ಆ್ಯಪ್ನಗರ

ಜಿಂದಾಲ್ ಕಾರ್ಖಾನೆಯಲ್ಲಿ ಚಿರತೆ ಪ್ರತ್ಯಕ್ಷ

ತಾಲೂಕಿನ ತೋರಣಗಲ್ಲುನ ಜಿಂದಾಲ್ ಕಾರ್ಖಾನೆ ಆವರಣದ ಎಸ್‌ಎಸ್‌ಎಂ-2 ಘಟಕದಲ್ಲಿ ಶುಕ್ರವಾರ ಸಂಜೆ ಚಿರತೆಯೊಂದು ಕಾಣಿಸಿಕೊಂಡು ಕಾರ್ಮಿಕರಲ್ಲಿ ಭಯದ ವಾತಾವರಣ ನಿರ್ಮಾಣ ಮಾಡಿತ್ತು.

Vijaya Karnataka 2 Mar 2019, 12:00 am
ಸಂಡೂರು: ತಾಲೂಕಿನ ತೋರಣಗಲ್ಲುನ ಜಿಂದಾಲ್ ಕಾರ್ಖಾನೆ ಆವರಣದ ಎಸ್‌ಎಸ್‌ಎಂ-2 ಘಟಕದಲ್ಲಿ ಶುಕ್ರವಾರ ಸಂಜೆ ಚಿರತೆಯೊಂದು ಕಾಣಿಸಿಕೊಂಡು ಕಾರ್ಮಿಕರಲ್ಲಿ ಭಯದ ವಾತಾವರಣ ನಿರ್ಮಾಣ ಮಾಡಿತ್ತು.
Vijaya Karnataka Web BLR-BLY 1 SDR 2


ಘಟಕದಲ್ಲಿ ಚಿರತೆಯೊಂದು ಓಡಾಡುತ್ತಿರುವುದನ್ನು ಕಂಡ ಕಾರ್ಮಿಕರು ಕಾರ್ಖಾನೆ ಆಡಳಿತ ಮಂಡಳಿಗೆ ತಿಳಿಸಿದ್ದಾರೆ. ಆಡಳಿತ ಮಂಡಳಿಯವರು ಪಟ್ಟಣದ ದಕ್ಷಿಣ ಅರಣ್ಯ ವಲಯಕ್ಕೆ ಮಾಹಿತಿ ನೀಡಿದ್ದಾರೆ. ಅಷ್ಟರಲ್ಲಿ ಪ್ಲಾಂಟ್‌ನ ಕೊಠಡಿಯೊಳಕ್ಕೆ ಚಿರತೆ ಹೋಗಿದ್ದನ್ನು ಕಂಡ ಕಾರ್ಮಿಕರು ಕೊಠಡಿಯ ಬಾಗಿಲು ಹಾಕಿದ್ದಾರೆ. ಸ್ಥಳಕ್ಕೆ ಆಗಮಿಸಿದ ದಕ್ಷಿಣ ವಲಯ ಆರ್‌ಎಫ್‌ಒ ಶಶಿಧರ್, ಚಿರತೆ ಅಡಗಿ ಕುಳಿತಿರುವ ಕೋಣೆ ವೀಕ್ಷಿಸಿದ್ದಾರೆ. ಪಟ್ಟಣದಿಂದ ಬೋನು ತರಿಸಿ ಚಿರತೆಯನ್ನು ಸೆರೆ ಹಿಡಿದು ಅರಣ್ಯಕ್ಕೆ ಬಿಡುವುದಾಗಿ ತಿಳಿಸಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ