ಆ್ಯಪ್ನಗರ

ಗುಳೆ ಹೋದವರು, ಮತದಾನಕ್ಕೆ ವಾಪಸ್‌

ಜೀವನ ನಿರ್ವಹಣೆಗಾಗಿ ಕೂಲಿ ಅರಸಿ ನಗರ ಪ್ರದೇಶಗಳಿಗೆ ಗುಳೆ ಹೋಗಿದ್ದ ಕೂಲಿಕಾರ್ಮಿಕರು ಚುನಾವಣೆಯಲ್ಲಿ ಮತದಾನಕ್ಕಾಗಿ ಶುಕ್ರವಾರ ಬೆಳಗಿನ ಜಾವ ವಾಪಾಸ್‌ ಆಗಮಿಸಿದರು.

Vijaya Karnataka 12 May 2018, 5:00 am
ಸಿರುಗುಪ್ಪ : ಜೀವನ ನಿರ್ವಹಣೆಗಾಗಿ ಕೂಲಿ ಅರಸಿ ನಗರ ಪ್ರದೇಶಗಳಿಗೆ ಗುಳೆ ಹೋಗಿದ್ದ ಕೂಲಿಕಾರ್ಮಿಕರು ಚುನಾವಣೆಯಲ್ಲಿ ಮತದಾನಕ್ಕಾಗಿ ಶುಕ್ರವಾರ ಬೆಳಗಿನ ಜಾವ ವಾಪಾಸ್‌ ಆಗಮಿಸಿದರು.
Vijaya Karnataka Web BLR-BLY11SGP6


ತಾಲೂಕಿನಲ್ಲಿ ಕಳೆದ 3 ವರ್ಷಗಳಿಂದ ಸಮರ್ಪಕ ಮಳೆ ಇಲ್ಲದೇ ಜನ ಸಂಕಷ್ಟ ಎದುರಿಸುತ್ತಿದ್ದಾರೆ. ಕೂಲಿಯೇ ದೊರೆಯದ ಹಿನ್ನೆಲೆಯಲ್ಲಿ ತೆಕ್ಕಲಕೋಟೆ ಭಾಗದ ನೂರಾರು ಕುಟುಂಬ ಬೆಂಗಳೂರು ಸೇರಿದಂತೆ ಇತರ ಕಡೆಗೆ ಗುಳೆ ಹೋಗಿದ್ದವು. ಇದೀಗ ರಾಜಕೀಯ ಪಕ್ಷದವರು ಅವರನ್ನು ಸಂಪರ್ಕಿಸಿ, ಮನವೊಲಿಸಿದ ಹಿನ್ನೆಲೆಯಲ್ಲಿ ಆಗಮಿಸುತ್ತಿದ್ದಾರೆ. ಪ್ರತ್ಯೇಕ ಖಾಸಗಿ ಬಸ್‌ಗಳನ್ನು ಮಾಡಿಕೊಂಡು ಇಲ್ಲಿಗೆ ಬಂದಿಳಿಯುತ್ತಿದ್ದಾರೆ. ತೆಕ್ಕಲಕೋಟೆ ಪಟ್ಟಣವೊಂದರಲ್ಲಿಯೇ ಸುಮಾರು 150 ಕ್ಕೂ ಹೆಚ್ಚು ಕುಟುಂಬಗಳು ಬೆಳಗ್ಗೆ ಖಾಸಗಿ ಬಸ್‌ಗಳಲ್ಲಿ ಆಗಮಿಸಿದವು. ಪ್ರತಿ ಬಾರಿಯೂ ಮತ ಹಾಕುವುದಕ್ಕಾಗಿಯೇ ಇವರನ್ನು ಕರೆಯಿಸಿಕೊಂಡು ವಾಪಸ್‌ ಕಳುಹಿಸುವುದು ಸಾಮಾನ್ಯವಾಗಿದ್ದು, ಈಬಾರಿಯೂ ಗುಳೆ ಹೋದವರ ಮತಗಳ ಮೇಲೆ ರಾಜಕೀಯ ಪಕ್ಷಗಳು ಕಣ್ಣಿಟ್ಟಿವೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ