ಆ್ಯಪ್ನಗರ

‘ಸಹಭಾಗಿತ್ವ ಹೆಚ್ಚಿಸಲು ಕ್ರೀಡೆ ನೆರವು’

ಗ್ರಾಮೀಣ ಭಾಗದಲ್ಲಿ ಜನರಲ್ಲಿ ಶಾಲೆಯತ್ತ ಒಲವು ಮೂಡಿಸಲು ಮತ್ತು ಶಾಲೆ ಅಭಿವದ್ಧಿಯಲ್ಲಿ ಪಾಲಕರ ಸಹಾಭಾಗಿತ್ವ ತರಲು ಪಾಲಕರ ಕ್ರೀಡಾಕೂಟಗಳು ಸಹಕಾರಿಯಾಗುತ್ತವೆ ಎಂದು ಮುಖ್ಯಗುರು ಮೇರಿ ಲೀಲಾವತಿ ಹೇಳಿದರು.

ವಿಕ ಸುದ್ದಿಲೋಕ 3 Mar 2016, 4:33 am
ಸಿರುಗುಪ್ಪ; ಗ್ರಾಮೀಣ ಭಾಗದಲ್ಲಿ ಜನರಲ್ಲಿ ಶಾಲೆಯತ್ತ ಒಲವು ಮೂಡಿಸಲು ಮತ್ತು ಶಾಲೆ ಅಭಿವದ್ಧಿಯಲ್ಲಿ ಪಾಲಕರ ಸಹಾಭಾಗಿತ್ವ ತರಲು ಪಾಲಕರ ಕ್ರೀಡಾಕೂಟಗಳು ಸಹಕಾರಿಯಾಗುತ್ತವೆ ಎಂದು ಮುಖ್ಯಗುರು ಮೇರಿ ಲೀಲಾವತಿ ಹೇಳಿದರು.
Vijaya Karnataka Web sports help to enhance the partnership
‘ಸಹಭಾಗಿತ್ವ ಹೆಚ್ಚಿಸಲು ಕ್ರೀಡೆ ನೆರವು’


ತಾಲೂಕಿನ ಹೊಸ ದೇವಲಾಪುರ ಸರಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಮಂಗಳವಾರ ನಡೆದ ಪಾಲಕರ ಕ್ರೀಡಾಕೂಟಕ್ಕೆ ಚಾಲನೆ ನೀಡಿ ಮಾತನಾಡಿದರು. ಮಕ್ಕಳನ್ನು ಶಾಲೆಗೆ ಕಳುಹಿಸುವುದಷ್ಟೇ ಪಾಲಕರ ಕೆಲಸವಲ್ಲ. ಶೈಕ್ಷಣಿಕ ವಾತಾವರಣವನ್ನು ಮೂಡಿಸುವುದು ಸಹ ಪಾಲಕರ ಜವಾಬ್ದಾರಿ ಎಂದರು.

ಗಮನ ಸೆಳೆದ ಕ್ರೀಡಾಕೂಟ: ಇಳಿವಯಸ್ಸಿನಲ್ಲಿ ಗ್ರಾಮೀಣ ಕ್ರೀಡಾಕೂಟಗಳಲ್ಲಿ ಭಾಗವಹಿಸಿದ ಪಾಲಕರು, ಆಟೋಟದ ಸಂಭ್ರಮ ಅನುಭವಿಸಿದರು.

ಗ್ರಾಮೀಣ ಸ್ಪರ್ಧೆಗಳಲ್ಲಿ ಪಾಲಕರಾದ ಲಕ್ಷ್ಮಿ, ಶಿವಮ್ಮ, ಅಡಿವೆಮ್ಮ, ರಾಮಮ್ಮ, ಕಮಲಮ್ಮ, ಮಲ್ಲಮ್ಮ ಸೇರಿದಂತೆ ಇತರರು ಪೈಪೋಟಿಯಿಂದ ಗಮನ ಸೆಳೆದರು. ಗುಂಡು ಎಸೆಯುವುದು, ಚಮಚದಲ್ಲಿ ನಿಂಬೆ ಹಣ್ಣು ಇಟ್ಟುಕೊಂಡುವುದು ಓಡುವುದು ಸೇರಿದಂತೆ ಇತರ ಕ್ರೀಡೆಗಳಲ್ಲಿ ಮೇಲುಗೈ ಸಾಧಿಸಿ, ಪಾಲಕರು ಕ್ರೀಡಾ ಸ್ಫೂರ್ತಿ ಮೆರೆದರು.

ಪಾಲಕರ ವಿಭಾಗದಲ್ಲಿ ದುರುಗಪ್ಪ, ಕನಕಪ್ಪ, ಸರ್ದಾರ, ಇಂದ್ರ ಅವರು ನಿಧಾನಗತಿಯ ಸೈಕಲ್ ಓಡಿಸುವ ಸ್ಪರ್ಧೆಯಲ್ಲಿ ಸೆಣಸಿದರು. ಗುಂಡು ಎಸೆಯುವ ಸ್ಪರ್ಧೆಯನ್ನು ನೋಡಿದ ಮಕ್ಕಳು ಚಪ್ಪಾಳೆ ತಟ್ಟಿ ಪ್ರೋತ್ಸಾಹಿಸಿದರು. ಶಿಕ್ಷಕರಾದ ವಿಜಯ ಕುಮಾರ, ರಾಘವೇಂದ್ರ, ವಾತ್ಸಲ, ರವಿಕುಮಾರ ಸೇರಿದಂತೆ ಇತರರಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ