ಹಗರಿಬೊಮ್ಮನಹಳ್ಳಿ ; ಪಟ್ಟಣದ ಆದರ್ಶ ವಿದ್ಯಾಲಯದಲ್ಲಿ ಶಿಕ್ಷ ಕರ ದಿನಾಚರಣೆ ನಿಮಿತ್ತ ವಿದ್ಯಾರ್ಥಿಗಳಿಂದ ಶಿಕ್ಷ ಕರಿಗಾಗಿ ಕ್ರೀಡಾಕೂಟ ಮಂಗಳವಾರ ಹಮ್ಮಿಕೊಳ್ಳಲಾಗಿತ್ತು.
ಕ್ರಿಕೇಟ್ನಲ್ಲಿ ಮುಖ್ಯಗುರು ಶ್ರೀನಿವಾಸ್ ಒಟ್ಟು 4 ಬೌಂಡರಿ ಬಾರಿಸುವ ಮೂಲಕ ಜಗದೀಶ್ ಮತ್ತು ತಂಡ ವಿಜೇತರಾದರು. ವಾಲಿಬಾಲ್ ಪಂದ್ಯದಲ್ಲಿ ಶ್ರೀನಿವಾಸ ಮತ್ತು ತಂಡ ಜಯಗಳಿಸಿತು. 6ನೇ ಇಂದ್ರಿಯ ಶಕ್ತಿ ಪರೀಕ್ಷೆಯಲ್ಲಿ ಹಿಂದಿ ಶಿಕ್ಷ ಕಿ ಸ್ನೇಹಲತಾ ಮೊದಲ ಸ್ಥಾನ, ಶಿಕ್ಷ ಕಿ ಶಬನಾ 2ನೇ ಸ್ಥಾನ ಪಡೆದರು. ಪುರುಷರ ಬಾಲ್ ಬ್ಯಾಂಡ್ಮಿಟನ್ನಲ್ಲಿ ವಿಜ್ಞಾನ ಶಿಕ್ಷ ಕ ಸುಕುಮುನಿ ಸ್ವಾಮಿ ಮತ್ತು ತಂಡ ವಿಜೇತರಾದರೆ, ಮಹಿಳೆಯರ ವಿಭಾಗದಲ್ಲಿ ಇಂಗ್ಲೀಷ್ ಶಿಕ್ಷ ಕಿ ನಾಗಮ್ಮ ಮತ್ತು ತಂಡ ಜಯಗಳಿಸಿದರು. ಕಣ್ಣುಕಟ್ಟಿಕೊಂಡು ವಸ್ತುಗಳನ್ನು ಗ್ರಹಿಸುವ ಸ್ಪರ್ಧೆಯಲ್ಲಿ ಮುಖ್ಯಗುರು ಶ್ರೀನಿವಾಸ, ಗಣಿತ ಶಿಕ್ಷ ಕ ಸಂತೋಷ್ ಕುಮಾರ್ ಜಯಗಳಿಸಿದರು.
ಥರ್ಮಾಕೋಲ್ನ ವಸ್ತುಗಳ ಜೋಡಣೆಯಲ್ಲಿ ಸುಕುಮುನಿ ಸ್ವಾಮಿ ವಿಜೇತರಾದರು. ಒಟ್ಟು 18 ಶಿಕ್ಷ ಕರು ಕ್ರೀಡಾಕೂಟದಲ್ಲಿ ಪಾಲ್ಗೊಂಡ್ಡು, ಕೆಲಕಾಲ ಚಿಣ್ಣರಂತೆ ನಲಿದರು. ಟಿ.ಮಂಜುನಾಥ, ನಾಗಮ್ಮ, ಜ್ಞಾನೇಶ್ವರಿ, ಸಿದ್ದಲಿಂಗ ಸ್ವಾಮಿ, ಸರ್ವಮಂಗಳ, ನೇತ್ರಾವತಿ, ಶಬನಾ, ಶಿಲ್ಪಕಲಾ, ಮಧುಕುಮಾರ್, ಪ್ರಸಾದ್ ಇತರರಿದ್ದರು. ವಿದ್ಯಾರ್ಥಿ ಪ್ರತಿನಿಧಿಗಳಾದ ಯು.ರವಿ, ವಿನೂತಾ, ಕೆ.ಮಂಜುನಾಥ, ಅಲ್ಲಾಭಕ್ಷಿ, ಕೀರ್ತಿ, ಸೌಂದರ್ಯ ಇತರರು ಕ್ರೀಡಾಕೂಟ ಆಯೋಜಿಸಿದ್ದರು. ವಿದ್ಯಾರ್ಥಿಗಳೇ ಕ್ರೀಡೆಗಳ ನಿರ್ಣಾಯಕರಾಗಿದ್ದು ವಿಶೇಷವಾಗಿತ್ತು.
ಕ್ರಿಕೇಟ್ನಲ್ಲಿ ಮುಖ್ಯಗುರು ಶ್ರೀನಿವಾಸ್ ಒಟ್ಟು 4 ಬೌಂಡರಿ ಬಾರಿಸುವ ಮೂಲಕ ಜಗದೀಶ್ ಮತ್ತು ತಂಡ ವಿಜೇತರಾದರು. ವಾಲಿಬಾಲ್ ಪಂದ್ಯದಲ್ಲಿ ಶ್ರೀನಿವಾಸ ಮತ್ತು ತಂಡ ಜಯಗಳಿಸಿತು. 6ನೇ ಇಂದ್ರಿಯ ಶಕ್ತಿ ಪರೀಕ್ಷೆಯಲ್ಲಿ ಹಿಂದಿ ಶಿಕ್ಷ ಕಿ ಸ್ನೇಹಲತಾ ಮೊದಲ ಸ್ಥಾನ, ಶಿಕ್ಷ ಕಿ ಶಬನಾ 2ನೇ ಸ್ಥಾನ ಪಡೆದರು. ಪುರುಷರ ಬಾಲ್ ಬ್ಯಾಂಡ್ಮಿಟನ್ನಲ್ಲಿ ವಿಜ್ಞಾನ ಶಿಕ್ಷ ಕ ಸುಕುಮುನಿ ಸ್ವಾಮಿ ಮತ್ತು ತಂಡ ವಿಜೇತರಾದರೆ, ಮಹಿಳೆಯರ ವಿಭಾಗದಲ್ಲಿ ಇಂಗ್ಲೀಷ್ ಶಿಕ್ಷ ಕಿ ನಾಗಮ್ಮ ಮತ್ತು ತಂಡ ಜಯಗಳಿಸಿದರು. ಕಣ್ಣುಕಟ್ಟಿಕೊಂಡು ವಸ್ತುಗಳನ್ನು ಗ್ರಹಿಸುವ ಸ್ಪರ್ಧೆಯಲ್ಲಿ ಮುಖ್ಯಗುರು ಶ್ರೀನಿವಾಸ, ಗಣಿತ ಶಿಕ್ಷ ಕ ಸಂತೋಷ್ ಕುಮಾರ್ ಜಯಗಳಿಸಿದರು.
ಥರ್ಮಾಕೋಲ್ನ ವಸ್ತುಗಳ ಜೋಡಣೆಯಲ್ಲಿ ಸುಕುಮುನಿ ಸ್ವಾಮಿ ವಿಜೇತರಾದರು. ಒಟ್ಟು 18 ಶಿಕ್ಷ ಕರು ಕ್ರೀಡಾಕೂಟದಲ್ಲಿ ಪಾಲ್ಗೊಂಡ್ಡು, ಕೆಲಕಾಲ ಚಿಣ್ಣರಂತೆ ನಲಿದರು. ಟಿ.ಮಂಜುನಾಥ, ನಾಗಮ್ಮ, ಜ್ಞಾನೇಶ್ವರಿ, ಸಿದ್ದಲಿಂಗ ಸ್ವಾಮಿ, ಸರ್ವಮಂಗಳ, ನೇತ್ರಾವತಿ, ಶಬನಾ, ಶಿಲ್ಪಕಲಾ, ಮಧುಕುಮಾರ್, ಪ್ರಸಾದ್ ಇತರರಿದ್ದರು. ವಿದ್ಯಾರ್ಥಿ ಪ್ರತಿನಿಧಿಗಳಾದ ಯು.ರವಿ, ವಿನೂತಾ, ಕೆ.ಮಂಜುನಾಥ, ಅಲ್ಲಾಭಕ್ಷಿ, ಕೀರ್ತಿ, ಸೌಂದರ್ಯ ಇತರರು ಕ್ರೀಡಾಕೂಟ ಆಯೋಜಿಸಿದ್ದರು. ವಿದ್ಯಾರ್ಥಿಗಳೇ ಕ್ರೀಡೆಗಳ ನಿರ್ಣಾಯಕರಾಗಿದ್ದು ವಿಶೇಷವಾಗಿತ್ತು.