ಆ್ಯಪ್ನಗರ

‘ಪ್ರಗತಿ ಸಾಧಿಸಲು ಸ್ವಾವಲಂಬನೆ ಅಗತ್ಯ’

ಪಟ್ಟಣದ ಸಮುದಾಯ ಭವನದಲ್ಲಿ ಕಾನೂನು ಸೇವೆಗಳ ಸಮಿತಿ ಮತ್ತು ವಕೀಲರ ಸಂಘದಿಂದ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ ನಿಮಿತ್ತ ಅಂಗನವಾಡಿ ಮತ್ತು ಸ್ತ್ರೀಶಕ್ತಿ ಸಂಘದ ಸದಸ್ಯರಿಗೆ ಕಾನೂನು ಅರಿವು ನೆರವು ಕಾರ್ಯಕ್ರಮ ಇತ್ತೀಚೆಗೆ ಹಮ್ಮಿಕೊಳ್ಳಲಾಗಿತ್ತು.

ವಿಕ ಸುದ್ದಿಲೋಕ 1 Apr 2016, 4:09 am
ಹಗರಿಬೊಮ್ಮನಹಳ್ಳಿ ;ಪಟ್ಟಣದ ಸಮುದಾಯ ಭವನದಲ್ಲಿ ಕಾನೂನು ಸೇವೆಗಳ ಸಮಿತಿ ಮತ್ತು ವಕೀಲರ ಸಂಘದಿಂದ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ ನಿಮಿತ್ತ ಅಂಗನವಾಡಿ ಮತ್ತು ಸ್ತ್ರೀಶಕ್ತಿ ಸಂಘದ ಸದಸ್ಯರಿಗೆ ಕಾನೂನು ಅರಿವು ನೆರವು ಕಾರ್ಯಕ್ರಮ ಇತ್ತೀಚೆಗೆ ಹಮ್ಮಿಕೊಳ್ಳಲಾಗಿತ್ತು.
Vijaya Karnataka Web the progress necessary to achieve self reliance
‘ಪ್ರಗತಿ ಸಾಧಿಸಲು ಸ್ವಾವಲಂಬನೆ ಅಗತ್ಯ’


ಸಿವಿಲ್ ನ್ಯಾಯಾಧೀಶ ನಿತಿನ್ ಯಶವಂತರಾವ್ ಉದ್ಘಾಟಿಸಿ ಮಾತನಾಡಿ, ಮಹಿಳೆಯರ ಶೈಕ್ಷಣಿಕ ಪ್ರಗತಿ ಮತ್ತು ಆರ್ಥಿಕ ಸ್ವಾವಲಂಬನೆ ಅಗತ್ಯ. ಹೆಣ್ಣು ಗಂಡು ನಡುವೆ ತಾರತಮ್ಯ ಬೇಡ, ಸಮಾನ ಅವಕಾಶಗಳನ್ನು ಪಡೆಯುವಲ್ಲಿ ಮಹಿಳೆಯರ ಜಾಗತಿ ಅಗತ್ಯ. ಈ ನಿಟ್ಟಿನಲ್ಲಿ ಕಾನೂನಿನ ನೆರವು ಪಡೆಯಬಹುದು. ಮಹಿಳೆಯರಿಗೆ ಸಂವಿಧಾನ ಬದ್ಧ ಹಕ್ಕು ಅನ್ವಯ ಗುಣಮಟ್ಟದ ಶಿಕ್ಷಣ ನೀಡಬೇಕಿದೆ. ಮಹಿಳೆಯರ ಮೇಲಿನ ದೌರ್ಜನ್ಯ ತಡೆಗೆ ರೂಪಿಸಲಾದ ಕಾನೂನು ಕಟ್ಟುನಿಟ್ಟಾಗಿ ಅನುಷ್ಠಾನಗೊಳಿಸಬೇಕಿದೆ. ಶೋಷಿತ ಮಹಿಳೆಗೆ ಕಾನೂನಿನ ಉಚಿತ ನೆರವು ನೀಡಲಾಗುವುದು ಎಂದರು. ಸರಕಾರಿ ಸಹಾಯಕ ಅಭಿಯೋಜಕ ಗಂಗಾಧರಗೌಡ ಪಿಡ್ಡನಗೌಡ್ರು ಮಾತನಾಡಿದರು. ಮಹಿಳೆಯರ ಮೇಲಿನ ದೌರ್ಜನ್ಯ ತಡೆ ಕುರಿತು ಬರಹಗಾರರಾದ ಸುಧಾ ಚಿದಾನಂದಗೌಡ, ಎಸ್.ವಾಸಂತಿ ಉಪನ್ಯಾಸ ನೀಡಿದರು. ತಾಲೂಕು ವಕೀಲರ ಸಂಘದ ಅಧ್ಯಕ್ಷೆ ವಿಶಾಲಾಕ್ಷಿ ಬಾಪೂಜಿ ಅಧ್ಯಕ್ಷತೆ ವಹಿಸಿದ್ದರು. ಸಂಘದ ಮಾಜಿ ಅಧ್ಯಕ್ಷ ಬಿ.ವಿ.ಶಿವಯೋಗಿ, ಸಂಘದ ಧರ್ಮನಗೌಡ,ಜಿ.ಗಂಗಾಧರ, ಲಿಂಗನಗೌಡ, ಸಿಡಿಪಿಒ ರಾಜಾನಾಯ್ಕ ಇದ್ದರು. ಸಂಘದ ಮಾಜಿ ಕಾರ್ಯದರ್ಶಿ ಕೊಟ್ರೇಶ್ ಶೆಟ್ಟರ್, ಕೆ.ಪ್ರಹ್ಲಾದ್, ಸುಭಾಷ್ ನಾಯ್ಕ ನಿರ್ವಹಿಸಿದರು. ತಾಲೂಕಿನ ಅಂಗನವಾಡಿ ಮತ್ರು ಸ್ತ್ರೀಶಕ್ತಿ ಸಂಘದ ನೂರಾರು ಮಹಿಳೆಯರು ಪಾಲ್ಗೊಂಡಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ