ಸುಧಾರಣೆಯ 'ಕಂಪು' ಬೀರಲೇ ಇಲ್ಲ
ಈ ಕ್ಷೇತ್ರ ಐತಿಹಾಸಿಕ ಮತ್ತು ಸಾಂಸ್ಕೃತಿಕವಾಗಿ ಶ್ರೀಮಂತವಾಗಿದೆ. ಪಟ್ಟಣ ನೊಳಂಬ ಪಲ್ಲವರ ರಾಜಧಾನಿಯಾಗಿತ್ತು ಎಂದು ಇತಿಹಾಸದಿಂದ ತಿಳಿದು ಬರುತ್ತದೆ
Vijaya Karnataka Web 5 Apr 2018, 5:00 am
ಕರಿ ವಿರೂಪಾಕ್ಷಿ, ಕಂಪ್ಲಿ
ಈ ಕ್ಷೇತ್ರ ಐತಿಹಾಸಿಕ ಮತ್ತು ಸಾಂಸ್ಕೃತಿಕವಾಗಿ ಶ್ರೀಮಂತವಾಗಿದೆ. ಪಟ್ಟಣ ನೊಳಂಬ ಪಲ್ಲವರ ರಾಜಧಾನಿಯಾಗಿತ್ತು ಎಂದು ಇತಿಹಾಸದಿಂದ ತಿಳಿದು ಬರುತ್ತದೆ. ಕಂಪಿಲರಾಯ ಮತ್ತು ಅವರ ಮಗ ಗಂಡುಗಲಿ ಕುಮಾರರಾಮನ ಕಲಿತನ, ಬಲಿದಾನದಿಂದ ಮಹಾನ್ ವಿಜಯನಗರ ಸಾಮ್ರಾಜ್ಯ ಉದಯವಾಗಲು ಕಾರಣವಾಯಿತು ಎನ್ನಲಾಗುತ್ತದೆ. ನೊಳಂಬರ ಕಾಲದ್ದೆಂದು ಹೇಳುವ ಸೋಮೇಶ್ವರ(ಸೋಮಪ್ಪ) ದೇಗುಲವಿದೆ. ಇಲ್ಲಿನ ಕೋಟೆ ಪ್ರದೇಶದಲ್ಲಿ ವಿಜಯನಗರ ಅರಸರ ಕಾಲಕ್ಕೆ ಸೇರಿದ್ದು ಎನ್ನಲಾದ ಮಹಾದ್ವಾರವಿದೆ. ಇನ್ನೂ ಹಲವಾರು ಪ್ರಾಚೀನ ಸ್ಮಾರಕಗಳು ಇಲ್ಲಿವೆ. ಇದೀಗ ಕಂಪ್ಲಿ ಮತ್ತು ಕುರುಗೋಡು ಹೊಸ ತಾಲೂಕು ಕೇಂದ್ರಗಳಾಗಿವೆ.
ಇತಿಹಾಸ: ಮೊದಲಿಗೆ 'ಕಂಪ್ಲಿ' ಹೊಸಪೇಟೆ ವಿಧಾನಸಭೆ ಕ್ಷೇತ್ರದ ವ್ಯಾಪ್ತಿಯಲ್ಲಿತ್ತು. ಕ್ಷೇತ್ರ ವಿಂಗಡಣೆಗೆ ಬಳಿಕ ಹೊಸ ವಿಧಾನ ಸಭೆ ಕ್ಷೇತ್ರವಾಗಿ ಹೊರ ಹೊಮ್ಮಿತು.
ಈ ಕ್ಷೇತ್ರ ಎಸ್ಟಿ ಮೀಸಲು ಕ್ಷೇತ್ರವಾಗಿದೆ. ಮೊದಲು ನಡೆದ ವಿಧಾನ ಸಭೆ ಚುನಾವಣೆಯಲ್ಲಿ ಬಿಜೆಪಿಯಿಂದ ಟಿ.ಎಚ್.ಸುರೇಶಬಾಬು ಗೆಲುವು ಸಾಧಿಸಿದರು. 2013ರಲ್ಲಿ ನಡೆದ ವಿಧಾನ ಸಭೆ ಚುನಾವಣೆಯಲ್ಲಿ ಬಿಎಸ್ಆರ್ ಕಾಂಗ್ರೆಸ್ನಿಂದ ಸ್ಪರ್ಧಿಸಿ ಪುನರಾಯ್ಕೆಯಾದರು. ನಂತರ ಬಿಜೆಪಿಗೆ ಸೇರಿದರು. ಈ ಕ್ಷೇತ್ರ ಕಂಪ್ಲಿ, ಕುರುಗೋಡು, ಕೋಳೂರು ಫಿರ್ಕಾವನ್ನು ಹೊಂದಿದೆ.
ಅಭಿವೃದ್ಧಿ ಕಾಮಗಾರಿ; ಕಂಪ್ಲಿಯ ಪ್ರಾಥಮಿಕ ಆರೋಗ್ಯ ಕೇಂದ್ರವನ್ನು 30 ಹಾಸಿಗೆಗಳ ಸಮುದಾಯ ಆರೋಗ್ಯ ಕೇಂದ್ರವನ್ನಾಗಿ ಮೇಲ್ದರ್ಜೇಗೇರಿಸಿದ್ದು, ಕಂಪ್ಲಿಯಲ್ಲಿ ಸರಕಾರಿ ಪಾಲಿಟೆಕ್ನಿಕ್ ಆರಂಭಿಸಿದ್ದು, ಕಾಲೇಜ್ ಕಟ್ಟಡ ನಿರ್ಮಾಣ ಬಹುತೇಕ ಪೂರ್ಣಗೊಳ್ಳುವ ಹಂತದಲ್ಲಿದೆ. ಎರ್ರಂಗಳಿ ಬಳಿ ಮೊರಾರ್ಜಿ ದೇಸಾಯಿ ವಸತಿ ಶಾಲೆ, ಕುರುಗೋಡಿನಲ್ಲಿ ಅಗ್ನಿ ಶಾಮಕ ಠಾಣೆ ನೂತನ ಕಟ್ಟಡ ನಿರ್ಮಿಸಲಾಗಿದೆ. ಯಾತ್ರಾರ್ಥಿಗಳ ಅನುಕೂಲಕ್ಕಾಗಿ ಯಾತ್ರಿ ನಿವಾಸ, ಮೊದಲ ದರ್ಜೆ ಕಾಲೇಜಿನ ನೂತನ ಕಟ್ಟಡ ನಿರ್ಮಿಸಲಾಗಿದೆ. ಮುಷ್ಟಗಟ್ಟೆ, ರಾಮಸಾಗರ, ಸಿದ್ದಮ್ಮನಹಳ್ಳಿ ಪ್ರಾಥಮಿಕ ಆರೋಗ್ಯ ಕೇಂದ್ರ ನಿರ್ಮಿಸಲಾಗಿದೆ. ಕಂಪ್ಲಿ, ಎಮ್ಮಿಗನೂರು, ದಮ್ಮೂರು, ಬೈಲೂರಿನಲ್ಲಿ ಕಲ್ಯಾಣ ಮಂಟಪ ನಿರ್ಮಿಸಲಾಗಿದೆ. ಮೆಟ್ರಿಯಲ್ಲಿ 110ಕೆವಿ ಸಬ್ ಸ್ಟೇಷನ್ ನಿರ್ಮಿಸಲಾಗಿದೆ. 20 ಗ್ರಾಮ ಸುವರ್ಣ ಗ್ರಾಮಗಳಾಗಿವೆ. ಕಂಪ್ಲಿಯಲ್ಲಿ ಕುಡಿವ ನೀರನ ಅನುಕೂಲಕ್ಕಾಗಿ 117ಲಕ್ಷ ರೂ ವೆಚ್ಚದಲ್ಲಿ ಓವರ್ ಹೆಡ್ ಟ್ಯಾಂಕ್ ನಿರ್ಮಾಣ, ಅಂಬೇಡ್ಕರ್ ವೃತ್ತದಿಂದ ವಾಲ್ಮೀಕಿ ವೃತ್ತದವರೆಗೆ 117ಲಕ್ಷ ರೂ. ವೆಚ್ಚದಲ್ಲಿ ರಸ್ತೆ ವಿಭಜಕ ನಿರ್ಮಿಸಿ, ಬೀದಿ ದೀಪ, ರಸ್ತೆ ಅಭಿವೃದ್ಧಿ ಪಡಿಸಲಾಗಿದೆ. 8 ಕೋಟಿ ರೂ. ವೆಚ್ಚದಲ್ಲಿ 72 ಶುದ್ಧ ಕುಡಿವ ನೀರಿನ ಘಟಕಗಳನ್ನು ಸ್ಥಾಪಿಸಿದೆ. ಗ್ರಾಮ ವಿಕಾಸ ಯೋಜನೆಯಡಿ 3 ಕೋಟಿ 75ಲಕ್ಷ ರೂ. ವೆಚ್ಚದಲ್ಲಿ ಕರ್ಚೇಡು, ಚಿಟಿಗಿನಹಾಳ್ ಲಕ್ಷ್ಮಿಪುರ, ಹಂದಿಹಾಳ್, ನಂ.2 ಮುದ್ದಾಪುರದಲ್ಲಿ ಅಭಿವೃದ್ಧಿಪಡಿಸಲಾಗಿದೆ. ಗಂಗಾಕಲ್ಯಾಣ, ಶಾಲೆ, ಕಾಲೇಜು ಸ್ಥಾಪನೆಯಂತಹ ಕೆಲಸಗಳಾಗಿವೆ. ಐತಿಹಾಸಿಕ ಸೋಮಪ್ಪ ಕೆರೆಯನ್ನು 8 ಕೋಟಿ 50 ಲಕ್ಷ ರೂ. ವೆಚ್ಚದಲ್ಲಿ ಅಭಿವೃದ್ಧಿ ಪಡಿಸಲು ಟೆಂಡರ್ ಪ್ರಕ್ರಿಯೆ ಪೂರ್ಣಗೊಂಡಿದೆ.
ಸಮಸ್ಯೆಗಳು ಹಲವು: ಪಟ್ಟಣ ಹೊಸ ತಾಲೂಕು ಕೇಂದ್ರವಾಗಿದೆ. ಇದುವರೆಗೂ ಸುಸಜ್ಜಿತವಾದ ಕ್ರೀಡಾಂಗಣವಿಲ್ಲದೇ ಕ್ರೀಡಾಪಟುಗಳಿಗೆ, ವಿದ್ಯಾರ್ಥಿಗಳಿಗೆ ಅಭ್ಯಾಸ ಮಾಡಲು ತೊಂದರೆಯಾಗಿದೆ.
ಇಲ್ಲಿನ ಖಾಸಗಿಯವರು ಸಕ್ಕರೆ ಕಾರ್ಖಾನೆ ಖರೀದಿ ವೇಳೆ ಮಾರಾಟದ ನಿರ್ಬಂಧನೆ ಉಲ್ಲಂಘಿಸಿದೆ ಎಂದು ಕಾರ್ಖಾನೆ ಪುನಶ್ಚೇತನ ಹೋರಾಟ ಸಮಿತಿಯವರು ಹೋರಾಟ ಮಾಡಿದ ಫಲವಾಗಿ, ಕಾರ್ಖಾನೆಗೆ ಸೇರಿದ ಅಂದಾಜು 176 ಎಕರೆ ಜಮೀನು ಸರಕಾರ ವಶಕ್ಕೆ ಪಡೆದಿದೆ. ಈ ಜಾಗದಲ್ಲಿ ಹೊಸ ಸಕ್ಕರೆ ಕಾರ್ಖಾನೆ ಸ್ಥಾಪನೆಯಾದರೆ. ಇಲ್ಲಿನ ವಿದ್ಯಾವಂತ ಯುವಕರಿಗೆ ಉದ್ಯೋಗ ದೊರೆಯಲಿದೆ ಎನ್ನುವುದು ಇಲ್ಲಿನ ಜನರ ಒತ್ತಾಯ.
ಪಟ್ಟಣದ ಹೃದಯ ಭಾಗದಲ್ಲಿನ ಸೋಮಪ್ಪ ಕೆರೆ ಅಭಿವೃದ್ಧಿ ಪಡಿಸಿದರೆ, ಸುಂದರ ವಿಹಾರಧಾಮವಾಗಲಿದೆ. ಆದರೆ ಬೇಗನೇ ಕಾಮಗಾರಿ ಆರಂಭಿಸಬೇಕು ಎಂದು ಸ್ಥಳೀಯರ ಆಗ್ರಹ. ಇಲ್ಲಿನ ಕೋಟೆ ಬಳಿ ತುಂಗಭದ್ರಾ ನದಿಗೆ ಅಡ್ಡಲಾಗಿ ಸೇತುವೆ ನಿರ್ಮಿಸಿದ್ದು, ಶಿಥಿಲವಾಗಿದೆ. ಅಲ್ಲದೇ ಎತ್ತರ ಕಡಿಮೆ ಇದೆ. ಮಳೆಗಾಲದಲ್ಲಿ ನದಿ ತುಂಬಿ ಹರಿದರೆ ಸೇತುವೆ ಮುಳುಗಡೆಯಾಗುತ್ತದೆ. ಸೇತುವೆ ಮೇಲಿಂದ ಕಂಪ್ಲಿ-ಗಂಗಾವತಿ ಸಂಚಾರ ಸ್ಥಗಿತವಾಗುತ್ತದೆ. ಹೊಸ ಸೇತುವೆ ನಿರ್ಮಿಸಬೇಕು ಎನ್ನುವುದು ಸ್ಥಳೀಯರ ಒತ್ತಾಯವಾಗಿದೆ. ಕ್ಷೇತ್ರದ ಶಾಸಕ ಟಿ.ಎಚ್.ಸುರೇಶಬಾಬು ಬೇಲ್ಡೀಲ್ನ ಆರೋಪಕ್ಕೆ ಗುರಿಯಾಗಿದ್ದು, ಕ್ಷೇತ್ರದ ಪಾಲಿಗೆ ಕಪ್ಪು ಚುಕ್ಕೆ. ವಿಧಾನಸಭೆಯಲ್ಲಿ ತೋಳೇರಿಸಿಯೂ ಸದ್ದು ಮಾಡಿದ್ದರು. ಅಂತಹ ಸದ್ದು, ಗದ್ದಲ ಅಭಿವೃದ್ಧಿಯಲ್ಲಿ ಕಾಣಲಿಲ್ಲ ಎನ್ನುವುದ ಕ್ಷೇತ್ರದ ಕೊರಗು.
....
ಶಾಸಕರ ಕಿರು ಸಂದರ್ಶನ
ಪ್ರಶ್ನೆ: ಕ್ಷೇತ್ರದಲ್ಲಿ ಅಷ್ಟಾಗಿ ಅಭಿವೃದ್ಧಿ ಕೆಲಸಗಳಾಗಿಲ್ಲ ಎನ್ನುವ ಆರೋಪವಿದೆಯಲ್ಲ?
ಶಾಸಕ ಟಿ.ಎಚ್.ಸುರೇಶಬಾಬು; ಸತ್ಯಕ್ಕೆ ದೂರವಾದ ಸಂಗತಿ, ಮೊದಲಿಗೆ ಕಂಪ್ಲಿ ಹೊಸಪೇಟೆ ವಿಧಾನಸಭೆ ಕ್ಷೇತ್ರದಲ್ಲಿತ್ತು. ಅಷ್ಟಾಗಿ ಅಭಿವೃದ್ಧಿ ಕೆಲಸಗಳಾಗಿರಲಿಲ್ಲ. ಕ್ಷೇತ್ರವಾಗಿ ಹೊರಹೊಮ್ಮಿದ ಬಳಿಕ ಪ್ರಾಥಮಿಕ ಆರೋಗ್ಯ ಕೇಂದ್ರವನ್ನು, ಸಮುದಾಯ ಆರೋಗ್ಯವಾಗಿ ಮೇಲ್ದರ್ಜೆಗೇರಿಸಲಾಗಿದೆ. ಸರಕಾರಿ ಪಾಲಿಟೆಕ್ನಿಕ್ ಕಾಲೇಜು ಸ್ಥಾಪಿಸಿದೆ. ಇಲ್ಲಿನ ಅಂಬೇಡ್ಕರ್ ವೃತ್ತದಿಂದ ವಾಲೀಕಿ ವೃತ್ತದವರೆಗೆ, ಸಮುದಾಯ ಆರೋಗ್ಯ ಕೇಂದ್ರದಿಂದ ಎಪಿಎಂಸಿವರೆಗೆ ರಸ್ತೆ ಅಭಿವೃದ್ಧಿಪಡಿಸಿದೆ. ರಾಜ್ಯ ಹೆದ್ದಾರಿ, ಜಿಲ್ಲಾ ಮುಖ್ಯ ರಸ್ತೆಗಳನ್ನು ನಿರ್ಮಿಸಿರುವುದು ಸೇರಿದಂತೆ ಕುಡಿವ ನೀರಿನ ಯೋಜನೆ ಒಳಗೊಂಡಂತೆ ಹಲವಾರು ಅಭಿವೃದ್ಧಿ ಕೆಲಸಗಳನ್ನು ಮಾಡಲಾಗಿದೆ. ಪ್ರಸ್ತುತ ಕಾಂಗ್ರೆಸ್ ಸರಕಾರ ಕ್ಷೇತ್ರಕ್ಕೆ ಯಾವುದೇ ವಿಶೇಷ ಅನುದಾನ ನೀಡಿಲ್ಲ. ಆದರೂ ಹಿಂದಿನ ಬಿಜೆಪಿ ಸರಕಾರದ ಕಲಬುರಗಿಯಲ್ಲಿ ನಡೆದ ಅಧಿವೇಶನದಲ್ಲಿ ಮಂಜೂರಾದ ಎಲ್ಲ ಕಾಮಗಾರಿಗಳನ್ನು ಕೈಗೊಳ್ಳಲಾಗಿದೆ. ಕ್ಷೇತ್ರದಲ್ಲಿ ಎರಡು ಪಟ್ಟಣಗಳನ್ನು ಹೊಸ ತಾಲೂಕು ಕೇಂದ್ರವನ್ನಾಗಿಸಲು ಹೋರಾಟ ಸಮಿತಿಯವರ ಜತೆ ಯತ್ನಿಸಿದ್ದೇನೆ.
ಪ್ರಶ್ನೆ: ಕ್ಷೇತ್ರದಲ್ಲಿ ಜನರ ಕೈಗೆ ಸಿಗುವುದಿಲ್ಲ ಎನ್ನುವ ಆರೋಪವಿದೆಯಲ್ಲ?
ಶಾಸಕ: ನಿರಂತರ ಜನರ ಮಧ್ಯೆ ಇದ್ದೇನೆ. ಜತೆಗೆ ಜನರ ಸಂಪರ್ಕದಲ್ಲಿದ್ದೇನೆ. ಜನರ ಸಮಸ್ಯೆ ಅರಿಯಲು ಶಾಸಕರ ಕಚೇರಿ ತೆರೆದಿದ್ದು, ಜನರ ಕಷ್ಟಗಳಿಗೆ ಸಕಾಲಕ್ಕೆ ಸ್ಪಂದಿಸುತ್ತಿದ್ದೇನೆ.
ಪ್ರಶ್ನೆ: ಸೋಮಪ್ಪ ಕೆರೆ ಅಭಿವೃದ್ಧಿ ಬಗ್ಗೆ, ಕ್ಷೇತ್ರದಲ್ಲಿ ಮಾಡಿರುವ ಕೆಲಸಗಳ ಬಗ್ಗೆ ನಿಮ್ಮ ಅಭಿಪ್ರಾಯ?
ಶಾಸಕ: 8 ಕೋಟಿ 10 ಲಕ್ಷ ರೂ. ವೆಚ್ಚದಲ್ಲಿ ಸೋಮಪ್ಪ ಕೆರೆ ಅಭಿವೃದ್ಧಿ ಪಡಿಸಲು ಡಿಪಿಆರ್ ಅನುಮೋದನೆಯಾಗಿದ್ದು, ಟೆಂಡರ್ ಪ್ರಕ್ರಿಯೆ ಹಂತದಲ್ಲಿದ್ದು, ಪೂರ್ಣಗೊಂಡ ಬಳಿಕ ಕಾಮಗಾರಿ ಆರಂಭಿಸಲಾಗುವುದು.
ಪಟ್ಟಣದಲ್ಲಿ ಕೆಯುಐಡಿಎಫ್ಸಿ ಯೋಜನೆಯಡಿ ಅಂದಾಜು 22ಕೋಟಿ ರೂ. ವೆಚ್ಚದಲ್ಲಿ 24/7 ಕುಡಿವ ನೀರಿನ ಕಾಮಗಾರಿ ಆರಂಭವಾಗಿದೆ. ನಗರೋತ್ಥಾನ ಹಾಗೂ ಸಿಎಂ ವಿಶೇಷ ಅನುದಾದಡಿ 4 ಕೋಟಿ 20 ಲಕ್ಷ ರೂ. ವೆಚ್ಚದಲ್ಲಿ ಅಂಬೇಡ್ಕರ್ ವೃತ್ತದಿಂದ ಜೋಗಿ ಕಾಲುವೆ ರಸ್ತೆ ವಿಸ್ತರಣೆ, ರಸ್ತೆ ಅಭಿವೃದ್ಧಿ, ಚರಂಡಿ ನಿರ್ಮಾಣ, ವಾಲ್ಮೀಕಿ ವೃತ್ತ ಸುಂದರೀಕರಣ ಕಾಮಗಾರಿ ಆರಂಭಿಸಲಾಗಿದೆ. ಇದೀಗ ಮಾಡಿರುವ ಕೆಲಸಗಳ ಬಗ್ಗೆ ತೃಪ್ತಿ ಇದೆ.
===
ಪ್ರತಿಪಕ್ಷ ದವರು ಏನಂತಾರೆ
ಕ್ಷೇತ್ರದಲ್ಲಿ ಕಳೆದ 10 ವರ್ಷಗಳ ಎರಡೂ ಅವಧಿಯಲ್ಲಿ ಅಭಿವೃದ್ಧಿ ಕೆಲಸಗಳಲ್ಲಿ ಹಿನ್ನಡೆಯಾಗಿದೆ. ಶಾಸಕ ಟಿ.ಎಚ್.ಸುರೇಶಬಾಬು ಹೇಳಿಕೊಳ್ಳುವಂತಹ ಒಂದೂ ಕೆಲಸವಾಗಿಲ್ಲ. ಕ್ಷೇತ್ರಕ್ಕೆ ಕಾಂಗ್ರೆಸ್ ಸರಕಾರದ ಕೊಡುಗೆಯೂ ಇಲ್ಲ. ಸರಕಾರ ಹೆಸರಿಗೆ ಮಾತ್ರ ಹೊಸ ತಾಲೂಕು ಕೇಂದ್ರ ಮಾಡಿದೆ. ಸರಕಾರದ ನಾನಾ ಇಲಾಖೆಗಳ ಕಾರ್ಯ ಚಟುವಟಿಕೆಗಳು ಆರಂಭವಾಗಿಲ್ಲ. ಸೋಮಪ್ಪ ಕೆರೆ ಅಂಗಳದ ನಿವಾಸಿಗಳನ್ನು ತೆರವುಗೊಳಿಸಿ ಎರಡು ವರ್ಷವಾಗಿದೆ. ಕೆರೆ ಅಭಿವೃದ್ಧಿ ಕಾಮಗಾರಿ ಇನ್ನೂ ಆರಂಭವಾಗಿಲ್ಲ.
-ಕೆ.ಎಂ.ಹೇಮಯ್ಯಸ್ವಾಮಿ, ಜೆಡಿಎಸ್ ಜಿಲ್ಲಾ ಉಪಾಧ್ಯಕ್ಷ , ಕಂಪ್ಲಿ
===
ಕ್ಷೇತ್ರದಲ್ಲಿ 2013-14ನೇ ಸಾಲಿನ ನಗರೋತ್ಥಾನ ಯೋಜನಡಿ ಕಲಬುರಗಿ ವಿಧಾನಸಭೆ ಅಧಿವೇಶನದಲ್ಲಿ ಸುಮಾರು 20 ಕೋಟಿ ರೂ. ಅನುದಾನ ಮಂಜೂರಾಗಿದ್ದು, ಕಾಮಗಾರಿಗಳು ನಿಧಾನಗತಿಯಲ್ಲಿ ಸಾಗಿವೆ. ಶಾಸಕ ಟಿ.ಎಚ್.ಸುರೇಶಬಾಬು ಕ್ಷೇತ್ರದ ಅಭಿವೃದ್ಧಿ ಕೆಲಸಗಳ ಬಗ್ಗೆ ಸರಕಾರದ ಗಮನ ಸೆಳೆದಿಲ್ಲ. ಕ್ಷೇತ್ರಕ್ಕೆ ಬರಬೇಕಾದ ನಿಗದಿತ ಅನುದಾನದಲ್ಲಿ ಕೆಲಸಗಳಾಗಿವೆ. ಇನ್ನಷ್ಟು ಹೆಚ್ಚಿನ ಅಭಿವೃದ್ಧಿ ಕೆಲಸಗಳಾಗಿಲ್ಲ. ಶಾಸಕರು ಕ್ಷೇತ್ರದ ಅಭಿವೃದ್ಧಿ ಬಗ್ಗೆ ವಿಶೇಷ ಆಸಕ್ತಿವಹಿಸಿಲ್ಲ.
-ಸಿ.ಆರ್.ಹನುಮಂತ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ , ಕಂಪ್ಲಿ.
...
ಜನ ಏನಂತಾರೆ
ಇಲ್ಲಿನ ಶಿಬಿರದ ದಿನ್ನಿ ಬಲ ಭಾಗದಲ್ಲಿ 30 ವರ್ಷಗಳ ಹಿಂದೆ, ಪುರಸಭೆಗೆ ನಿವೇಶನ ಒಂದಕ್ಕೆ 350 ರೂ. ಪಾವತಿಸಿದ ಅರ್ಹ ಫಲಾನುಭವಿಗಳಿಗೆ ನಿವೇಶನ ವಿತರಿಸಬೇಕು ಎಂದು ಒತ್ತಾಯಿಸಿ, ಹಲವು ಹೋರಾಟಗಳನ್ನು ಮಾಡಿದೆವು. ಶಾಸಕರು ಅರ್ಹ ಫಲಾನುಭವಿಗಳನ್ನುಆಯ್ಕೆ ಮಾಡಿ, ಆಶ್ರಯ ಸಮಿತಿಗೆ ಪಟ್ಟಿ ನೀಡಿದ್ದಾರೆ. ಇಲ್ಲಿನ ಅಧಿಕಾರಿಗಳು ಇನ್ನೂ ನಿವೇಶನ ಹಂಚಿಲ್ಲ.
-ಬಿ.ಅಬ್ದುಲ್ ರಹೆಮಾನ್, ಕಂಪ್ಲಿ
===
ನೆರೆ ಹಾವಳಿ ಬಂದ ವೇಳೆ, ಅರಳಹಳ್ಳಿ ತಾಂಡಾದಲ್ಲಿ ಕಳೆದ 25 ವರ್ಷಗಳಿಂದ ಬೇರೆಯವರಿಗೆ ಮಂಜೂರಾದ ಮನೆಗಳಲ್ಲಿ 65 ಜನ ವಸತಿ ರಹಿತರು ವಾಸವಾಗಿದ್ದಾರೆ. ವಾಸವಿರುವರಿಗೆ ಮನೆ ಕೊಡಬೇಕು ಎಂದು ಮನವಿ ಮಾಡಲಾಗಿದೆ. ಇನ್ನೂ ಕಾರ್ಯಗತವಾಗಿಲ್ಲ. ತಾಂಡಾದಲ್ಲಿ ಸಮರ್ಪಕ ಕುಡಿವ ನೀರಿನ ವ್ಯವಸ್ಥೆ ಮಾಡಬೇಕು.
-ಯಮುನಪ್ಪ ರಾಥೋಡ್, ಅರಳಹಳ್ಳಿ ತಾಂಡಾ
==
ಜವುಕುನಿಂದ ರೆಗ್ಯುಲೇಟರಿ ಕ್ಯಾಂಪ್ವರೆಗಿನ ಮತ್ತು ಜವುಕುನಿಂದ ದೇವಸಮುದ್ರ ಗ್ರಾಮೀಣ ರಸ್ತೆ ಹಲವು ವರ್ಷಗಳಿಂದ ಹಾಳಾಗಿದೆ. ರೈತರು ಸೇರಿದಂತೆ ಜನರ ಓಡಾಟಕ್ಕೆ ತೊಂದರೆಯಾಗಿದೆ. ಗ್ರಾಮದಲ್ಲಿ ಸರಿಯಾಗಿ ಬೀದಿ ದೀಪ ಅಳವಡಿಸಬೇಕು.
-ಎನ್.ಕುರುಗೋಡಪ್ಪ, ಜವುಕು
===
ದರೋಜಿ ಕೆರೆ ವ್ಯಾಪ್ತಿಯ ಸುಗ್ಗೇನಹಳ್ಳಿ, ಗೋನಾಳು ಒಡ್ಡುಗಟ್ಟುಗಳು ದುರಸ್ತಿಯಲ್ಲಿವೆ. ಇವುಗಳನ್ನು ಸ್ವಲ್ಪ ಎತ್ತರಿಸಿ ಅಭಿವೃದ್ಧಿಪಡಿಸಿದರೆ, ರೈತರ ಹೊಲಗಳಿಗೆ ನೀರು ಸಮರ್ಪಕವಾಗಿ ತಲುಪುತ್ತದೆ. ಗ್ರಾಮದ ಹಿರೇ ಕಾಲುವೆ ಮಾಗಾಣಿ, ಶ್ರೀರಾಮರಂಗಾಪುರದಿಂದ ಸುಗ್ಗೇನಹಳ್ಳಿ ಮಾಗಾಣಿ ರಸ್ತೆ ಅಭಿವೃದ್ಧಿಪಡಿಸಬೇಕು.
-ಎಚ್.ಹನುಮಂತಪ್ಪ, ಸುಗ್ಗೇನಹಳ್ಳಿ
ಈ ಕ್ಷೇತ್ರ ಐತಿಹಾಸಿಕ ಮತ್ತು ಸಾಂಸ್ಕೃತಿಕವಾಗಿ ಶ್ರೀಮಂತವಾಗಿದೆ. ಪಟ್ಟಣ ನೊಳಂಬ ಪಲ್ಲವರ ರಾಜಧಾನಿಯಾಗಿತ್ತು ಎಂದು ಇತಿಹಾಸದಿಂದ ತಿಳಿದು ಬರುತ್ತದೆ. ಕಂಪಿಲರಾಯ ಮತ್ತು ಅವರ ಮಗ ಗಂಡುಗಲಿ ಕುಮಾರರಾಮನ ಕಲಿತನ, ಬಲಿದಾನದಿಂದ ಮಹಾನ್ ವಿಜಯನಗರ ಸಾಮ್ರಾಜ್ಯ ಉದಯವಾಗಲು ಕಾರಣವಾಯಿತು ಎನ್ನಲಾಗುತ್ತದೆ. ನೊಳಂಬರ ಕಾಲದ್ದೆಂದು ಹೇಳುವ ಸೋಮೇಶ್ವರ(ಸೋಮಪ್ಪ) ದೇಗುಲವಿದೆ. ಇಲ್ಲಿನ ಕೋಟೆ ಪ್ರದೇಶದಲ್ಲಿ ವಿಜಯನಗರ ಅರಸರ ಕಾಲಕ್ಕೆ ಸೇರಿದ್ದು ಎನ್ನಲಾದ ಮಹಾದ್ವಾರವಿದೆ. ಇನ್ನೂ ಹಲವಾರು ಪ್ರಾಚೀನ ಸ್ಮಾರಕಗಳು ಇಲ್ಲಿವೆ. ಇದೀಗ ಕಂಪ್ಲಿ ಮತ್ತು ಕುರುಗೋಡು ಹೊಸ ತಾಲೂಕು ಕೇಂದ್ರಗಳಾಗಿವೆ.
ಇತಿಹಾಸ: ಮೊದಲಿಗೆ 'ಕಂಪ್ಲಿ' ಹೊಸಪೇಟೆ ವಿಧಾನಸಭೆ ಕ್ಷೇತ್ರದ ವ್ಯಾಪ್ತಿಯಲ್ಲಿತ್ತು. ಕ್ಷೇತ್ರ ವಿಂಗಡಣೆಗೆ ಬಳಿಕ ಹೊಸ ವಿಧಾನ ಸಭೆ ಕ್ಷೇತ್ರವಾಗಿ ಹೊರ ಹೊಮ್ಮಿತು.
ಈ ಕ್ಷೇತ್ರ ಎಸ್ಟಿ ಮೀಸಲು ಕ್ಷೇತ್ರವಾಗಿದೆ. ಮೊದಲು ನಡೆದ ವಿಧಾನ ಸಭೆ ಚುನಾವಣೆಯಲ್ಲಿ ಬಿಜೆಪಿಯಿಂದ ಟಿ.ಎಚ್.ಸುರೇಶಬಾಬು ಗೆಲುವು ಸಾಧಿಸಿದರು. 2013ರಲ್ಲಿ ನಡೆದ ವಿಧಾನ ಸಭೆ ಚುನಾವಣೆಯಲ್ಲಿ ಬಿಎಸ್ಆರ್ ಕಾಂಗ್ರೆಸ್ನಿಂದ ಸ್ಪರ್ಧಿಸಿ ಪುನರಾಯ್ಕೆಯಾದರು. ನಂತರ ಬಿಜೆಪಿಗೆ ಸೇರಿದರು. ಈ ಕ್ಷೇತ್ರ ಕಂಪ್ಲಿ, ಕುರುಗೋಡು, ಕೋಳೂರು ಫಿರ್ಕಾವನ್ನು ಹೊಂದಿದೆ.
ಅಭಿವೃದ್ಧಿ ಕಾಮಗಾರಿ; ಕಂಪ್ಲಿಯ ಪ್ರಾಥಮಿಕ ಆರೋಗ್ಯ ಕೇಂದ್ರವನ್ನು 30 ಹಾಸಿಗೆಗಳ ಸಮುದಾಯ ಆರೋಗ್ಯ ಕೇಂದ್ರವನ್ನಾಗಿ ಮೇಲ್ದರ್ಜೇಗೇರಿಸಿದ್ದು, ಕಂಪ್ಲಿಯಲ್ಲಿ ಸರಕಾರಿ ಪಾಲಿಟೆಕ್ನಿಕ್ ಆರಂಭಿಸಿದ್ದು, ಕಾಲೇಜ್ ಕಟ್ಟಡ ನಿರ್ಮಾಣ ಬಹುತೇಕ ಪೂರ್ಣಗೊಳ್ಳುವ ಹಂತದಲ್ಲಿದೆ. ಎರ್ರಂಗಳಿ ಬಳಿ ಮೊರಾರ್ಜಿ ದೇಸಾಯಿ ವಸತಿ ಶಾಲೆ, ಕುರುಗೋಡಿನಲ್ಲಿ ಅಗ್ನಿ ಶಾಮಕ ಠಾಣೆ ನೂತನ ಕಟ್ಟಡ ನಿರ್ಮಿಸಲಾಗಿದೆ. ಯಾತ್ರಾರ್ಥಿಗಳ ಅನುಕೂಲಕ್ಕಾಗಿ ಯಾತ್ರಿ ನಿವಾಸ, ಮೊದಲ ದರ್ಜೆ ಕಾಲೇಜಿನ ನೂತನ ಕಟ್ಟಡ ನಿರ್ಮಿಸಲಾಗಿದೆ. ಮುಷ್ಟಗಟ್ಟೆ, ರಾಮಸಾಗರ, ಸಿದ್ದಮ್ಮನಹಳ್ಳಿ ಪ್ರಾಥಮಿಕ ಆರೋಗ್ಯ ಕೇಂದ್ರ ನಿರ್ಮಿಸಲಾಗಿದೆ. ಕಂಪ್ಲಿ, ಎಮ್ಮಿಗನೂರು, ದಮ್ಮೂರು, ಬೈಲೂರಿನಲ್ಲಿ ಕಲ್ಯಾಣ ಮಂಟಪ ನಿರ್ಮಿಸಲಾಗಿದೆ. ಮೆಟ್ರಿಯಲ್ಲಿ 110ಕೆವಿ ಸಬ್ ಸ್ಟೇಷನ್ ನಿರ್ಮಿಸಲಾಗಿದೆ. 20 ಗ್ರಾಮ ಸುವರ್ಣ ಗ್ರಾಮಗಳಾಗಿವೆ. ಕಂಪ್ಲಿಯಲ್ಲಿ ಕುಡಿವ ನೀರನ ಅನುಕೂಲಕ್ಕಾಗಿ 117ಲಕ್ಷ ರೂ ವೆಚ್ಚದಲ್ಲಿ ಓವರ್ ಹೆಡ್ ಟ್ಯಾಂಕ್ ನಿರ್ಮಾಣ, ಅಂಬೇಡ್ಕರ್ ವೃತ್ತದಿಂದ ವಾಲ್ಮೀಕಿ ವೃತ್ತದವರೆಗೆ 117ಲಕ್ಷ ರೂ. ವೆಚ್ಚದಲ್ಲಿ ರಸ್ತೆ ವಿಭಜಕ ನಿರ್ಮಿಸಿ, ಬೀದಿ ದೀಪ, ರಸ್ತೆ ಅಭಿವೃದ್ಧಿ ಪಡಿಸಲಾಗಿದೆ. 8 ಕೋಟಿ ರೂ. ವೆಚ್ಚದಲ್ಲಿ 72 ಶುದ್ಧ ಕುಡಿವ ನೀರಿನ ಘಟಕಗಳನ್ನು ಸ್ಥಾಪಿಸಿದೆ. ಗ್ರಾಮ ವಿಕಾಸ ಯೋಜನೆಯಡಿ 3 ಕೋಟಿ 75ಲಕ್ಷ ರೂ. ವೆಚ್ಚದಲ್ಲಿ ಕರ್ಚೇಡು, ಚಿಟಿಗಿನಹಾಳ್ ಲಕ್ಷ್ಮಿಪುರ, ಹಂದಿಹಾಳ್, ನಂ.2 ಮುದ್ದಾಪುರದಲ್ಲಿ ಅಭಿವೃದ್ಧಿಪಡಿಸಲಾಗಿದೆ. ಗಂಗಾಕಲ್ಯಾಣ, ಶಾಲೆ, ಕಾಲೇಜು ಸ್ಥಾಪನೆಯಂತಹ ಕೆಲಸಗಳಾಗಿವೆ. ಐತಿಹಾಸಿಕ ಸೋಮಪ್ಪ ಕೆರೆಯನ್ನು 8 ಕೋಟಿ 50 ಲಕ್ಷ ರೂ. ವೆಚ್ಚದಲ್ಲಿ ಅಭಿವೃದ್ಧಿ ಪಡಿಸಲು ಟೆಂಡರ್ ಪ್ರಕ್ರಿಯೆ ಪೂರ್ಣಗೊಂಡಿದೆ.
ಸಮಸ್ಯೆಗಳು ಹಲವು: ಪಟ್ಟಣ ಹೊಸ ತಾಲೂಕು ಕೇಂದ್ರವಾಗಿದೆ. ಇದುವರೆಗೂ ಸುಸಜ್ಜಿತವಾದ ಕ್ರೀಡಾಂಗಣವಿಲ್ಲದೇ ಕ್ರೀಡಾಪಟುಗಳಿಗೆ, ವಿದ್ಯಾರ್ಥಿಗಳಿಗೆ ಅಭ್ಯಾಸ ಮಾಡಲು ತೊಂದರೆಯಾಗಿದೆ.
ಇಲ್ಲಿನ ಖಾಸಗಿಯವರು ಸಕ್ಕರೆ ಕಾರ್ಖಾನೆ ಖರೀದಿ ವೇಳೆ ಮಾರಾಟದ ನಿರ್ಬಂಧನೆ ಉಲ್ಲಂಘಿಸಿದೆ ಎಂದು ಕಾರ್ಖಾನೆ ಪುನಶ್ಚೇತನ ಹೋರಾಟ ಸಮಿತಿಯವರು ಹೋರಾಟ ಮಾಡಿದ ಫಲವಾಗಿ, ಕಾರ್ಖಾನೆಗೆ ಸೇರಿದ ಅಂದಾಜು 176 ಎಕರೆ ಜಮೀನು ಸರಕಾರ ವಶಕ್ಕೆ ಪಡೆದಿದೆ. ಈ ಜಾಗದಲ್ಲಿ ಹೊಸ ಸಕ್ಕರೆ ಕಾರ್ಖಾನೆ ಸ್ಥಾಪನೆಯಾದರೆ. ಇಲ್ಲಿನ ವಿದ್ಯಾವಂತ ಯುವಕರಿಗೆ ಉದ್ಯೋಗ ದೊರೆಯಲಿದೆ ಎನ್ನುವುದು ಇಲ್ಲಿನ ಜನರ ಒತ್ತಾಯ.
ಪಟ್ಟಣದ ಹೃದಯ ಭಾಗದಲ್ಲಿನ ಸೋಮಪ್ಪ ಕೆರೆ ಅಭಿವೃದ್ಧಿ ಪಡಿಸಿದರೆ, ಸುಂದರ ವಿಹಾರಧಾಮವಾಗಲಿದೆ. ಆದರೆ ಬೇಗನೇ ಕಾಮಗಾರಿ ಆರಂಭಿಸಬೇಕು ಎಂದು ಸ್ಥಳೀಯರ ಆಗ್ರಹ. ಇಲ್ಲಿನ ಕೋಟೆ ಬಳಿ ತುಂಗಭದ್ರಾ ನದಿಗೆ ಅಡ್ಡಲಾಗಿ ಸೇತುವೆ ನಿರ್ಮಿಸಿದ್ದು, ಶಿಥಿಲವಾಗಿದೆ. ಅಲ್ಲದೇ ಎತ್ತರ ಕಡಿಮೆ ಇದೆ. ಮಳೆಗಾಲದಲ್ಲಿ ನದಿ ತುಂಬಿ ಹರಿದರೆ ಸೇತುವೆ ಮುಳುಗಡೆಯಾಗುತ್ತದೆ. ಸೇತುವೆ ಮೇಲಿಂದ ಕಂಪ್ಲಿ-ಗಂಗಾವತಿ ಸಂಚಾರ ಸ್ಥಗಿತವಾಗುತ್ತದೆ. ಹೊಸ ಸೇತುವೆ ನಿರ್ಮಿಸಬೇಕು ಎನ್ನುವುದು ಸ್ಥಳೀಯರ ಒತ್ತಾಯವಾಗಿದೆ. ಕ್ಷೇತ್ರದ ಶಾಸಕ ಟಿ.ಎಚ್.ಸುರೇಶಬಾಬು ಬೇಲ್ಡೀಲ್ನ ಆರೋಪಕ್ಕೆ ಗುರಿಯಾಗಿದ್ದು, ಕ್ಷೇತ್ರದ ಪಾಲಿಗೆ ಕಪ್ಪು ಚುಕ್ಕೆ. ವಿಧಾನಸಭೆಯಲ್ಲಿ ತೋಳೇರಿಸಿಯೂ ಸದ್ದು ಮಾಡಿದ್ದರು. ಅಂತಹ ಸದ್ದು, ಗದ್ದಲ ಅಭಿವೃದ್ಧಿಯಲ್ಲಿ ಕಾಣಲಿಲ್ಲ ಎನ್ನುವುದ ಕ್ಷೇತ್ರದ ಕೊರಗು.
....
ಶಾಸಕರ ಕಿರು ಸಂದರ್ಶನ
ಪ್ರಶ್ನೆ: ಕ್ಷೇತ್ರದಲ್ಲಿ ಅಷ್ಟಾಗಿ ಅಭಿವೃದ್ಧಿ ಕೆಲಸಗಳಾಗಿಲ್ಲ ಎನ್ನುವ ಆರೋಪವಿದೆಯಲ್ಲ?
ಶಾಸಕ ಟಿ.ಎಚ್.ಸುರೇಶಬಾಬು; ಸತ್ಯಕ್ಕೆ ದೂರವಾದ ಸಂಗತಿ, ಮೊದಲಿಗೆ ಕಂಪ್ಲಿ ಹೊಸಪೇಟೆ ವಿಧಾನಸಭೆ ಕ್ಷೇತ್ರದಲ್ಲಿತ್ತು. ಅಷ್ಟಾಗಿ ಅಭಿವೃದ್ಧಿ ಕೆಲಸಗಳಾಗಿರಲಿಲ್ಲ. ಕ್ಷೇತ್ರವಾಗಿ ಹೊರಹೊಮ್ಮಿದ ಬಳಿಕ ಪ್ರಾಥಮಿಕ ಆರೋಗ್ಯ ಕೇಂದ್ರವನ್ನು, ಸಮುದಾಯ ಆರೋಗ್ಯವಾಗಿ ಮೇಲ್ದರ್ಜೆಗೇರಿಸಲಾಗಿದೆ. ಸರಕಾರಿ ಪಾಲಿಟೆಕ್ನಿಕ್ ಕಾಲೇಜು ಸ್ಥಾಪಿಸಿದೆ. ಇಲ್ಲಿನ ಅಂಬೇಡ್ಕರ್ ವೃತ್ತದಿಂದ ವಾಲೀಕಿ ವೃತ್ತದವರೆಗೆ, ಸಮುದಾಯ ಆರೋಗ್ಯ ಕೇಂದ್ರದಿಂದ ಎಪಿಎಂಸಿವರೆಗೆ ರಸ್ತೆ ಅಭಿವೃದ್ಧಿಪಡಿಸಿದೆ. ರಾಜ್ಯ ಹೆದ್ದಾರಿ, ಜಿಲ್ಲಾ ಮುಖ್ಯ ರಸ್ತೆಗಳನ್ನು ನಿರ್ಮಿಸಿರುವುದು ಸೇರಿದಂತೆ ಕುಡಿವ ನೀರಿನ ಯೋಜನೆ ಒಳಗೊಂಡಂತೆ ಹಲವಾರು ಅಭಿವೃದ್ಧಿ ಕೆಲಸಗಳನ್ನು ಮಾಡಲಾಗಿದೆ. ಪ್ರಸ್ತುತ ಕಾಂಗ್ರೆಸ್ ಸರಕಾರ ಕ್ಷೇತ್ರಕ್ಕೆ ಯಾವುದೇ ವಿಶೇಷ ಅನುದಾನ ನೀಡಿಲ್ಲ. ಆದರೂ ಹಿಂದಿನ ಬಿಜೆಪಿ ಸರಕಾರದ ಕಲಬುರಗಿಯಲ್ಲಿ ನಡೆದ ಅಧಿವೇಶನದಲ್ಲಿ ಮಂಜೂರಾದ ಎಲ್ಲ ಕಾಮಗಾರಿಗಳನ್ನು ಕೈಗೊಳ್ಳಲಾಗಿದೆ. ಕ್ಷೇತ್ರದಲ್ಲಿ ಎರಡು ಪಟ್ಟಣಗಳನ್ನು ಹೊಸ ತಾಲೂಕು ಕೇಂದ್ರವನ್ನಾಗಿಸಲು ಹೋರಾಟ ಸಮಿತಿಯವರ ಜತೆ ಯತ್ನಿಸಿದ್ದೇನೆ.
ಪ್ರಶ್ನೆ: ಕ್ಷೇತ್ರದಲ್ಲಿ ಜನರ ಕೈಗೆ ಸಿಗುವುದಿಲ್ಲ ಎನ್ನುವ ಆರೋಪವಿದೆಯಲ್ಲ?
ಶಾಸಕ: ನಿರಂತರ ಜನರ ಮಧ್ಯೆ ಇದ್ದೇನೆ. ಜತೆಗೆ ಜನರ ಸಂಪರ್ಕದಲ್ಲಿದ್ದೇನೆ. ಜನರ ಸಮಸ್ಯೆ ಅರಿಯಲು ಶಾಸಕರ ಕಚೇರಿ ತೆರೆದಿದ್ದು, ಜನರ ಕಷ್ಟಗಳಿಗೆ ಸಕಾಲಕ್ಕೆ ಸ್ಪಂದಿಸುತ್ತಿದ್ದೇನೆ.
ಪ್ರಶ್ನೆ: ಸೋಮಪ್ಪ ಕೆರೆ ಅಭಿವೃದ್ಧಿ ಬಗ್ಗೆ, ಕ್ಷೇತ್ರದಲ್ಲಿ ಮಾಡಿರುವ ಕೆಲಸಗಳ ಬಗ್ಗೆ ನಿಮ್ಮ ಅಭಿಪ್ರಾಯ?
ಶಾಸಕ: 8 ಕೋಟಿ 10 ಲಕ್ಷ ರೂ. ವೆಚ್ಚದಲ್ಲಿ ಸೋಮಪ್ಪ ಕೆರೆ ಅಭಿವೃದ್ಧಿ ಪಡಿಸಲು ಡಿಪಿಆರ್ ಅನುಮೋದನೆಯಾಗಿದ್ದು, ಟೆಂಡರ್ ಪ್ರಕ್ರಿಯೆ ಹಂತದಲ್ಲಿದ್ದು, ಪೂರ್ಣಗೊಂಡ ಬಳಿಕ ಕಾಮಗಾರಿ ಆರಂಭಿಸಲಾಗುವುದು.
ಪಟ್ಟಣದಲ್ಲಿ ಕೆಯುಐಡಿಎಫ್ಸಿ ಯೋಜನೆಯಡಿ ಅಂದಾಜು 22ಕೋಟಿ ರೂ. ವೆಚ್ಚದಲ್ಲಿ 24/7 ಕುಡಿವ ನೀರಿನ ಕಾಮಗಾರಿ ಆರಂಭವಾಗಿದೆ. ನಗರೋತ್ಥಾನ ಹಾಗೂ ಸಿಎಂ ವಿಶೇಷ ಅನುದಾದಡಿ 4 ಕೋಟಿ 20 ಲಕ್ಷ ರೂ. ವೆಚ್ಚದಲ್ಲಿ ಅಂಬೇಡ್ಕರ್ ವೃತ್ತದಿಂದ ಜೋಗಿ ಕಾಲುವೆ ರಸ್ತೆ ವಿಸ್ತರಣೆ, ರಸ್ತೆ ಅಭಿವೃದ್ಧಿ, ಚರಂಡಿ ನಿರ್ಮಾಣ, ವಾಲ್ಮೀಕಿ ವೃತ್ತ ಸುಂದರೀಕರಣ ಕಾಮಗಾರಿ ಆರಂಭಿಸಲಾಗಿದೆ. ಇದೀಗ ಮಾಡಿರುವ ಕೆಲಸಗಳ ಬಗ್ಗೆ ತೃಪ್ತಿ ಇದೆ.
===
ಪ್ರತಿಪಕ್ಷ ದವರು ಏನಂತಾರೆ
ಕ್ಷೇತ್ರದಲ್ಲಿ ಕಳೆದ 10 ವರ್ಷಗಳ ಎರಡೂ ಅವಧಿಯಲ್ಲಿ ಅಭಿವೃದ್ಧಿ ಕೆಲಸಗಳಲ್ಲಿ ಹಿನ್ನಡೆಯಾಗಿದೆ. ಶಾಸಕ ಟಿ.ಎಚ್.ಸುರೇಶಬಾಬು ಹೇಳಿಕೊಳ್ಳುವಂತಹ ಒಂದೂ ಕೆಲಸವಾಗಿಲ್ಲ. ಕ್ಷೇತ್ರಕ್ಕೆ ಕಾಂಗ್ರೆಸ್ ಸರಕಾರದ ಕೊಡುಗೆಯೂ ಇಲ್ಲ. ಸರಕಾರ ಹೆಸರಿಗೆ ಮಾತ್ರ ಹೊಸ ತಾಲೂಕು ಕೇಂದ್ರ ಮಾಡಿದೆ. ಸರಕಾರದ ನಾನಾ ಇಲಾಖೆಗಳ ಕಾರ್ಯ ಚಟುವಟಿಕೆಗಳು ಆರಂಭವಾಗಿಲ್ಲ. ಸೋಮಪ್ಪ ಕೆರೆ ಅಂಗಳದ ನಿವಾಸಿಗಳನ್ನು ತೆರವುಗೊಳಿಸಿ ಎರಡು ವರ್ಷವಾಗಿದೆ. ಕೆರೆ ಅಭಿವೃದ್ಧಿ ಕಾಮಗಾರಿ ಇನ್ನೂ ಆರಂಭವಾಗಿಲ್ಲ.
-ಕೆ.ಎಂ.ಹೇಮಯ್ಯಸ್ವಾಮಿ, ಜೆಡಿಎಸ್ ಜಿಲ್ಲಾ ಉಪಾಧ್ಯಕ್ಷ , ಕಂಪ್ಲಿ
===
ಕ್ಷೇತ್ರದಲ್ಲಿ 2013-14ನೇ ಸಾಲಿನ ನಗರೋತ್ಥಾನ ಯೋಜನಡಿ ಕಲಬುರಗಿ ವಿಧಾನಸಭೆ ಅಧಿವೇಶನದಲ್ಲಿ ಸುಮಾರು 20 ಕೋಟಿ ರೂ. ಅನುದಾನ ಮಂಜೂರಾಗಿದ್ದು, ಕಾಮಗಾರಿಗಳು ನಿಧಾನಗತಿಯಲ್ಲಿ ಸಾಗಿವೆ. ಶಾಸಕ ಟಿ.ಎಚ್.ಸುರೇಶಬಾಬು ಕ್ಷೇತ್ರದ ಅಭಿವೃದ್ಧಿ ಕೆಲಸಗಳ ಬಗ್ಗೆ ಸರಕಾರದ ಗಮನ ಸೆಳೆದಿಲ್ಲ. ಕ್ಷೇತ್ರಕ್ಕೆ ಬರಬೇಕಾದ ನಿಗದಿತ ಅನುದಾನದಲ್ಲಿ ಕೆಲಸಗಳಾಗಿವೆ. ಇನ್ನಷ್ಟು ಹೆಚ್ಚಿನ ಅಭಿವೃದ್ಧಿ ಕೆಲಸಗಳಾಗಿಲ್ಲ. ಶಾಸಕರು ಕ್ಷೇತ್ರದ ಅಭಿವೃದ್ಧಿ ಬಗ್ಗೆ ವಿಶೇಷ ಆಸಕ್ತಿವಹಿಸಿಲ್ಲ.
-ಸಿ.ಆರ್.ಹನುಮಂತ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ , ಕಂಪ್ಲಿ.
...
ಜನ ಏನಂತಾರೆ
ಇಲ್ಲಿನ ಶಿಬಿರದ ದಿನ್ನಿ ಬಲ ಭಾಗದಲ್ಲಿ 30 ವರ್ಷಗಳ ಹಿಂದೆ, ಪುರಸಭೆಗೆ ನಿವೇಶನ ಒಂದಕ್ಕೆ 350 ರೂ. ಪಾವತಿಸಿದ ಅರ್ಹ ಫಲಾನುಭವಿಗಳಿಗೆ ನಿವೇಶನ ವಿತರಿಸಬೇಕು ಎಂದು ಒತ್ತಾಯಿಸಿ, ಹಲವು ಹೋರಾಟಗಳನ್ನು ಮಾಡಿದೆವು. ಶಾಸಕರು ಅರ್ಹ ಫಲಾನುಭವಿಗಳನ್ನುಆಯ್ಕೆ ಮಾಡಿ, ಆಶ್ರಯ ಸಮಿತಿಗೆ ಪಟ್ಟಿ ನೀಡಿದ್ದಾರೆ. ಇಲ್ಲಿನ ಅಧಿಕಾರಿಗಳು ಇನ್ನೂ ನಿವೇಶನ ಹಂಚಿಲ್ಲ.
-ಬಿ.ಅಬ್ದುಲ್ ರಹೆಮಾನ್, ಕಂಪ್ಲಿ
===
ನೆರೆ ಹಾವಳಿ ಬಂದ ವೇಳೆ, ಅರಳಹಳ್ಳಿ ತಾಂಡಾದಲ್ಲಿ ಕಳೆದ 25 ವರ್ಷಗಳಿಂದ ಬೇರೆಯವರಿಗೆ ಮಂಜೂರಾದ ಮನೆಗಳಲ್ಲಿ 65 ಜನ ವಸತಿ ರಹಿತರು ವಾಸವಾಗಿದ್ದಾರೆ. ವಾಸವಿರುವರಿಗೆ ಮನೆ ಕೊಡಬೇಕು ಎಂದು ಮನವಿ ಮಾಡಲಾಗಿದೆ. ಇನ್ನೂ ಕಾರ್ಯಗತವಾಗಿಲ್ಲ. ತಾಂಡಾದಲ್ಲಿ ಸಮರ್ಪಕ ಕುಡಿವ ನೀರಿನ ವ್ಯವಸ್ಥೆ ಮಾಡಬೇಕು.
-ಯಮುನಪ್ಪ ರಾಥೋಡ್, ಅರಳಹಳ್ಳಿ ತಾಂಡಾ
==
ಜವುಕುನಿಂದ ರೆಗ್ಯುಲೇಟರಿ ಕ್ಯಾಂಪ್ವರೆಗಿನ ಮತ್ತು ಜವುಕುನಿಂದ ದೇವಸಮುದ್ರ ಗ್ರಾಮೀಣ ರಸ್ತೆ ಹಲವು ವರ್ಷಗಳಿಂದ ಹಾಳಾಗಿದೆ. ರೈತರು ಸೇರಿದಂತೆ ಜನರ ಓಡಾಟಕ್ಕೆ ತೊಂದರೆಯಾಗಿದೆ. ಗ್ರಾಮದಲ್ಲಿ ಸರಿಯಾಗಿ ಬೀದಿ ದೀಪ ಅಳವಡಿಸಬೇಕು.
-ಎನ್.ಕುರುಗೋಡಪ್ಪ, ಜವುಕು
===
ದರೋಜಿ ಕೆರೆ ವ್ಯಾಪ್ತಿಯ ಸುಗ್ಗೇನಹಳ್ಳಿ, ಗೋನಾಳು ಒಡ್ಡುಗಟ್ಟುಗಳು ದುರಸ್ತಿಯಲ್ಲಿವೆ. ಇವುಗಳನ್ನು ಸ್ವಲ್ಪ ಎತ್ತರಿಸಿ ಅಭಿವೃದ್ಧಿಪಡಿಸಿದರೆ, ರೈತರ ಹೊಲಗಳಿಗೆ ನೀರು ಸಮರ್ಪಕವಾಗಿ ತಲುಪುತ್ತದೆ. ಗ್ರಾಮದ ಹಿರೇ ಕಾಲುವೆ ಮಾಗಾಣಿ, ಶ್ರೀರಾಮರಂಗಾಪುರದಿಂದ ಸುಗ್ಗೇನಹಳ್ಳಿ ಮಾಗಾಣಿ ರಸ್ತೆ ಅಭಿವೃದ್ಧಿಪಡಿಸಬೇಕು.
-ಎಚ್.ಹನುಮಂತಪ್ಪ, ಸುಗ್ಗೇನಹಳ್ಳಿ