ಆ್ಯಪ್ನಗರ

ರೈಲ್ವೆ ಖಾಸಗೀಕರಣ ವಿರೋಧಿಸಿ ಬಳ್ಳಾರಿಯಲ್ಲಿ ಎಸ್‌ಯುಸಿಐ ವತಿಯಿಂದ ಧರಣಿ

ಕೂಡಲೇ ರೈಲ್ವೆ ಖಾಸಗೀಕರಣವನ್ನು ಕೈಬಿಡಬೇಕು. ಯಾವುದೇ ಕಾರಣಕ್ಕೂ ರೈಲ್ವೆ ಜಮೀನು, ಕಾಲೊನಿ ಗಳು, ಆಸ್ಪತ್ರೆಗಳು, ವರ್ಕ ಶಾಪ್‌ಗಳು ಮತ್ತು ಇತರೆ ರೈಲ್ವೆ ಸಂಸ್ಥೆಗಳನ್ನು ಮುಚ್ಚುವುದು, ಮಾರಾಟ ಮಾಡುವುದನ್ನು ತಡೆಗಟ್ಟಬೇಕು ಎಂದು ಪ್ರತಿಭಟನಾಕಾರರು ಒತ್ತಾಯಿಸಿದರು.

Vijaya Karnataka Web 15 Sep 2020, 5:10 pm
ಬಳ್ಳಾರಿ: ಕೇಂದ್ರದ ಬಿಜೆಪಿ ಸರಕಾರ ರೈಲ್ವೆ ಇಲಾಖೆಯನ್ನು ಖಾಸಗೀಕರಣ ಮಾಡಲು ಹೊರಟಿರುವುದನ್ನು ವಿರೋಧಿಸಿ ಎಸ್‌.ಯು.ಸಿ.ಐ ವತಿಯಿಂದ ನಗರದ ರೈಲ್ವೆ ನಿಲ್ದಾಣದ ಎದುರು ಮಂಗಳವಾರ ಪ್ರತಿಭಟನೆ ನಡೆಸಲಾಯಿತು.
Vijaya Karnataka Web suci


ದೇಶದ ಆರ್ಥಿಕತೆಯ ಬಹುದೊಡ್ಡ ಜೀವನಾಡಿಯಾದ ರೈಲ್ವೆ ಜಾಲ ಸಾರ್ವಜನಿಕ ಉದ್ಯಮವಾಗಿದೆ. ಆದರೆ, ಕೇಂದ್ರದ ಪ್ರಧಾನಿ ಮೋದಿ ನೇತೃತ್ವದ ಬಿಜೆಪಿ ಸರಕಾರ ವ್ಯಾಪಕವಾಗಿ ಖಾಸಗೀಕರಣಗೊಳಿಸುತ್ತ, ಲಾಭಕೋರ ಕೈಗಾರಿಕಾ ಮನೆತನಗಳಿಗೆ ಒಪ್ಪಿಸಲು ಹೊರಟಿದೆ ಎಂದು ಆರೋಪಿಸಿದರು.

ಡ್ರಗ್ಸ್ ದಂಧೆಯಲ್ಲಿ ತೊಡಗಿರುವವರ ವಿರುದ್ಧ ದೇಶದ್ರೋಹ ಪ್ರಕರಣದಡಿ ಕ್ರಮ ಕೈಗೊಳ್ಳಿ; ಎಬಿವಿಪಿ

ಕಾರ್ಪೊರೇಟ್ ಪ್ರಜಾತಂತ್ರ ನಡೆಸುತ್ತಿರುವ ಸರಕಾರ ಖಾಸಗಿ ಸಂಸ್ಥೆಗಳಿಗೋಸ್ಕರ ಇರುವ ಸರಕಾರವಾಗಿದೆ. ಸಾರ್ವಜನಿಕ ಆಸ್ತಿ ಖಾಸಗೀಕರಣ ಮಾಡುವುದು ಖಂಡನೀಯ. ಕೂಡಲೇ ರೈಲ್ವೆ ಖಾಸಗೀಕರಣವನ್ನು ಕೈಬಿಡಬೇಕು. ಯಾವುದೇ ಕಾರಣಕ್ಕೂ ರೈಲ್ವೆ ಜಮೀನು, ಕಾಲೊನಿ ಗಳು, ಆಸ್ಪತ್ರೆಗಳು, ವರ್ಕ ಶಾಪ್‌ಗಳು ಮತ್ತು ಇತರೆ ರೈಲ್ವೆ ಸಂಸ್ಥೆಗಳನ್ನು ಮುಚ್ಚುವುದು, ಮಾರಾಟ ಮಾಡುವುದನ್ನು ತಡೆಗಟ್ಟಬೇಕು ಎಂದು ಪ್ರತಿಭಟನಾಕಾರರು ಒತ್ತಾಯಿಸಿದರು.

ಬಳ್ಳಾರಿಯಲ್ಲಿ ಜಿಂದಾಲ್ ಕಂಪನಿ ವಿರುದ್ಧ ನೌಕರನೊಬ್ಬನ ಏಕಾಂಗಿ ಹೋರಾಟ..!

ರೈಲ್ವೆ ಉತ್ಪಾದಕ ಘಟಕಗಳನ್ನು ಕಾರ್ಪೊರೇಟ್ ಮನೆತನಗಳಿಗೆ ಮಾರುವುದನ್ನು ತಡೆಯಬೇಕು. ಉದ್ಯೋಗ ಕಡಿತದ ಬದಲು ಖಾಲಿ ಇರುವ ಹುದ್ದೆಗಳನ್ನು ಭರ್ತಿ ಮಾಡಬೇಕು. ಯಾವುದೇ ನೌಕರನನ್ನು ಕೆಲಸದಿಂದ ತೆಗೆಯಬಾರದು. ನಿವೃತ್ತ ಎಲ್ಲ ನೌಕರರಿಗೂ ಪಿಂಚಣಿ ನೀಡಬೇಕು. ರೈಲ್ವೆ ಪ್ರಯಾಣ ದರ ಮತ್ತು ಸಾಗಣೆ ದರವನ್ನು ಏರಿಸಬಾರದು ಎಂದು ಆಗ್ರಹಿಸಿದರು.

ಸೆಪ್ಟೆಂಬರ್ 21ರಂದು ವಿಧಾನಸೌಧಕ್ಕೆ ಮುತ್ತಿಗೆ ಹಾಕಲು ರೈತಸಂಘದಿಂದ ನಿರ್ಧಾರ

ಪಕ್ಷದ ಜಿಲ್ಲಾ ಮುಖಂಡರಾದ ಆರ್‌.ಸೋಮಶೇಖರಗೌಡ, ಎ.ದೇವದಾಸ್‌, ಶರ್ಮಾಸ್‌, ಕೋಳೂರು ಪಂಪಾಪತಿ, ಜಿ.ಸುರೇಶ್‌, ಜಗದೀಶ್‌, ರವಿಕಿರಣ ಇದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ