ಆ್ಯಪ್ನಗರ

ಬಳ್ಳಾರಿ: ಕೊರೊನಾ ಸೋಂಕಿತ ಗರ್ಭಿಣಿಗೆ ಯಶಸ್ವಿ ಶಸ್ತ್ರ ಚಿಕಿತ್ಸೆ, ಗಂಡು ಮಗು ಜನನ

ಬಳ್ಳಾರಿಯ ಜಿಲ್ಲಾ ನಿಗದಿತ ಕೊರೊನಾ ವೈರಸ್‌ ಆಸ್ಪತ್ರೆಯಲ್ಲಿ ಸೋಂಕಿತ ಗರ್ಭಿಣಿಯರಿಬ್ಬರಿಗೆ ಹೆರಿಗೆಯಾಗಿದ್ದು, ಎರಡು ಗಂಡು ಮಕ್ಕಳು ಜನಿಸಿವೆ. ತಾಯಿ ಹಾಗೂ ಮಕ್ಕಳು ಆರೋಗ್ಯವಾಗಿದ್ದಾರೆ.

Vijaya Karnataka Web 25 Jun 2020, 2:16 pm
ಬಳ್ಳಾರಿ: ಜಿಲ್ಲಾ ಕೋವಿಡ್ ಆಸ್ಪತ್ರೆಯಲ್ಲಿ ಕೊರೊನಾ ಸೋಂಕಿತ ಗರ್ಭಿಣಿಯರಿಬ್ಬರ ಹೆರಿಗೆಯಾಗಿದ್ದು, ತಾಯಿ ಮತ್ತು ಮಕ್ಕಳು ಆರೋಗ್ಯವಾಗಿದ್ದಾರೆ. ಆಸ್ಪತ್ರೆಯಲ್ಲಿ ಇನ್ನೂ ಎಂಟು ಜನ ಕೊರೊನಾ ಸೋಂಕಿತ ಗರ್ಭಿಣಿಯರಿದ್ದು, ಅವರ ಮೇಲೂ ವಿಶೇಷ ನಿಗಾವಹಿಸಲಾಗಿದೆ.
Vijaya Karnataka Web successful operation coronavirus positive woman gives birth to healthy baby boy
ಬಳ್ಳಾರಿ: ಕೊರೊನಾ ಸೋಂಕಿತ ಗರ್ಭಿಣಿಗೆ ಯಶಸ್ವಿ ಶಸ್ತ್ರ ಚಿಕಿತ್ಸೆ, ಗಂಡು ಮಗು ಜನನ


ಬಳ್ಳಾರಿ ನೆಹರು ಕಾಲೋನಿಯ 29 ವರ್ಷದ ರೋಗಿ ಸಂಖ್ಯೆ-6416 ಮಹಿಳೆಗೆ ಗುರುವಾರ ಬೆಳಗ್ಗೆ 5ಕ್ಕೆ ನುರಿತ ವೈದ್ಯರ ತಂಡ ಶಸ್ತ್ರ ಚಿಕಿತ್ಸೆ ಮೂಲಕ ಹೆರಿಗೆ ಮಾಡಿಸಿದ್ದು, ಗಂಡು ಮಗು ಜನಿಸಿದೆ. ತಾಯಿ-ಮಗು ಆರೋಗ್ಯವಾಗಿದ್ದು, ಮಗು 2.8ಕೆಜಿ ತೂಕ ಹೊಂದಿದೆ. ಗರ್ಭಿಣಿಯ ಪತಿ ಎರಡು ದಿನಗಳ ಹಿಂದೆಯೇ ಕೋವಿಡ್‌ನಿಂದ ಗುಣಮುಖರಾಗಿ ಮನೆಗೆ ತೆರಳಿದ್ದರು. ಈ ಮಹಿಳೆಯಲ್ಲಿ ಕೊರೊನಾ ಪಾಸಿಟಿವ್ ಇದ್ದರೂ ಸಹ ಯಾವುದೇ ರೀತಿಯ ಸೋಂಕಿನ ಲಕ್ಷಣಗಳು ಇಲ್ಲ.

ಜಿಲ್ಲಾ ಕೋವಿಡ್ ಆಸ್ಪತ್ರೆಯಲ್ಲಿ ಬುಧವಾರ ರಾತ್ರಿ ರಾಯದುರ್ಗದ 28 ವರ್ಷದ ರೋಗಿ ಸಂಖ್ಯೆ-7094 ಯುವತಿಯ ಸಾಮಾನ್ಯ ಹೆರಿಯಾಗಿದ್ದು, ಗಂಡು ಮಗು ಜನಿಸಿದೆ. ತಾಯಿ-ಮಗು ಆರೋಗ್ಯವಾಗಿದ್ದು, ಮಗು 3.2 ಕೆಜಿ ತೂಕ ಹೊಂದಿದೆ. ಈ ಮಹಿಳೆಯಲ್ಲೂ ಕೂಡ ಕೊರೊನಾ ಸೋಂಕು ದೃಢಪಟ್ಟಿದ್ದರೂ ಯಾವುದೇ ರೀತಿಯ ಸೋಂಕಿನ ಲಕ್ಷಣಗಳು ಇಲ್ಲ. ಪತಿಯಿಂದ ಮಹಿಳೆಗೆ ಸೊಂಕು ಹರಡಿದ ಹಿನ್ನೆಲೆಯಿದ್ದು, ಅವರು ಸಹ ಕೆಲದಿನಗಳ ಹಿಂದೆ ಗುಣಮುಖರಾಗಿ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದರು.

ಗುಡ್‌ನ್ಯೂಸ್‌: ಬಳ್ಳಾರಿಯಲ್ಲಿ 49 ಸೋಂಕಿತರು ಗುಣಮುಖ, ಆಸ್ಪತ್ರೆಯಿಂದ ಬಿಡುಗಡೆ

ಮಕ್ಕಳ ಆರೋಗ್ಯ ನೋಡಿಕೊಂಡು ಸ್ವ್ಯಾಬ್ ಟೆಸ್ಟ್ ಮಾಡಿಸುವುದಕ್ಕೆ ಸಂಬಂಧಿಸಿದಂತೆ ಸಮಿತಿ ನಿರ್ಣಯದ ಅನುಸಾರ ಕ್ರಮಕೈಗೊಳ್ಳಲಾಗುವುದು. ಆಸ್ಪತ್ರೆಯಲ್ಲಿ ಇನ್ನೂ 8 ಜನ ಕೊರೊನಾ ಸೋಂಕಿತ ಗರ್ಭಿಣಿಯರಿದ್ದು, ಅವರ ಮೇಲೂ ವಿಶೇಷ ನಿಗಾವಹಿಸಲಾಗಿದೆ ಎಂದು ಡಾ.ಎನ್.ಬಸರೆಡ್ಡಿ ತಿಳಿಸಿದ್ದಾರೆ.

ಬಳ್ಳಾರಿಯಲ್ಲಿ ಮತ್ತೆ ಕೊರೊನಾ ಸ್ಫೋಟ..! ಒಂದೇ ದಿನ 65 ಕೇಸ್‌‌, 400 ದಾಟಿದ ಸೋಂಕಿತರ ಸಂಖ್ಯೆ

ನುರಿತ ತಜ್ಞ ವೈದ್ಯರಾದ ಡಾ.ಸುಯಗ್ನ ಜೋಶಿ, ಡಾ.ವಿಜಯಲಕ್ಷ್ಮೀ, ಡಾ.ಸರಸ್ವತಿ, ಡಾ.ರಾಜೇಶ್ವರಿ, ಡಾ.ಮಲ್ಲಣ್ಣ, ಡಾ.ಸತೀಶ್, ಡಾ.ಭಾಸ್ಕರ್, ಡಾ.ನಿತೀಶ್, ಡಾ.ವೀರಶಂಕರ್, ಡಾ.ಸುನೀಲ್, ಡಾ.ಜಯಲಕ್ಷ್ಮಿ, ಡಾ.ಸಂಪತ್‌ ಹಾಗೂ ಒಟಿ ವಿಭಾಗದ ಸಿಬ್ಬಂದಿ ಇದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ