ಆ್ಯಪ್ನಗರ

15 ತಿಂಗಳಿನಿಂದ ನೌಕರನಿಗೆ ವೇತನವೇ ನೀಡಿಲ್ಲ !

ತಾಲೂಕು ಕ್ರೀಡಾಂಗಣದ ಗ್ರೂಪ್‌-ಡಿ ನೌಕರರೊಬ್ಬರಿಗೆ ಕಳೆದ 15 ತಿಂಗಳಿಂದ ವೇತನ ನೀಡದಿರುವುದು ಬೆಳಕಿಗೆ ಬಂದಿದೆ.

Vijaya Karnataka 30 Sep 2018, 5:00 am
ಹೊಸಪೇಟೆ : ತಾಲೂಕು ಕ್ರೀಡಾಂಗಣದ ಗ್ರೂಪ್‌-ಡಿ ನೌಕರರೊಬ್ಬರಿಗೆ ಕಳೆದ 15 ತಿಂಗಳಿಂದ ವೇತನ ನೀಡದಿರುವುದು ಬೆಳಕಿಗೆ ಬಂದಿದೆ.
Vijaya Karnataka Web the employee has not paid the salary since 15 months
15 ತಿಂಗಳಿನಿಂದ ನೌಕರನಿಗೆ ವೇತನವೇ ನೀಡಿಲ್ಲ !


ಕಳೆದ ನಾಲ್ಕು ವರ್ಷಗಳಿಂದ ಗುತ್ತಿಗೆ ಆಧಾರದ ಮೇಲೆ ಕೆಲಸ ನಿರ್ವಹಿಸುತ್ತಿರುವ ನೌಕರ ಸೂರಿ ಸಕಾಲಕ್ಕೆ ವೇತನ ದೊರೆಯದೇ ಜೀವನ ನಿರ್ವಹಣೆಗೆ ಸಂಕಷ್ಟ ಎದುರಿಸುತ್ತಿದ್ದಾರೆ.''ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಗೆ ಒಂದು ತಿಂಗಳಿನಿಂದ ತಾಲೂಕು ಕ್ರೀಡಾಂಗಣವನ್ನು ಹಸ್ತಾಂತರಿಸಲಾಗಿದೆ. ಹೀಗಾಗಿ ಯಾವುದೇ ಮಾಹಿತಿ ಇಲ್ಲ'' ಎಂದು ಉಪವಿಭಾಗಾಧಿಕಾರಿ ಲೋಕೇಶ ತಿಳಿಸಿದರು.

''ನೌಕರ ಸೂರಿ ಅವರು ಕಚೇರಿಗೆ ಬಂದು ವೇತನ ಬಂದಿಲ್ಲ ಎಂಬ ಮಾಹಿತಿ ನೀಡಿದ್ದರು. ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕ ರಹೆಮತ್ತವುಲ್ಲಾ ಅವರಿಗೆ ಕೂಡಲೇ ವೇತನ ಬಿಡುಗಡೆ ಮಾಡುವಂತೆ ಸೂಚಿಸಲಾಗಿತ್ತು. ಮತ್ತೊಮ್ಮೆ ಅವರ ಗಮನಕ್ಕೆ ತರಲಾಗುವುದು'' ಎಂದು ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ.ಕೆ.ವಿ.ರಾಜೇಂದ್ರ ಪ್ರತಿಕ್ರಿಯಿಸಿದ್ದಾರೆ.

''ವಿಕಾಸ ಬ್ಯಾಂಕ್‌ನಲ್ಲಿ ಉಪವಿಭಾಗಾಧಿಕಾರಿಯವರ ಹೆಸರಿನಲ್ಲಿ ವೇತನ ಜಮೆ ಮಾಡುವುದಕ್ಕೆ ಖಾತೆ ಇತ್ತು. ಅದನ್ನು ಈಗ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕರ ಖಾತೆಗೆ ಬದಲಾಯಿಸಿಕೊಳ್ಳಬೇಕಾಗಿದೆ. ಹಾಗಾಗಿ ವಿಳಂಬವಾಗಿದೆ. ಕೂಡಲೇ ಕ್ರಮ ಕೈಗೊಳ್ಳಲಾಗುವುದು'' ಎಂದು ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕ ರೆಹಮತ್ತವುಲ್ಲಾ 'ವಿಕ' ತಿಳಿಸಿದರು.


ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ