ಹೊಸಪೇಟೆ : ತಾಲೂಕಿನ ಹಂಪಿ ವಿರೂಪಾಕ್ಷೇಶ್ವರ ದೇವಸ್ಥಾನದಲ್ಲಿ ಸೋಮವಾರ ಉಪವಿಭಾಗಾಧಿಕಾರಿ ಗಾರ್ಗಿ ಜೈನ್ ಅವರ ನೇತೃತ್ವದಲ್ಲಿ ಕಲ್ಲು ಸಕ್ಕರೆ ಪ್ರಸಾದ ಪ್ಯಾಕೇಟ್ ವಿತರಣೆ, ಬುಕ್ ಸ್ಟಾಲ್ ಮಳಿಗೆ ಹಾಗೂ ಪಾದರಕ್ಷೆಯ ನೋಡಿಕೊಳ್ಳುವ ಗುತ್ತಿಗೆಯ ವರ್ಷದ ಹರಾಜು ಪ್ರಕ್ರಿಯೆ ನಡೆಯಿತು. ಶರಣಪ್ಪ ಹಂಪಿ ಅವರು ಬುಕ್ ಸ್ಟಾಲ್ ಮಳಿಗೆಗೆ 10.51 ಲಕ್ಷ ರೂ.ನೀಡಿದರೆ, ಗುತ್ತಲ ನಾಗರಾಜ ಕಲ್ಲು ಸಕ್ಕರೆ ಪ್ರಸಾದ ಪ್ಯಾಕೇಟ್ ವಿತರಣೆಯ ಗುತ್ತಿಗೆಯನ್ನು 7.51 ಲಕ್ಷ ರೂ.ಗೆ ಪಡೆದರು. ಮಾರೆಪ್ಪ ಹಂಪಿ ಅವರು ಪಾದರಕ್ಷೆ ನೋಡಿಕೊಳ್ಳುವ ಗುತ್ತಿಗೆಯನ್ನು 8.11 ಲಕ್ಷ ರೂ.ಗೆ ಹರಾಜಿನಲ್ಲಿ ಪಡೆದರು. ಹರಾಜು ಪ್ರಕ್ರಿಯೆ ಬೆಳಗ್ಗೆ 11 ರಿಂದ ಮಧ್ಯಾಹ್ನ 2 ಗಂಟೆವರೆಗೆ ನಡೆಯಿತು. ಮುಜರಾಯಿ ಪರಿವೀಕ್ಷ ಕ ಹನುಮಂತಪ್ಪ, ವಿರೂಪಾಕ್ಷೇಶ್ವರ ದೇವಸ್ಥಾನದ ಕಾರ್ಯನಿರ್ವಾಹಕ ಅಧಿಕಾರಿ ಎಂ.ಎಚ್.ಪ್ರಕಾಶ್ ರಾವ್, ಹಂಪಿ ಠಾಣೆಯ ಸಿಪಿಐ ರವಿಕುಮಾರ ಸೇರಿ ಇತರರು ಇದ್ದರು.
ಹಂಪಿಯಲ್ಲಿ ಹರಾಜು ಪ್ರಕ್ರಿಯೆ
ತಾಲೂಕಿನ ಹಂಪಿ ವಿರೂಪಾಕ್ಷೇಶ್ವರ ದೇವಸ್ಥಾನದಲ್ಲಿ ಸೋಮವಾರ ಉಪವಿಭಾಗಾಧಿಕಾರಿ ಗಾರ್ಗಿ ಜೈನ್ ಅವರ ನೇತೃತ್ವದಲ್ಲಿ ಕಲ್ಲು ಸಕ್ಕರೆ ಪ್ರಸಾದ ಪ್ಯಾಕೇಟ್ ವಿತರಣೆ, ಬುಕ್ ಸ್ಟಾಲ್ ಮಳಿಗೆ ಹಾಗೂ ಪಾದರಕ್ಷೆಯ ನೋಡಿಕೊಳ್ಳುವ ಗುತ್ತಿಗೆಯ ವರ್ಷದ ಹರಾಜು ಪ್ರಕ್ರಿಯೆ ನಡೆಯಿತು.
Vijaya Karnataka 11 Jul 2018, 5:00 am