ಆ್ಯಪ್ನಗರ

ಪರ್ಯಾಯದತ್ತ ಆಕಾಂಕ್ಷಿಗಳ ಚಿತ್ತ

ಟಿಕೆಟ್‌ ಹಂಚಿಕೆ ಬೆನ್ನಲ್ಲೆ ಕಾಂಗ್ರೆಸ್‌ಗೆ ಬಂಡಾಯದ ಬಿಸಿ ಆರಂಭವಾಗಿದ್ದರೆ, ಮತ್ತೊಂದೆಡೆ ಬಿಜೆಪಿಯಲ್ಲಿ ಪ್ರಬಲ ಆಕಾಂಕ್ಷಿಗಳು ಪರ್ಯಾಯದ ಚಿಂತನೆಯಲ್ಲಿದ್ದಾರೆ.

Vijaya Karnataka Web 18 Apr 2018, 5:00 am
ಬಸವರಾಜ ಅಯ್ಯನಗೌಡರ, ಹಗರಿಬೊಮ್ಮನಹಳ್ಳಿ
Vijaya Karnataka Web the mindset of alternatives
ಪರ್ಯಾಯದತ್ತ ಆಕಾಂಕ್ಷಿಗಳ ಚಿತ್ತ


ಟಿಕೆಟ್‌ ಹಂಚಿಕೆ ಬೆನ್ನಲ್ಲೆ ಕಾಂಗ್ರೆಸ್‌ಗೆ ಬಂಡಾಯದ ಬಿಸಿ ಆರಂಭವಾಗಿದ್ದರೆ, ಮತ್ತೊಂದೆಡೆ ಬಿಜೆಪಿಯಲ್ಲಿ ಪ್ರಬಲ ಆಕಾಂಕ್ಷಿಗಳು ಪರ್ಯಾಯದ ಚಿಂತನೆಯಲ್ಲಿದ್ದಾರೆ.

ಟಿಕೆಟ್‌ ಪಕ್ಕಾ ಆಗುತ್ತಿದ್ದಂತೆ ಕ್ಷೇತ್ರದಲ್ಲಿ ಇದೀಗ ಚುನಾವಣೆ ಕಾವು ಕ್ರಮೇಣ ಏರಿಕೆಯಾಗಿದೆ. ರಾಷ್ಟ್ರೀಯ ಪಕ್ಷ ಗಳ ಅಭ್ಯರ್ಥಿಗಳು ಎ ಮತ್ತು ಬಿ ಪಾರ್ಮ್‌ಪಡೆದು ನಾಮಪತ್ರ ಸಲ್ಲಿಕೆಗೆ ತಯಾರಿ ನಡೆಸುತ್ತಿದ್ದಾರೆ. ಈಗಾಗಲೆ ಕಾಂಗ್ರೆಸ್‌ನಿಂದ ಮಾಜಿ ಶಾಸಕ ಎಸ್‌.ಭೀಮನಾಯ್ಕ, ಬಿಜೆಪಿಯಿಂದ ಮಾಜಿ ಶಾಸಕ ನೇಮರಾಜ ನಾಯ್ಕಗೆ ಈಗಾಗಲೇ ಪಕ್ಷ ದ ರಾಜ್ಯಾಧ್ಯಕ್ಷ ರು ಎ ಮತ್ತು ಬಿ.ಪಾರ್ಮ್‌ ನೀಡಿದ್ದಾರೆ. ಎಂಇಪಿಯ ಅಜ್ಜಯ್ಯ ಹೊಟ್ಟೇರ್‌ ಕೈಗೆ ಈವರೆಗೂ ಪಕ್ಷ ದ ಬಿ.ಪಾರ್ಮ್‌ ಒದಗದೇ ಬೆಂಗಳೂರಿನಲ್ಲಿ ಬೀಡುಬಿಟ್ಟಿದ್ದಾರೆ. ಸಿಪಿಎಂನಿಂದ ದೇವದಾಸಿ ವಿಮೋಚನೆ ಸಂಘದ ರಾಜ್ಯಾಧ್ಯಕ್ಷೆ ಬಿ.ಮಾಳಮ್ಮ ನಾಮಪತ್ರ ಸಲ್ಲಿಸಿದ್ದಾರೆ. ಬಿಜೆಪಿ ಮತ್ತು ಎಂಇಪಿಯಿಂದ ಏ.21ರಂದು, ಕಾಂಗ್ರೆಸ್‌ ಏ.23ರಂದು ನಾಮಪತ್ರ ಸಲ್ಲಿಸಲು ನಿರ್ಧರಿಸಿವೆ. ಜೆಡಿಎಸ್‌ನಿಂದ ಈ ವರೆಗೂ ಅಭ್ಯರ್ಥಿ ಆಯ್ಕೆ ಪೂರ್ಣಗೊಳ್ಳದೆ, ಪಕ್ಷ ದ ಕಾರ್ಯಕರ್ತರಲ್ಲಿ ಗೊಂದಲ ಆವರಿಸಿದೆ.

ಬಂಡಾಯದ ಬಿಸಿ: ಕಾಂಗ್ರೆಸ್‌ನಲ್ಲಿ ಮಾಜಿ ಶಾಸಕ ಭೀಮಾನಾಯ್ಕರಿಗೆ ಟಿಕೆಟ್‌ ನೀಡಿರುವ ಬೆನ್ನಲ್ಲೆ ದಲಿತ ಅಸ್ಪೃಶ್ಯ ಸಮಾಜ ಬಂಡಾಯದ ಬಾವುಟ ಹಾರಿಸಲು ಮುಂದಾಗಿದೆ. ಟಿಕೆಟ್‌ ವಂಚಿತರಾದವರು ಪ್ರತ್ಯೇಕ ಸಭೆ ನಡೆಸಿದ್ದಾರೆ. ಎಡಗೈ ಮತ್ತು ಬಲಗೈ ಸಮುದಾಯಗಳು ಒಂದಾಗಿ ನಿವೃತ್ತ ಆರ್‌ಟಿಒ ಪರಮೇಶ್ವರಪ್ಪರನ್ನು ಕಣಕ್ಕಿಸುವ ನಿರ್ಧಾರ ಕೈಗೊಂಡಿವೆ. ಮೂಲತಃ ಕಾಂಗ್ರೆಸ್‌ನ ವೋಟ್‌ಬ್ಯಾಂಕ್‌ ಎಂದೆ ಪರಿಗಣಿಸಲಾಗಿದ್ದ ಅಸ್ಪೃಶ್ಯ ಸಮಾಜದ ಮತಗಳನ್ನು ಸೆಳೆಯುವ ಜತೆಗೆ ಇತರೆ ಸಮುದಾಯಗಳ ಮತಗಳತ್ತಲೂ ಪಕ್ಷೇತರರ ದೃಷ್ಟಿ ಹರಿದಿದೆ. ಕ್ಷೇತ್ರದಲ್ಲಿ ಒಟ್ಟು 35ಸಾವಿರಕ್ಕೂ ಹೆಚ್ಚು ಎಡಗೈ ಮತ್ತು 4ಸಾವಿರಕ್ಕೂ ಹೆಚ್ಚು ಮತದಾರರನ್ನು ಹೊಂದಿರುವ ಬಲಗೈ ಸಮುದಾಯ ಇದೀಗ ಒಗ್ಗಟ್ಟಿನ ಪ್ರದರ್ಶನಕ್ಕೆ ಮುಂದಾಗಿವೆ. ಕಳೆದ 2ವಿಧಾನ ಸಭೆ ಚುನಾವಣೆಗಳಲ್ಲಿ ಕಾಂಗ್ರೆಸ್‌ನಿಂದ ಸ್ಪರ್ಧಿಸಿ ಸೋಲುಂಡ ಎಡಗೈ ಸಮುದಾಯ ಈ ಬಾರಿ ಪ್ರಬಲ ಪೈಪೋಟಿ ನೀಡಲು ರಣತಂತ್ರ ರೂಪಿಸುತ್ತಿವೆ. ಮತ್ತೊಂದೆಡೆ ಸಿಪಿಎಂ ಅಭ್ಯರ್ಥಿ ಬಿ.ಮಾಳಮ್ಮ ಸಹಿತ ಎಡಗೈ ಸಮುದಾಯಕ್ಕೆ ಸೇರಿದವರಾಗಿದ್ದಾರೆ.

ಪರ್ಯಾಯದ ಚಿತ್ತ: ಬಿಜೆಪಿಯಿಂದ ತೀವ್ರ ಆಕಾಂಕ್ಷಿಗಳಾಗಿದ್ದವರು ಬಹಿರಂಗವಾಗಿ ಪಕ್ಷ ದಲ್ಲೆ ಉಳಿಯುವ, ಅಭ್ಯರ್ಥಿಗೆ ದುಡಿವ ಹೇಳಿಕೆ ನೀಡಿದ್ದರೂ ಒಳಗೊಳಗೆ ಪರ್ಯಾಯದತ್ತ ಚಿತ್ತ ಹರಿಸುತ್ತಿದ್ದಾರೆ. ಜೆಡಿಎಸ್‌ನಿಂದ ಈವರೆಗೂ ಟಿಕೆಟ್‌ ಅಂತಿಮವಾಗದೆ, ಪ್ರಬಲ ಆಕಾಂಕ್ಷಿಗಳು ತೀವ್ರ ಕಸರತ್ತು ಮುಂದುವರಿಸಿದ್ದಾರೆ. ಮತ್ತೊಂದೆಡೆ ನಾನಾ ಪಕ್ಷ ಗಳಿಂದ ಟಿಕೆಟ್‌ ವಂಚಿತರಾದವರೂ ಜೆಡಿಎಸ್‌ ವರಿಷ್ಠ ದೇವೆಗೌಡರ ಬಳಿ ಕಸರತ್ತು ಮುಂದುವರಿಸಿದ್ದಾರೆ. ಸದ್ಯದಲ್ಲಿ ಜೆಡಿಎಸ್‌ ಅಭ್ಯರ್ಥಿ ಆಯ್ಕೆ ಸ್ಥಿತಿ, ಅವರನ್ನು ಬಿಟ್ಟು, ಇವರನ್ನು ಬಿಟ್ಟು .. ಎಂಬಂತಾಗಿದೆ. ನಾಮಪತ್ರ ಸಲ್ಲಿಕೆಯ ಕೊನೆಯ ದಿನದವರೆಗೂ ಅಳೆದು ತೂಗುವ ಕಾರ್ಯ ಮುಂದುವರಿಯುವ ಸಾಧ್ಯತೆ ದಟ್ಟವಾಗಿದೆ.

....

ನನ್ನ ಮತ್ತು ನೇಮರಾಜ ನಾಯ್ಕರ ನಡುವೆ ನಡೆದ ಜಗಳ ಅಣ್ಣತಮ್ಮಂದಿರ ನಡುವೆ ಜಗಳವಿದ್ದಂತೆ. ಬಿಜೆಪಿಯಿಂದ ಆಯ್ಕೆಯಾಗಿ ತಾ.ಪಂ.ಯ ಅಧ್ಯಕ್ಷ ನಾಗಿದ್ದೇನೆ. ಕೂಡ್ಲಿಗಿಯಲ್ಲಿ ಬಿಜೆಪಿ ಅಭ್ಯರ್ಥಿಪರ ಪ್ರಚಾರ ನಡೆಸುವೆ. ಕೊಟ್ಟೂರಿನಲ್ಲೂ ಅಭ್ಯರ್ಥಿ ಕರೆದರೆ ತೊಡಗಿಸಿಕೊಳ್ಳುವೆ.

-ವೆಂಕಟೇಶ ನಾಯ್ಕ, ಕೂಡ್ಲಿಗಿ ತಾ.ಪಂ.ಅಧ್ಯಕ್ಷ , ಬಿಜೆಪಿ ಆಕಾಂಕ್ಷಿ

ಇನ್ನೂ ಜೆಡಿಎಸ್‌ ಪಟ್ಟಿ ಅಂತಿಮವಾಗಿಲ್ಲ. ಸಾಕಷ್ಟು ಜನರು ಪಕ್ಷ ದ ವರಿಷ್ಠರ ಸಂಪರ್ಕದಲ್ಲಿದ್ದಾರೆ. ಬಹುತೇಕ ಇನ್ನೆರೆಡು ದಿನಗಳಲ್ಲಿ ಆಯ್ಕೆ ಪಟ್ಟಿ ಪ್ರಕಟವಾಗಲಿದೆ.

-ಬನ್ನಿಗೋಳ ವೆಂಕಣ್ಣ, ಜೆಡಿಎಸ್‌ ಕ್ಷೇತ್ರಾಧ್ಯಕ್ಷ

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ