರ ವಿರುದ್ಧ ಆಗಿನ ಬಿಜೆಪಿಯ ಸ್ಟಾರ್ ನಾಯಕಿಯಾಗಿದ್ದ ಸುಷ್ಮಾ ಸ್ವರಾಜ್ ಅವರು ಕಣಕ್ಕಿಳಿದಿದ್ದರು. ಅವರಿಬ್ಬರ ನಡುವಿನ ಆ ಚುನಾವಣಾ ಕದನವನ್ನು ಆಗ ಭಾರತದ ಸೊಸೆ (ಸೋನಿಯಾ) ಹಾಗೂ ಮನೆ ಮಗಳು (ಸುಷ್ಮಾ) ನಡುವಿನ ಸ್ವಾಭಿಮಾನದ ಹೋರಾಟ ಎಂದೇ ಬಿಂಬಿಸಲಾಗಿತ್ತು. ಅದೇ ಚುನಾವಣೆಯಲ್ಲಿ ಅವರು ಉತ್ತರ ಪ್ರದೇಶದ ತಮ್ಮ ಕುಟುಂಬಸ್ಥರ ಭದ್ರಕೋಟೆಯಾದ ಅಮೇಠಿಯಿಂದಲೂ ಸ್ಪರ್ಧಿಸಿದ್ದರು. ಸೋನಿಯಾಜೀ ಎರಡೂ ಕ್ಷೇತ್ರಗಳಲ್ಲಿ ಜಯ ಸಾಧಿಸಿದ್ದರು. ಆದರೆ, ಬಳ್ಳಾರಿಯ ಲೋಕಸಭಾ ಸದಸ್ಯತ್ವಕ್ಕೆ ರಾಜೀನಾಮೆ ಸಲ್ಲಿಸಿ, ಅಮೇಠಿಯನ್ನು ಉಳಿಸಿಕೊಂಡಿದ್ದರು.

Authored byಚೇತನ್ ಓ.ಆರ್. | Vijaya Karnataka Web 4 Oct 2022, 7:52 pm
ಬಳ್ಳಾರಿ: ಕಾಂಗ್ರೆಸ್ ನ ಭಾರತ್ ಜೋಡೋ ಯಾತ್ರೆ ದಿನಗಳೆದಂತೆ ರಂಗೇರುತ್ತಿದೆ. ಜನಸ್ಪಂದನೆಯೂ ಚೆನ್ನಾಗಿದೆ. ಇನ್ನು ಕೆಲವೇ ದಿನಗಳಲ್ಲಿ ಈ ಯಾತ್ರೆ ಬಯಲು ಸೀಮೆ ಕಡೆಗೆ ಪಯಣಿಸಲಿದೆ. ಅದರಲ್ಲೂ ವಿಶೇಷವಾಗಿ ಗಡಿ ಜಿಲ್ಲೆಯಾದ ಬಳ್ಳಾರಿಗೆ ಪ್ರಾಯಶಃ ಅ. 18-19ರಂದು ಕಾಲಿಡಬಹುದು.
Vijaya Karnataka Web Sonia Gandhi
ಸೋನಿಯಾ ಗಾಂಧಿ (ಸಂಗ್ರಹ ಚಿತ್ರ)


ಆ ಎರಡು ದಿನಗಳಲ್ಲಿ ರಾಹುಲ್ ಗಾಂಧಿ, ಸೋನಿಯಾ ಗಾಂಧಿ ಹಾಗೂ ಪ್ರಿಯಾಂಕಾ ಗಾಂಧಿಯವರು ಅಲ್ಲಿ ಬೃಹತ್ ಸಾರ್ವಜನಿಕ ಸಮಾರಂಭ ನಡೆಸುವ ಸಾಧ್ಯತೆಗಳಿವೆ ಎಂದು ಮೂಲಗಳು ತಿಳಿಸಿವೆ. ಅಲ್ಲಿನ ಸ್ಥಳೀಯ ಕಾಂಗ್ರೆಸ್ ಕಾರ್ಯಕರ್ತರಲ್ಲೂ ಇದೇ ವಿಚಾರ ಹರಡಿದ್ದು ಈಗಾಗಲೇ ಅವರಲ್ಲಿ ಹೊಸ ಉತ್ಸಾಹ ತುಂಬಿ ಬರುತ್ತಿದೆ ಎನ್ನಲಾಗಿದೆ.

Sonia Gandhi: ಭಾರತ್ ಜೋಡೋ ಯಾತ್ರೆ: ಗುರುವಾರ ಸೋನಿಯಾ ಗಾಂಧಿ ರಾಜ್ಯಕ್ಕೆ ಆಗಮಿಸುವ ಸಾಧ್ಯತೆ
ಬಳ್ಳಾರಿಯಲ್ಲೇಕೆ ಬೃಹತ್ ಸಭೆ?
ಹಿಂದೆ, 1999ರಲ್ಲಿ ಅವರು ಬಳ್ಳಾರಿಯಿಂದಲೇ ಸ್ಪರ್ಧಿಸಿದ್ದರು. ಅದಕ್ಕೆ ಕಾರಣ, ಸುಷ್ಮಾ ಸ್ವರಾಜ್ ಹಾಗೂ ರೆಡ್ಡಿ ಬ್ರದರ್ಸ್. ಇಡೀ ವಿಶ್ವವೇ ತಿರುಗಿ ನೋಡಿದ ಚುನಾವಣೆ ಅದು. ದಿನಬೆಳಗಾಗುವಷ್ಟರಲ್ಲಿ ಬಳ್ಳಾರಿ ಹೆಸರು ಜಗಜ್ಜಾಹೀರಾಯಿತು. ಅಸಲಿಗೆ, ಸುಷ್ಮಾರನ್ನು ಬಿಜೆಪಿ ವತಿಯಿಂದ ಸ್ಪರ್ಧೆಗಿಳಿಸಿ, ದೇಶಕ್ಕೆ ಸ್ವತಂತ್ರ ಬಂದಾಗಿನಿಂದ ಕಾಂಗ್ರೆಸ್ ನ ಭದ್ರಕೋಟೆ ಎನಿಸಿದ್ದ ಬಳ್ಳಾರಿಯನ್ನು ಕಾಂಗ್ರೆಸ್ ನಿಂದ ಕಿತ್ತುಕೊಳ್ಳಲು ರೆಡ್ಡಿ ಬ್ರದರ್ಸ್ ಮಾಡಿದ್ದ ತಂತ್ರಗಾರಿಕೆ ಅದು. ಅದನ್ನು ತಪ್ಪಿಸಲು ಆಗ ಖುದ್ದು ಸೋನಿಯಾ ಅವರೇ ಹೆಲಿಕಾಪ್ಟರ್ ನಲ್ಲಿ ಬಳ್ಳಾರಿಗೆ ಏಕಾಏಕಿ ಆಗಮಿಸಿ ಚುನಾವಣಾ ನಾಮಪತ್ರ ಸಲ್ಲಿಸಿ ಹೋಗಿ ಎಲ್ಲಾ ರಾಜಕೀಯ ನಾಯಕರ ಹುಬ್ಬೇರುವಂತೆ ಮಾಡಿದ್ದರು. ಅವರಿಬ್ಬರ ನಡುವಿನ ಆ ಚುನಾವಣಾ ಕದನವನ್ನು ಆಗ ಭಾರತದ ಸೊಸೆ (ಸೋನಿಯಾ) ಹಾಗೂ ಮನೆ ಮಗಳು (ಸುಷ್ಮಾ) ನಡುವಿನ ಸ್ವಾಭಿಮಾನದ ಹೋರಾಟ ಎಂದೇ ಬಿಂಬಿಸಲಾಗಿತ್ತು. ಅದೇ ಚುನಾವಣೆಯಲ್ಲಿ ಅವರು ಉತ್ತರ ಪ್ರದೇಶದ ತಮ್ಮ ಕುಟುಂಬಸ್ಥರ ಭದ್ರಕೋಟೆಯಾದ ಅಮೇಠಿಯಿಂದಲೂ ಸ್ಪರ್ಧಿಸಿದ್ದರು.

ಚುನಾವಣಾ ಫಲಿತಾಂಶ ಹೊರಬಿತ್ತು. ಸೋನಿಯಾಜೀ ಎರಡೂ ಕ್ಷೇತ್ರಗಳಲ್ಲಿ ಜಯ ಸಾಧಿಸಿದ್ದರು. ಆದರೆ, ಎರಡಲ್ಲಿ ಒಂದನ್ನು ಉಳಿಸಿಕೊಳ್ಳಬೇಕಿದ್ದರಿಂದ ಅವರು ಬಳ್ಳಾರಿಯ ಲೋಕಸಭಾ ಸದಸ್ಯತ್ವಕ್ಕೆ ರಾಜೀನಾಮೆ ಸಲ್ಲಿಸಿ, ಅಮೇಠಿಯನ್ನು ಉಳಿಸಿಕೊಂಡಿದ್ದರು.


ಸೋನಿಯಾರವರ ಈ ನಿರ್ಧಾರ ಬಳ್ಳಾರಿ ಜನತೆಯನ್ನು ನಿರಾಸೆಗೊಳಿಸಿತು. ಸುಷ್ಮಾರ ಜತೆಗಿನ ತೀವ್ರ ಹಣಾಹಣಿಯಲ್ಲೂ ಸೋನಿಯಾರನ್ನು ಗೆಲ್ಲಿಸಿಕೊಟ್ಟಿದ್ದನ್ನು ಮರೆತಿದ್ದಕ್ಕೆ ಕೋಪಗೊಂಡರು. ಹೀಗೆ, ಉಂಟಾದ ಒಂದು ಸಣ್ಣ ಅಸಮಾಧಾನ, ಆನಂತರ ದೊಡ್ಡದಾಗಿ ಬೆಳೆದು ಆನಂತರ ಬಳ್ಳಾರಿ ಬಿಜೆಪಿಯ ಭದ್ರಕೋಟೆಯಾಗಿ ಮಾರ್ಪಟ್ಟಿತು.

ಅಂದು ಮಾಡಿದ ತಪ್ಪನ್ನು ಇಂದು ಸರಿಪಡಿಸಿಕೊಳ್ಳಲು ಸೋನಿಯಾ ಜೀ ನಿರ್ಧರಿಸಿದ್ದಾರೆಂದು ಹೇಳಲಾಗಿದೆ. ಹಾಗಾಗಿ, ಅವರು ಇದೇ 18-19ರಂದು ಬಳ್ಳಾರಿಯಲ್ಲಿ ತಮ್ಮ ಮಕ್ಕಳೊಂದಿಗೆ ಬೃಹತ್ ಬಹಿರಂಗ ಸಭೆ ನಡೆಸಲು ತೀರ್ಮಾನಿಸಿದ್ದಾರೆ ಎಂದು ಹೇಳಲಾಗಿದೆ.
ಲೇಖಕರ ಬಗ್ಗೆ
ಚೇತನ್ ಓ.ಆರ್.
ಪ್ರಸ್ತುತ, ವಿಜಯ ಕರ್ನಾಟಕ ವೆಬ್ ನಲ್ಲಿ ಪತ್ರಕರ್ತನಾಗಿ 2022ರಿಂದ ಪತ್ರಕರ್ತನಾಗಿ ಸೇವೆ ಸಲ್ಲಿಸುತ್ತಿದ್ದಾರೆ. 2007ರಲ್ಲಿ ತುಮಕೂರು ವಿವಿಯಿಂದ ಪತ್ರಿಕೋದ್ಯಮದಲ್ಲಿ 5ನೇ ರ‍್ಯಾಂಕ್ ನೊಂದಿಗೆ ಸ್ನಾತಕೋತ್ತರ ಪದವಿ ಪಡೆದಿರುವ ಇವರು ಮೈಸೂರು ವಿವಿಯಿಂದ ಪತ್ರಿಕೋದ್ಯಮದಲ್ಲಿ ಪಿಎಚ್ ಡಿ ಪದವಿ ಪಡೆದಿದ್ದಾರೆ. ಜಿಲ್ಲಾ ಸುದ್ದಿಗಳಿಂದ ಹಿಡಿದು ಕ್ರೀಡೆ, ದೇಶ- ವಿದೇಶ, ಸಿನಿಮಾ, ವಿಜ್ಞಾನ- ತಂತ್ರಜ್ಞಾನ ಇತ್ಯಾದಿ ವೈವಿಧ್ಯಯಮ ವಿಷಯಗಳ ಬಗ್ಗೆ ಬರೆಯುವ ಇವರಿಗೆ, ನಾನಾ ಪ್ರತಿಷ್ಠಿತ ಸಂಸ್ಥೆಗಳಲ್ಲಿ ಈವರೆಗೆ 16 ವರ್ಷ ಕೆಲಸ ಮಾಡಿದ ಅನುಭವವಿದೆ. ಫೋಟೋಗ್ರಫಿ ಇವರ ಅಚ್ಚುಮೆಚ್ಚಿನ ಹವ್ಯಾಸ. ಸಿನಿಮಾ, ಸಾಕ್ಷ್ಯಚಿತ್ರ, ಸಾಹಿತ್ಯ, ವಿಡಿಯೋ ಸಂಕಲನ, ಪತ್ರಿಕೆ ಪುಟ ವಿನ್ಯಾಸ, ಹಾಡುಗಾರಿಕೆ, ಚಿತ್ರಕಲೆ, ಅನಿಮೇಶನ್, ಸಂಗೀತದಲ್ಲಿಯೂ ಆಸಕ್ತಿಯಿದೆ.... ಇನ್ನಷ್ಟು ಓದಿ

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ