ಮಲ್ಲಿಕಾರ್ಜುನ ಚಿಲ್ಕರಾಗಿ, ಬಳ್ಳಾರಿ
ಪರಸ್ಪರ ಏಟು ಎದುರೇಟು, ಅಸ್ತ್ರಕ್ಕೆ ಪ್ರತ್ಯಾಸ್ತ್ರ, ಘಟಾನುಘಟಿಗಳ ಅಬ್ಬರದ ಪ್ರಚಾರಕ್ಕೆ ಸಾಕ್ಷಿಯಾದ ಗಣಿ ಜಿಲ್ಲೆ ಬಳ್ಳಾರಿಯಲ್ಲೀಗ ಮಳೆ ಬಂದು ನಿಂತಂತಾಗಿದೆ.
ಲೋಕಸಭೆ ಮರುಚುನಾವಣೆ ಹಿನ್ನೆಲೆಯಲ್ಲಿ ಪ್ರಚಾರದ ಉಸ್ತುವಾರಿ ಸೇರಿ ನಾನಾ ಕಾರಣಕ್ಕೆ ರಾಜ್ಯದ ಹಲವು ಮೂಲೆಯಿಂದ ಆಗಮಿಸಿದ್ದ ಕಾಂಗ್ರೆಸ್-ಜೆಡಿಎಸ್ ಹಾಗೂ ಬಿಜೆಪಿ ಮುಖಂಡರು ಊರು ತೊರೆದ ಹಿನ್ನೆಲೆಯಲ್ಲಿ ಇಂತಹ ವಾತಾವರಣ ತಲೆದೋರಿದೆ. ನಾಮಪತ್ರ ಸಲ್ಲಿಸಿದ ಮರು ದಿನದಿಂದಲೇ ಕಾಲಿಗೆ ಚಕ್ರಕಟ್ಟಿಕೊಂಡಂತೆ ಸಂಚರಿಸಿದ ಎರಡು ಪಕ್ಷದ ಮುಖಂಡರು ಗಣಿ ಜಿಲ್ಲೆಯ ಉಪಸಮರಕ್ಕೆ ವಿಶೇಷ ರಂಗು ಕಲ್ಪಿಸಿದ್ದರು. ಹದಿನೆಂಟು ದಿನಗಳಿಂದ ಪ್ರತಿ ಹೋಬಳಿ, ತಾಲೂಕು ಹಾಗೂ ಜಿಲ್ಲಾ ಕೇಂದ್ರದಲ್ಲಿ ಶಕ್ತಿ ಪ್ರದರ್ಶನ ನಡೆಸಿ ಅಬ್ಬರಿಸಿದ್ದರು. ಆದರೆ, ಈಗ ಎಲ್ಲದಕ್ಕೂ ತೆರೆಬಿದ್ದಿದೆ. ಮನೆ-ಮನೆ ಪ್ರಚಾರ ಮಾತ್ರ ಸಾಗಿದೆ. ಹಾರ-ತುರಾಯಿ, ಬಾಣ-ಬಿರುಸುಗಳಿಲ್ಲದೇ ಮತಯಾಚನೆ ನಡೆದಿದೆ.
ಖಾಲಿಯಾದ ಹೋಟೆಲ್ಗಳು: ಚುನಾವಣೆ ಪ್ರಚಾರಕ್ಕಾಗಿ ಜಿಲ್ಲೆಯ 8 ವಿಧಾನಸಭೆ ಕ್ಷೇತ್ರಗಳಲ್ಲೂ ಕಾಂಗ್ರೆಸ್-ಜೆಡಿಎಸ್ ಹಾಗೂ ಬಿಜೆಪಿಯ ನೂರಾರು ಮುಖಂಡರು ಠಿಕಾಣಿ ಹೂಡಿದ್ದರು. ಕಾಂಗ್ರೆಸ್ನಿಂದ 10 ಸಚಿವರು, 50 ಕ್ಕೂ ಹೆಚ್ಚು ಶಾಸಕರು, ಎಂಪಿ, ಎಂಎಲ್ಸಿಗಳು ಚುನಾವಣೆ ಪ್ರಚಾರಕ್ಕಾಗಿಯೇ ಆಗಮಿಸಿದ್ದರು. ಬಿಜೆಪಿ ಕೂಡ 25 ಜನ ಶಾಸಕರನ್ನು ಪ್ರಚಾರಕ್ಕಾಗಿ ಆಮದು ಮಾಡಿಕೊಂಡಿತ್ತು. ಬೆಂಗಳೂರು, ಮೈಸೂರು, ಬೆಳಗಾವಿ, ನೆರೆಯ ಕೊಪ್ಪಳ, ರಾಯಚೂರು ಹಾಗೂ ಆಂಧ್ರದಿಂದಲೂ ಜನ ಆಗಮಿಸಿ ಇಲ್ಲಿಯೇ ವಾಸ್ತವ್ಯ ಹೂಡಿದ್ದರು. ಎರಡು ಪಾರ್ಟಿಯ ಘಟಾನುಘಟಿ ನಾಯಕರೇ ಆಗಮಿಸಿ ಚುನಾವಣೆಯನ್ನು ಬಿರುಸುಗೊಳಿಸಿದ್ದರು. ಈಗ ಅವರೆಲ್ಲರೂ ಕ್ಷೇತ್ರ ತೊರೆದಿದ್ದಾರೆ. ತಾವು ವಾಸ್ತವ್ಯ ಹೂಡಿದ್ದ ನೆಲದಿಂದಲೇ ಕಾಲ್ಕಿತ್ತಿದ್ದಾರೆ. ಹೀಗಾಗಿ, ಕಳೆದ ಹದಿನೈದು ದಿನಗಳಿಂದ ತುಂಬಿ ತುಳುಕುತ್ತಿದ್ದ ಹೋಟೆಲ್, ಲಾಡ್ಜ್ಗಳು ಖಾಲಿಯಾಗಿವೆ. ಹಗಲು-ರಾತ್ರಿಯಿಂದಲೂ ಇದ್ದ ಗಡಿಬಿಡಿ ಈಗ ಮರೆಯಾಗಿದೆ.
ಬಿಗಿಯಾದ ಪಹರೆ: ಹೊರಗಿನ ಲೀಡರ್ಸ್, ಕಾರ್ಯಕರ್ತರು ಕಾಲ್ಕಿತ್ತಿರುವುದು ಒಂದು ಕಡೆಯಾದರೆ ಚುನಾವಣೆ ಕರ್ತವ್ಯಕ್ಕೆ ನೇಮಕವಾದ ಖಾಕಿ ಪಡೆ ಎಂಟು ಕ್ಷೇತ್ರಗಳಲ್ಲೂ ಪರೇಡ್ ನಡೆಸಿದೆ. ಚುನಾವಣೆ ಅಧಿಕಾರಿಗಳ ಜತೆಗೂಡಿ ಹೊರಗಿನವರನ್ನು ಊರು ಬಿಡಿಸುವುದಕ್ಕಾಗಿ ಹೋಟೆಲ್, ಲಾಡ್ಜ್ ಸಂಚರಿಸುತ್ತಿದ್ದಾರೆ. ಭದ್ರತೆಗಾಗಿ ಬಳ್ಳಾರಿ ಮತ್ತು ಕಲಬುರಗಿ ವಲಯದ ಆರು ಜಿಲ್ಲೆಗಳ ಪೊಲೀಸ್ ಸಿಬ್ಬಂದಿಗಳನ್ನು ನೇಮಕ ಮಾಡಿಕೊಳ್ಳಲಾಗಿದೆ. ನೆರೆಯ ಆಂಧ್ರದಿಂದಲೂ ಪೋರ್ಸ್ ಬಳಸಿಕೊಳ್ಳಲಾಗುತ್ತಿದೆ. 12 ಡಿವೈಎಸ್ಪಿ, 26 ಸಿಪಿಐ, 60 ಪಿಎಸ್ಐ, 200 ಎಎಸ್ಐ, 800 ಎಚ್ಸಿ, 1122 ಪೊಲೀಸ್ ಪೇದೆ ಹಾಗೂ 10 ಅರೆಸೇನಾ ಪಡೆಗಳನ್ನು ಚುನಾವಣೆಗೆ ಬಳಸಿಕೊಳ್ಳಲಾಗುತ್ತಿದೆ. ಖಾಕಿ ದಂಡಿಗೆ ಬೆಚ್ಚಿದ ಹೊರಗಿನವರು ಈಗಾಗಲೇ ಹೇಳುವ ಮುನ್ನವೇ ಊರು ತೊರೆದಿದ್ದಾರೆ.
ಬಿಗಿ ಕಾವಲು: ಜಿಲ್ಲೆ ಆಂಧ್ರ, ತೆಲಂಗಾಣ ರಾಜ್ಯಗಳ ಗಡಿಗೆ ಹೊಂದಿಕೊಂಡಿರುವ ಕಾರಣ ಗಡಿ ಪ್ರದೇಶದಲ್ಲಿ ವಿಶೇಷ ಭದ್ರತೆ ಕಲ್ಪಿಸಲಾಗಿದೆ. ಈಗಾಗಲೇ ಮದ್ಯ ಮಾರಾಟವನ್ನು ನಿಷೇಧ ಮಾಡಲಾಗಿದ್ದು, ಚೆಕ್ಪೋಸ್ಟ್ಗಳಲ್ಲಿ ಹೆಚ್ಚಿನ ಪೊಲೀಸ್ ಬಲ ನೀಡಲಾಗಿದೆ. ಅಕ್ರಮ ಚಟುವಟಿಕೆ ನಿಯಂತ್ರಿಸುವುದಕ್ಕಾಗಿಯೇ ಹೆಚ್ಚು ಗಮನ ಹರಿಸುತ್ತಿರುವ ಚುನಾವಣೆ ಅಧಿಕಾರಿಗಳು, ನೀತಿ ಸಂಹಿತೆ ಉಲ್ಲಂಘನೆಯ 3 ಕೇಸ್ ದಾಖಲಿಸಿದ್ದಾರೆ. ಅಭ್ಯರ್ಥಿಗಳ ಖರ್ಚಿನ ಮೇಲೆಯೂ ಗಮನ ವಹಿಸಲಾಗಿದೆ. ಈವರೆಗೆ ಕಾಂಗ್ರೆಸ್ ಅಭ್ಯರ್ಥಿ ಉಗ್ರಪ್ಪ 31.73 ಲಕ್ಷ ರೂ., ಬಿಜೆಪಿ ಅಭ್ಯರ್ಥಿ ಜೆ.ಶಾಂತಾ 30.53 ಲಕ್ಷ ರೂ.ಖರ್ಚು ಮಾಡಿದ ಮಾಹಿತಿ ಒದಗಿಸಿದ್ದಾರೆ. ಹದಿನೈದು ದಿನಗಳಲ್ಲಿ ಇದೆಲ್ಲವೂ ನಡೆದಿದ್ದರೆ, ಅ.2ರಂದು ಕೊನೆಯ ದಿನ ಕತಲ್ರಾತ್ರಿಯಲ್ಲಿ ಉಂಟಾಗುವ ಲಕ್ಷ್ಮಿನರ್ತನ ಚುನಾವಣೆಯ ದಿಕ್ಕನ್ನೇ ಬದಲಿಸಿದರೂ ಅಚ್ಚರಿ ಇಲ್ಲ.
ಪರಸ್ಪರ ಏಟು ಎದುರೇಟು, ಅಸ್ತ್ರಕ್ಕೆ ಪ್ರತ್ಯಾಸ್ತ್ರ, ಘಟಾನುಘಟಿಗಳ ಅಬ್ಬರದ ಪ್ರಚಾರಕ್ಕೆ ಸಾಕ್ಷಿಯಾದ ಗಣಿ ಜಿಲ್ಲೆ ಬಳ್ಳಾರಿಯಲ್ಲೀಗ ಮಳೆ ಬಂದು ನಿಂತಂತಾಗಿದೆ.
ಲೋಕಸಭೆ ಮರುಚುನಾವಣೆ ಹಿನ್ನೆಲೆಯಲ್ಲಿ ಪ್ರಚಾರದ ಉಸ್ತುವಾರಿ ಸೇರಿ ನಾನಾ ಕಾರಣಕ್ಕೆ ರಾಜ್ಯದ ಹಲವು ಮೂಲೆಯಿಂದ ಆಗಮಿಸಿದ್ದ ಕಾಂಗ್ರೆಸ್-ಜೆಡಿಎಸ್ ಹಾಗೂ ಬಿಜೆಪಿ ಮುಖಂಡರು ಊರು ತೊರೆದ ಹಿನ್ನೆಲೆಯಲ್ಲಿ ಇಂತಹ ವಾತಾವರಣ ತಲೆದೋರಿದೆ. ನಾಮಪತ್ರ ಸಲ್ಲಿಸಿದ ಮರು ದಿನದಿಂದಲೇ ಕಾಲಿಗೆ ಚಕ್ರಕಟ್ಟಿಕೊಂಡಂತೆ ಸಂಚರಿಸಿದ ಎರಡು ಪಕ್ಷದ ಮುಖಂಡರು ಗಣಿ ಜಿಲ್ಲೆಯ ಉಪಸಮರಕ್ಕೆ ವಿಶೇಷ ರಂಗು ಕಲ್ಪಿಸಿದ್ದರು. ಹದಿನೆಂಟು ದಿನಗಳಿಂದ ಪ್ರತಿ ಹೋಬಳಿ, ತಾಲೂಕು ಹಾಗೂ ಜಿಲ್ಲಾ ಕೇಂದ್ರದಲ್ಲಿ ಶಕ್ತಿ ಪ್ರದರ್ಶನ ನಡೆಸಿ ಅಬ್ಬರಿಸಿದ್ದರು. ಆದರೆ, ಈಗ ಎಲ್ಲದಕ್ಕೂ ತೆರೆಬಿದ್ದಿದೆ. ಮನೆ-ಮನೆ ಪ್ರಚಾರ ಮಾತ್ರ ಸಾಗಿದೆ. ಹಾರ-ತುರಾಯಿ, ಬಾಣ-ಬಿರುಸುಗಳಿಲ್ಲದೇ ಮತಯಾಚನೆ ನಡೆದಿದೆ.
ಖಾಲಿಯಾದ ಹೋಟೆಲ್ಗಳು: ಚುನಾವಣೆ ಪ್ರಚಾರಕ್ಕಾಗಿ ಜಿಲ್ಲೆಯ 8 ವಿಧಾನಸಭೆ ಕ್ಷೇತ್ರಗಳಲ್ಲೂ ಕಾಂಗ್ರೆಸ್-ಜೆಡಿಎಸ್ ಹಾಗೂ ಬಿಜೆಪಿಯ ನೂರಾರು ಮುಖಂಡರು ಠಿಕಾಣಿ ಹೂಡಿದ್ದರು. ಕಾಂಗ್ರೆಸ್ನಿಂದ 10 ಸಚಿವರು, 50 ಕ್ಕೂ ಹೆಚ್ಚು ಶಾಸಕರು, ಎಂಪಿ, ಎಂಎಲ್ಸಿಗಳು ಚುನಾವಣೆ ಪ್ರಚಾರಕ್ಕಾಗಿಯೇ ಆಗಮಿಸಿದ್ದರು. ಬಿಜೆಪಿ ಕೂಡ 25 ಜನ ಶಾಸಕರನ್ನು ಪ್ರಚಾರಕ್ಕಾಗಿ ಆಮದು ಮಾಡಿಕೊಂಡಿತ್ತು. ಬೆಂಗಳೂರು, ಮೈಸೂರು, ಬೆಳಗಾವಿ, ನೆರೆಯ ಕೊಪ್ಪಳ, ರಾಯಚೂರು ಹಾಗೂ ಆಂಧ್ರದಿಂದಲೂ ಜನ ಆಗಮಿಸಿ ಇಲ್ಲಿಯೇ ವಾಸ್ತವ್ಯ ಹೂಡಿದ್ದರು. ಎರಡು ಪಾರ್ಟಿಯ ಘಟಾನುಘಟಿ ನಾಯಕರೇ ಆಗಮಿಸಿ ಚುನಾವಣೆಯನ್ನು ಬಿರುಸುಗೊಳಿಸಿದ್ದರು. ಈಗ ಅವರೆಲ್ಲರೂ ಕ್ಷೇತ್ರ ತೊರೆದಿದ್ದಾರೆ. ತಾವು ವಾಸ್ತವ್ಯ ಹೂಡಿದ್ದ ನೆಲದಿಂದಲೇ ಕಾಲ್ಕಿತ್ತಿದ್ದಾರೆ. ಹೀಗಾಗಿ, ಕಳೆದ ಹದಿನೈದು ದಿನಗಳಿಂದ ತುಂಬಿ ತುಳುಕುತ್ತಿದ್ದ ಹೋಟೆಲ್, ಲಾಡ್ಜ್ಗಳು ಖಾಲಿಯಾಗಿವೆ. ಹಗಲು-ರಾತ್ರಿಯಿಂದಲೂ ಇದ್ದ ಗಡಿಬಿಡಿ ಈಗ ಮರೆಯಾಗಿದೆ.
ಬಿಗಿಯಾದ ಪಹರೆ: ಹೊರಗಿನ ಲೀಡರ್ಸ್, ಕಾರ್ಯಕರ್ತರು ಕಾಲ್ಕಿತ್ತಿರುವುದು ಒಂದು ಕಡೆಯಾದರೆ ಚುನಾವಣೆ ಕರ್ತವ್ಯಕ್ಕೆ ನೇಮಕವಾದ ಖಾಕಿ ಪಡೆ ಎಂಟು ಕ್ಷೇತ್ರಗಳಲ್ಲೂ ಪರೇಡ್ ನಡೆಸಿದೆ. ಚುನಾವಣೆ ಅಧಿಕಾರಿಗಳ ಜತೆಗೂಡಿ ಹೊರಗಿನವರನ್ನು ಊರು ಬಿಡಿಸುವುದಕ್ಕಾಗಿ ಹೋಟೆಲ್, ಲಾಡ್ಜ್ ಸಂಚರಿಸುತ್ತಿದ್ದಾರೆ. ಭದ್ರತೆಗಾಗಿ ಬಳ್ಳಾರಿ ಮತ್ತು ಕಲಬುರಗಿ ವಲಯದ ಆರು ಜಿಲ್ಲೆಗಳ ಪೊಲೀಸ್ ಸಿಬ್ಬಂದಿಗಳನ್ನು ನೇಮಕ ಮಾಡಿಕೊಳ್ಳಲಾಗಿದೆ. ನೆರೆಯ ಆಂಧ್ರದಿಂದಲೂ ಪೋರ್ಸ್ ಬಳಸಿಕೊಳ್ಳಲಾಗುತ್ತಿದೆ. 12 ಡಿವೈಎಸ್ಪಿ, 26 ಸಿಪಿಐ, 60 ಪಿಎಸ್ಐ, 200 ಎಎಸ್ಐ, 800 ಎಚ್ಸಿ, 1122 ಪೊಲೀಸ್ ಪೇದೆ ಹಾಗೂ 10 ಅರೆಸೇನಾ ಪಡೆಗಳನ್ನು ಚುನಾವಣೆಗೆ ಬಳಸಿಕೊಳ್ಳಲಾಗುತ್ತಿದೆ. ಖಾಕಿ ದಂಡಿಗೆ ಬೆಚ್ಚಿದ ಹೊರಗಿನವರು ಈಗಾಗಲೇ ಹೇಳುವ ಮುನ್ನವೇ ಊರು ತೊರೆದಿದ್ದಾರೆ.
ಬಿಗಿ ಕಾವಲು: ಜಿಲ್ಲೆ ಆಂಧ್ರ, ತೆಲಂಗಾಣ ರಾಜ್ಯಗಳ ಗಡಿಗೆ ಹೊಂದಿಕೊಂಡಿರುವ ಕಾರಣ ಗಡಿ ಪ್ರದೇಶದಲ್ಲಿ ವಿಶೇಷ ಭದ್ರತೆ ಕಲ್ಪಿಸಲಾಗಿದೆ. ಈಗಾಗಲೇ ಮದ್ಯ ಮಾರಾಟವನ್ನು ನಿಷೇಧ ಮಾಡಲಾಗಿದ್ದು, ಚೆಕ್ಪೋಸ್ಟ್ಗಳಲ್ಲಿ ಹೆಚ್ಚಿನ ಪೊಲೀಸ್ ಬಲ ನೀಡಲಾಗಿದೆ. ಅಕ್ರಮ ಚಟುವಟಿಕೆ ನಿಯಂತ್ರಿಸುವುದಕ್ಕಾಗಿಯೇ ಹೆಚ್ಚು ಗಮನ ಹರಿಸುತ್ತಿರುವ ಚುನಾವಣೆ ಅಧಿಕಾರಿಗಳು, ನೀತಿ ಸಂಹಿತೆ ಉಲ್ಲಂಘನೆಯ 3 ಕೇಸ್ ದಾಖಲಿಸಿದ್ದಾರೆ. ಅಭ್ಯರ್ಥಿಗಳ ಖರ್ಚಿನ ಮೇಲೆಯೂ ಗಮನ ವಹಿಸಲಾಗಿದೆ. ಈವರೆಗೆ ಕಾಂಗ್ರೆಸ್ ಅಭ್ಯರ್ಥಿ ಉಗ್ರಪ್ಪ 31.73 ಲಕ್ಷ ರೂ., ಬಿಜೆಪಿ ಅಭ್ಯರ್ಥಿ ಜೆ.ಶಾಂತಾ 30.53 ಲಕ್ಷ ರೂ.ಖರ್ಚು ಮಾಡಿದ ಮಾಹಿತಿ ಒದಗಿಸಿದ್ದಾರೆ. ಹದಿನೈದು ದಿನಗಳಲ್ಲಿ ಇದೆಲ್ಲವೂ ನಡೆದಿದ್ದರೆ, ಅ.2ರಂದು ಕೊನೆಯ ದಿನ ಕತಲ್ರಾತ್ರಿಯಲ್ಲಿ ಉಂಟಾಗುವ ಲಕ್ಷ್ಮಿನರ್ತನ ಚುನಾವಣೆಯ ದಿಕ್ಕನ್ನೇ ಬದಲಿಸಿದರೂ ಅಚ್ಚರಿ ಇಲ್ಲ.