ಆ್ಯಪ್ನಗರ

ಸರಕಾರದ ಯೋಜನೆ ಜನರಿಗೆ ತಿಳಿಸಿ

ರಾಜ್ಯ ಸರಕಾರ ಜಾರಿಗೊಳಿಸಿದ ಯೋಜನೆಗಳನ್ನು ಜನಪ್ರತಿನಿಧಿಗಳ ಜತೆಗೆ ಶಿಕ್ಷ ಣ ಪಡೆದ ಯುವಕರು ಸಾರ್ವಜನಿಕರಿಗೆ ತಿಳಿಸಬೇಕು ಎಂದು ಶಾಸಕ ಎಂ.ಎಸ್‌.ಸೋಮಲಿಂಗಪ್ಪ ಹೇಳಿದರು.

Vijaya Karnataka 11 Jun 2018, 5:00 am
ಸಿರುಗುಪ್ಪ : ರಾಜ್ಯ ಸರಕಾರ ಜಾರಿಗೊಳಿಸಿದ ಯೋಜನೆಗಳನ್ನು ಜನಪ್ರತಿನಿಧಿಗಳ ಜತೆಗೆ ಶಿಕ್ಷ ಣ ಪಡೆದ ಯುವಕರು ಸಾರ್ವಜನಿಕರಿಗೆ ತಿಳಿಸಬೇಕು ಎಂದು ಶಾಸಕ ಎಂ.ಎಸ್‌.ಸೋಮಲಿಂಗಪ್ಪ ಹೇಳಿದರು.
Vijaya Karnataka Web BLR-BLY10SGP2


ತಾಲೂಕಿನ ತೆಕ್ಕಲಕೋಟೆಯ ಅಂಬೇಡ್ಕರ್‌ ಭವನದಲ್ಲಿ ನಡೆದ ಅಲೆಮಾರಿ ಬುಡಕಟ್ಟು ಕ್ರೀಡಾ ಮತ್ತು ಸಾಂಸ್ಕೃತಿಕ ಟ್ರಸ್ಟ್‌ನ ತಾಲೂಕು ಮಟ್ಟದ ಸಮಾವೇಶ ಉದ್ಘಾಟಿಸಿ ಮಾತನಾಡಿದರು.

ರಾಜ್ಯಾಧ್ಯಕ್ಷ ವೈ.ಶಿವಕುಮಾರ ಅವರು ತಾಲೂಕಿನ ಅಲೆಮಾರಿ ಬುಡಕಟ್ಟು ಸಮುದಾಯದ ಸಮಸ್ಯೆಗಳ ಕುರಿತು ಶಾಸಕರಿಗೆ ಮನವಿ ಸಲ್ಲಿಸಿ, ಅಲೆಮಾರಿ ಸಮುದಾಯದವರಿಗಾಗಿ ಸಮುದಾಯ ಭವನ, ಈರನಾಗಮ್ಮ ದೇವಸ್ಥಾನ ನಿರ್ಮಾಣ, ಅಲೆಮಾರಿ ಬುಡಕಟ್ಟು ಸಮುದಾಯದವರ ಕಾಲೊನಿಗಳಲ್ಲಿ ಸೌಲಭ್ಯ ಕಲ್ಪಿಸಬೇಕು ಎಂದು ಮನವಿ ಮಾಡಿದರು.

ಸಿಂಧೋಳ್ಳ ಸಮಾಜದ ಕೆ.ಕರಿಯಪ್ಪ, ಮೇದಾರ ಸಮುದಾಯದ ಆನಂದ್‌, ಹಂಡಿಜೋಗಿ ಸಮುದಾಯದ ಜೆ.ಹುಲುಗಣ್ಣ, ಡಕ್ಕಲಿಗ ಸಮುದಯದ ಹನುಮಂತಪ್ಪ, ಬುಡ್ಗ ಜಂಗಮ ಸಮುದಾಯದ ಮಂಜುನಾಥ, ಮುಖಂಡರಾದ ಸಿದ್ದಪ್ಪ, ಗರೀಬ್‌ಸಾಬ್‌, ಮಾರೆಪ್ಪ, ಪಕ್ಕೀರಪ್ಪ, ದೊಡ್ಡಸಿದ್ದಪ್ಪ, ಬಸವರಾಜ್‌, ಸುಧಾಕರ್‌ ಇದ್ದರು.


ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ