ಆ್ಯಪ್ನಗರ

ಸಂಭ್ರಮದಿಂದ ಶ್ರೀವಸುಧೇಂದ್ರರ ಉತ್ತರಾರಾಧನೆ

ತಾಲೂಕಿನ ಕೆಂಚನಗುಡ್ಡ ಗ್ರಾಮದ ತುಂಗಭದ್ರಾ ನದಿ ತೀರದ ರಾಘವೇಂದ್ರಸ್ವಾಮಿಗಳ ಮಠದ ಶ್ರೀವಸುಧೇಂದ್ರ ತೀರ್ಥರ ಮೂಲ ಬಂದಾವನದ ಸನ್ನಿಧಾನದಲ್ಲಿ ಶ್ರೀವಸುಧೇಂದ್ರತೀರ್ಥರ ಉತ್ತರಾರಾಧನೆ ಗುರುವಾರ ಸಂಭ್ರಮದಿಂದ ನಡೆಯಿತು.

Vijaya Karnataka 3 Nov 2018, 12:00 am
ಸಿರುಗುಪ್ಪ: ತಾಲೂಕಿನ ಕೆಂಚನಗುಡ್ಡ ಗ್ರಾಮದ ತುಂಗಭದ್ರಾ ನದಿ ತೀರದ ರಾಘವೇಂದ್ರಸ್ವಾಮಿಗಳ ಮಠದ ಶ್ರೀವಸುಧೇಂದ್ರ ತೀರ್ಥರ ಮೂಲ ಬಂದಾವನದ ಸನ್ನಿಧಾನದಲ್ಲಿ ಶ್ರೀವಸುಧೇಂದ್ರತೀರ್ಥರ ಉತ್ತರಾರಾಧನೆ ಗುರುವಾರ ಸಂಭ್ರಮದಿಂದ ನಡೆಯಿತು.
Vijaya Karnataka Web BLR-BLY2SGP1


ಮಂತ್ರಾಲಯ ಮಠದ ಶ್ರೀ ಸುಬುಧೇಂದ್ರ ತೀರ್ಥರು, ಮೂಲ ಬೃಂದಾವನಕ್ಕೆ ಹಾಗೂ ಪ್ರಾಣ ದೇವರ ಮೂರ್ತಿಗೆ, ಹರಿವಾಯು ಗುರುಗಳಿಗೆ ಸಂಪೂರ್ಣ ಪಂಚಾಮೃತಾಭಿಷೇಕ ನೆರವೇರಿಸಿದರು. ಉತ್ತರಾರಾಧನೆ ವಿಧ್ಯುಕ್ತವಾಗಿ ಪೂರ್ಣಗೊಂಡ ಹಿನ್ನೆಲೆಯಲ್ಲಿ ಶ್ರೀಗಳು ವಸಂತ ಪೂಜೆ ಕೈಗೊಂಡರು. ಉತ್ಸವ ಮೂರ್ತಿಗೆ ಭಕ್ತರು ಗುಲಾಲು ಎರಚಿ ಸಂಭ್ರಮಿಸಿದರು.

ಶ್ರೀಮಠದ ಆಪ್ತ ಕಾರ್ಯದರ್ಶಿ ಎಸ್.ಎಂ.ಸಯಮೀಂದ್ರಾಚಾರಿ ಶ್ರೀಗಳಿಗೆ ಗುಲಾಲು ಹಾಕಿದ ಭಕ್ತರು ಬಳಿಕ ಪರಸ್ಪರ ಗುಲಾಲು ಹಾಕಿಕೊಂಡು ಮಠದ ಆವರಣದಲ್ಲಿ ಸಂತಸ ಹಂಚಿಕೊಂಡರು.

ಸಂಭ್ರಮದ ತೆಪ್ಪೋತ್ಸವ: ಇದಕ್ಕೂ ಮುನ್ನ ಶ್ರೀವಸುಧೇಂದ್ರತೀರ್ಥರ ಉತ್ಸವ ಮೂರ್ತಿಯನ್ನು ಮತ್ತು ಮೂಲ ರಾಮನ ಪೆಟ್ಟಿಗೆಯನ್ನು ದೋಣಿಯಲ್ಲಿಟ್ಟು ತುಂಗಭದ್ರಾ ನದಿಯಲ್ಲಿ ಮಂತ್ರಾಲಯ ಶ್ರೀಗಳು ವಿಶೇಷ ಪೂಜೆ ನೆರವೇರಿಸಿದರು. ತುಂಗಭದ್ರಾ ನದಿಯಲ್ಲಿ ಭಕ್ತರ ಜಯಘೋಷದ ನಡುವೆ ತೆಪ್ಪೋತ್ಸವ ನಡೆಯಿತು. ಶ್ರೀಗಳು ತಪ್ತ ಮುದ್ರಧಾರಣೆ ನೆರವೇರಿಸಿ, ಸಂಸ್ಥಾನ ಪೂಜೆಯನ್ನು ಕೈಗೊಂಡರು. ನಂತರ ಮಠದ ಆವರಣದಲ್ಲಿ ನಡೆದ ಮಹಾರಥೋತ್ಸವ ನಡೆಯಿತು. ಮಠದ ವಿದ್ವಾಂಸ ಕೃಷ್ಣಾಚಾರ್ ಅವರು ಕಾರ್ತಿಕ ಮಾಸದ ಮಹಾತ್ಮೆ ಕುರಿತು ಪ್ರವಚನ ನಡೆಸಿದರು. ನಾನಾ ಕಡೆಯಿಂದ ಆಗಮಿಸಿದ್ದ ಭಕ್ತರು ಧಾರ್ಮಿಕ ಕಾರ್ಯಕ್ರಮಗಳಲ್ಲಿ ಪಾಲ್ಗೊಂಡರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ