ಆ್ಯಪ್ನಗರ

ಪ್ರವಾಹ ಪೀಡಿತ ಪ್ರದೇಶಗಳಿಗೆ ಶ್ರೀರಾಮುಲು ಭೇಟಿ; ಅಪಾರ ಪ್ರಮಾಣದ ಬೆಳೆ ನಾಶದ ಬಗ್ಗೆ ಮಾಹಿತಿ

ಕರ್ನಾಟಕದಲ್ಲಿ ಭಾರಿ ಮಳೆಯಾಗುತ್ತಿದೆ. ಗಣಿ ನಾಡು ಬಳ್ಳಾರಿಯಲ್ಲೂ ವರುಣನ ಅಬ್ಬರ ಜೋರಾಗಿದೆ. ಜಲಾಶಯಗಳು ಭರ್ತಿಯಾಗಿದ್ದು, ಗ್ರಾಮಗಳು ಜಲಾವೃತಗೊಂಡಿವೆ.

Vijaya Karnataka Web 11 Aug 2019, 7:29 pm
ಬಳ್ಳಾರಿ: ಬಳ್ಳಾರಿ ಜಿಲ್ಲೆಯ ಹರಪನಹಳ್ಳಿ ಹಾಗೂ ಹೂವಿನಹಡಗಲಿ ತಾಲೂಕಿನ ಪ್ರವಾಹ ಪೀಡಿತ ಪ್ರದೇಶಗಳಿಗೆ ಶಾಸಕರಾದ ಬಿ ಶ್ರೀರಾಮುಲು, ಬಳ್ಳಾರಿ ನಗರ ಶಾಸಕರಾದ ಜಿ ಸೋಮಶೇಖರ್ ರೆಡ್ಡಿ, ಹರಪನಹಳ್ಳಿ ಶಾಸಕರಾದ ಕರುಣಾಕರ ರೆಡ್ಡಿ ರವರು ಮತ್ತು ಸಂಸದರಾದ ವೈ ದೇವೇಂದ್ರಪ್ಪ ಭೇಟಿ ನೀಡಿ‌ ಪರಿಶೀಲಿಸಿದರು.
Vijaya Karnataka Web ಶ್ರೀರಾಮುಲು
ಶ್ರೀರಾಮುಲು


ಗರ್ಭಗುಡಿ ಹಡಗಲಿ ತಾಲೂಕಿನ ಹರವಿ ಕುರುವತ್ತಿ ಗ್ರಾಮ ಗ್ರಾಮಗಳಿಗೆ ಭೇಟಿ ನೀಡಿ ಹೊಲಗದ್ದೆ ಮುಳುಗಡೆಯಾಗಿದ್ದ ಪ್ರದೇಶದಲ್ಲಿ ತೆಪ್ಪದ ಮೂಲಕ ಹೋಗಿ ನೆರೆ ವೀಕ್ಷಣೆ ಮಾಡಿದರು.

ನೆರೆಹಾವಳಿಯಿಂದ ರೈತರು ಬೆಳೆದಿರುವಂತಹ ಅಪಾರ ಪ್ರಮಾಣದ ಬೆಳೆದ ಬೆಳೆಗಳು ಸಂಪೂರ್ಣವಾಗಿ ಬೆಳೆಗಳ ನಾಶವಾಗಿವೆ. ರಾಜ್ಯ ಸರಕಾರವು ಕೇಂದ್ರ ಸರಕಾರಕ್ಕೆ‌ ವರದಿ ಸಲ್ಲಿಸಲಿದೆ ಎಂದರು.

ಪ್ರವಾಹ ಪರಿಸ್ಥಿತಿ ನಿಭಾಯಿಸಲು ಅಧಿಕಾರಿಗಳಿಗೆ ಅಗತ್ಯ ಕ್ರಮ ಕೈಗೊಳ್ಳುವಂತೆ ಇದೇ ಸಂದರ್ಭದಲ್ಲಿ ಶಾಸಕ ಶ್ರೀರಾಮುಲು ಸೂಚಿಸಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ