ಆ್ಯಪ್ನಗರ

ಬಿ.ಶ್ರೀರಾಮುಲು ವಿರುದ್ಧ ತಿಪ್ಪೇಸ್ವಾಮಿ ಕಿಡಿ

ಬಿ.ಶ್ರೀರಾಮುಲು ಅವರು ಒಬ್ಬ ನೀಚ ರಾಜಕಾರಣಿ. ಅವರಿಂದ ನನಗೆ ದೊಡ್ಡ ದ್ರೋಹವಾಗಿದೆ. ಈ ಸತ್ಯವನ್ನು ಬಳ್ಳಾರಿ ಜನತೆಗೆ ಹೇಳುವುದಕ್ಕಾಗಿಯೇ ಚುನಾವಣೆಗೆ ಸ್ಪರ್ಧಿಸಿರುವೆ ಎಂದು ಪಕ್ಷೇತರ ಅಭ್ಯರ್ಥಿ, ಮಾಜಿ ಶಾಸಕ ತಿಪ್ಪೇಸ್ವಾಮಿ ಹೇಳಿದರು.

Vijaya Karnataka 17 Oct 2018, 12:00 am
ಬಳ್ಳಾರಿ: ಬಿ.ಶ್ರೀರಾಮುಲು ಅವರು ಒಬ್ಬ ನೀಚ ರಾಜಕಾರಣಿ. ಅವರಿಂದ ನನಗೆ ದೊಡ್ಡ ದ್ರೋಹವಾಗಿದೆ. ಈ ಸತ್ಯವನ್ನು ಬಳ್ಳಾರಿ ಜನತೆಗೆ ಹೇಳುವುದಕ್ಕಾಗಿಯೇ ಚುನಾವಣೆಗೆ ಸ್ಪರ್ಧಿಸಿರುವೆ ಎಂದು ಪಕ್ಷೇತರ ಅಭ್ಯರ್ಥಿ, ಮಾಜಿ ಶಾಸಕ ತಿಪ್ಪೇಸ್ವಾಮಿ ಹೇಳಿದರು.
Vijaya Karnataka Web thippeswamy blasts against b sriramulu
ಬಿ.ಶ್ರೀರಾಮುಲು ವಿರುದ್ಧ ತಿಪ್ಪೇಸ್ವಾಮಿ ಕಿಡಿ


ಲೋಕಸಭೆ ಉಪಚುನಾವಣೆಗೆ ನಾಮಪತ್ರ ಸಲ್ಲಿಸಿದ ಬಳಿಕ ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡಿದರು. ಬಿ.ಶ್ರೀರಾಮುಲು ಒಬ್ಬ ನಾಟಕಕಾರ, ಸುಳ್ಳಿನ ಸರದಾರ. ಬಳ್ಳಾರಿ ಕ್ಷೇತ್ರದ ಜನರ ಒತ್ತಾಯದ ಮೇರೆಗೆ ಸ್ಪರ್ಧೆ ಮಾಡಿದ್ದೇನೆ. ಬಿ.ಶ್ರೀರಾಮುಲು ಮೂಲತಃ ಆಂಧ್ರದವರಾಗಿದ್ದರೆ. ಅವರೇನೂ ಬಳ್ಳಾರಿ ಜಿಲ್ಲೆಯವರಲ್ಲ. ಆಂಧ್ರದಲ್ಲಿ ಭೋಯಾ ಸಮಾಜದವರು. ಕರ್ನಾಟಕದಲ್ಲಿ ನಾಯಕ ಸಮಾಜ ಅಂತಾ ಸುಳ್ಳು ಹೇಳಿಕೊಳ್ಳುತ್ತಿದ್ದಾರೆ. ಬಿಜೆಪಿ ಪಕ್ಷವನ್ನು ಮುಗಿಸಲು ಬಿ.ಶ್ರೀರಾಮುಲು ಒಬ್ಬರೇ ಸಾಕು ಎಂದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ