ಹೊಸಪೇಟೆ (ಬಳ್ಳಾರಿ): ಅತೀ ಶೀಘ್ರದಲ್ಲಿ ವಿಜಯನಗರ ಜಿಲ್ಲೆ ಘೋಷಣೆ ಆಗಲಿದೆ. ರಾಜ್ಯವೇ ನೋಡುವಂತೆ ವಿಜಯಯೋತ್ಸವ ಆಚರಿಸೋಣ ಎಂದು ಸಚಿವ ಆನಂದ್ ಸಿಂಗ್ ಹೇಳಿದರು. ಗಣರಾಜ್ಯೋತ್ಸವ ಪ್ರಯುಕ್ತ ನಗರದ ರೋಟರಿ ವೃತ್ತದಲ್ಲಿ 150 ಅಡಿ ಎತ್ತರದ ಧ್ವಜಸ್ಥಂಬದಲ್ಲಿ ರಾಷ್ಟ್ರ ಧ್ವಜ ಹಾರಿಸಿ ಮಾತನಾಡಿದ ಅವರು, ದೆಹಲಿಯಲ್ಲಿ ನಡೆಯುವ ಗಣರಾಜ್ಯೋತ್ಸವ ಪರೇಡ್ನಲ್ಲಿ ರಾಜ್ಯ ಸರಕಾರದಿಂದ ವಿಜಯನಗರ ವೈಭವದ ಸ್ತಬ್ಧಚಿತ್ರ ಮೆರಗು ನೀಡಲಿದೆ ಎಂದರು.
ಪಶ್ಚಿಮ ತಾಲೂಕುಗಳು ಹಾಗೂ ಇಲ್ಲಿನ ಜನರ ಆಸೆಯಾದ ವಿಜಯನಗರ ಜಿಲ್ಲೆ ಕೆಲವೇ ದಿನಗಳಲ್ಲಿ ಘೋಷಣೆಯಾಗಲಿದೆ. ರಾಜ್ಯವೇ ನೋಡುವಂತೆ ವಿಜಯಯೋತ್ಸವ ಆಚರಿಸೋಣ. ವಿಜಯೋತ್ಸವಕ್ಕೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಹಾಗೂ ಕೇಂದ್ರದ ನಾಯಕರು ಭಾಗವಹಿಸುವಂತೆ ಮನವಿ ಮಾಡಲಾಗಿದೆ ಎಂದು ತಿಳಿಸಿದರು.
ಮುಂದಿನ ದಿನಗಳಲ್ಲಿ ವಿಜಯನಗರ ಜಿಲ್ಲೆಗೆ ಉಜ್ವಲ ಭವಿಷ್ಯ ಇದೆ ಎಂದು ಸಚಿವ ಆನಂದ್ಸಿಂಗ್ ತಿಳಿಸಿದರು. ತಾಪಂ ಅಧ್ಯಕ್ಷೆ ನಾಗವೇಣಿ ಬಸವರಾಜ್, ತಹಸೀಲ್ದಾರ್ ಎಚ್.ವಿಶ್ವನಾಥ, ಇಒ ವಿಶ್ವನಾಥ, ಬಿಇಒ ಸುನಂದ, ಮುಖಂಡರಾದ ಧರ್ಮೇಂದ್ರ ಸಿಂಗ್, ಸಾಲಿಸಿದ್ದಯ್ಯ ಮತ್ತಿತರರಿದ್ದರು.
ಈಗಾಗಲೇ ರಾಜ್ಯ ಸರಕಾರದಿಂದ ಅಧಿಕೃತವಾಗಿ ವಿಜಯನಗರ ಜಿಲ್ಲೆಯ ಘೋಷಣೆಗೆ ಸಿದ್ಧತೆ ನಡೆಯುತ್ತಿವೆ. ಸಚಿವ ಸಂಪುಟದ ಅನುಮೋದನೆ ಕೂಡ ದೊರೆತಿದ್ದು, ಆಡಳಿತಾತ್ಮಕ ಕಾರ್ಯಗಳ ಬಳಿಕ ರಾಜ್ಯದಲ್ಲಿ 31ನೇ ಜಿಲ್ಲೆಯಾಗಿ ವಿಜಯನಗರ ಅಸ್ತಿತ್ವಕ್ಕೆ ಬರಲಿದೆ. ಅಖಂಡ ಬಳ್ಳಾರಿಯಿಂದ ವಿಭಜನೆ ಆಗಲಿದೆ.
ಪಶ್ಚಿಮ ತಾಲೂಕುಗಳು ಹಾಗೂ ಇಲ್ಲಿನ ಜನರ ಆಸೆಯಾದ ವಿಜಯನಗರ ಜಿಲ್ಲೆ ಕೆಲವೇ ದಿನಗಳಲ್ಲಿ ಘೋಷಣೆಯಾಗಲಿದೆ. ರಾಜ್ಯವೇ ನೋಡುವಂತೆ ವಿಜಯಯೋತ್ಸವ ಆಚರಿಸೋಣ. ವಿಜಯೋತ್ಸವಕ್ಕೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಹಾಗೂ ಕೇಂದ್ರದ ನಾಯಕರು ಭಾಗವಹಿಸುವಂತೆ ಮನವಿ ಮಾಡಲಾಗಿದೆ ಎಂದು ತಿಳಿಸಿದರು.
ಮುಂದಿನ ದಿನಗಳಲ್ಲಿ ವಿಜಯನಗರ ಜಿಲ್ಲೆಗೆ ಉಜ್ವಲ ಭವಿಷ್ಯ ಇದೆ ಎಂದು ಸಚಿವ ಆನಂದ್ಸಿಂಗ್ ತಿಳಿಸಿದರು. ತಾಪಂ ಅಧ್ಯಕ್ಷೆ ನಾಗವೇಣಿ ಬಸವರಾಜ್, ತಹಸೀಲ್ದಾರ್ ಎಚ್.ವಿಶ್ವನಾಥ, ಇಒ ವಿಶ್ವನಾಥ, ಬಿಇಒ ಸುನಂದ, ಮುಖಂಡರಾದ ಧರ್ಮೇಂದ್ರ ಸಿಂಗ್, ಸಾಲಿಸಿದ್ದಯ್ಯ ಮತ್ತಿತರರಿದ್ದರು.
ಈಗಾಗಲೇ ರಾಜ್ಯ ಸರಕಾರದಿಂದ ಅಧಿಕೃತವಾಗಿ ವಿಜಯನಗರ ಜಿಲ್ಲೆಯ ಘೋಷಣೆಗೆ ಸಿದ್ಧತೆ ನಡೆಯುತ್ತಿವೆ. ಸಚಿವ ಸಂಪುಟದ ಅನುಮೋದನೆ ಕೂಡ ದೊರೆತಿದ್ದು, ಆಡಳಿತಾತ್ಮಕ ಕಾರ್ಯಗಳ ಬಳಿಕ ರಾಜ್ಯದಲ್ಲಿ 31ನೇ ಜಿಲ್ಲೆಯಾಗಿ ವಿಜಯನಗರ ಅಸ್ತಿತ್ವಕ್ಕೆ ಬರಲಿದೆ. ಅಖಂಡ ಬಳ್ಳಾರಿಯಿಂದ ವಿಭಜನೆ ಆಗಲಿದೆ.